ಧಾರವಾಡ: ಸತತ 4ನೇ ವರ್ಷವೂ ನಡೆಯದ ಮಾವು ಮೇಳ, ಬೆಳೆಗಾರರಲ್ಲಿ ನಿರಾಶೆ
1069 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಧಾರವಾಡ: ಮಾವು ಹಣ್ಣುಗಳು ರಾಜಾ ಎಂದೇ ಕರೆಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮಾವು ಬೆಳೆಯನ್ನು ಎತ್ತೇಚ್ಛವಾಗಿ ಧಾರವಾಡ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಅದರಲ್ಲೂ ಆಲ್ಫಾನ್ಸೋ ಮಾವಿನ ತಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಮಾವು ಬೆಳೆಯುತಿದ್ದರೂ, ಈ ವರ್ಷ ಸಹ ಮಾವು ಮೇಳೆ ನಡೆಸಲಾಗಿಲ್ಲ. ಸತತ 4ನೇ ವರ್ಷವೂ ಮಾವಿನ ಮೇಳ ನಡೆಯಲಿಲ್ಲ. ಇದರಿಂದ ಮಾವು ಪ್ರಿಯರಲ್ಲಿ ಹಾಗೂ ಬೆಳೆಗಾರರಲ್ಲಿ ನಿರಾಶೆ ಮೂಡಿದೆ.
ಪ್ರತಿ ವರ್ಷ ಮೇ ತಿಂಗಳ 2 ಅಥವಾ 3ನೇ ವಾರ ಮಾವು ಮೇಳ ನಡೆಯುತ್ತದೆ. ಧಾರವಾಡದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ನಡೆಯುವ ಈ ಮಾವು ಮೇಳದಲ್ಲಿ 100-150 ಟನ್ ಮಾವು ಮಾರಾಟವಾಗಿ ಒಂದು ಕೋಟಿ ರೂಪಾಯಿ ವರೆಗೂ ವಹಿವಾಟು ಆಗುತ್ತಿತ್ತು. ಮೇಳಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ಇತ್ತು. 2019 ಮೇ ತಿಂಗಳಲ್ಲಿ ನಡೆದ ಮೂರು ದಿನಗಳ ಮಾವು ಮೇಳಕ್ಕೆ ಗ್ರಾಹಕರು ಮತ್ತು ರೈತರಿಂದ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಇದರಿಂದ ಮಾವಿನ ಹಣ್ಣಿನ ಮಾರಾಟವೂ ಹೆಚ್ಚಿತ್ತು. ಜತೆಗೆ ಅಪರೂಪದ ವಿವಿಧ ತಳಿಯ ಮಾವುಗಳ ಪ್ರದರ್ಶನವೂ ಗಮನ ಸೆಳೆದಿತ್ತು.
ಈ ಬಾರಿ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿಯೇ ಮಾವು ಮೇಳ ಆಯೋಜಿಸಲು ನಿರ್ಧರಿಸಿತ್ತು. ಆದರೆ, ಮಾವು ಇಳುವರಿ ಕುಸಿತ, ಅನುದಾನದ ಕೊರತೆ ನೆಪ ಹೇಳಿ, ಮಾವು ಮೇಳ ಇಲ್ಲದಂತಾಗಿದೆ ಎನ್ನುತ್ತಾರೆ ಮಾವು ಬೆಳೆಗಾರರು.
ಪ್ರತಿ ವರ್ಷ ಮೇ ತಿಂಗಳ 2 ಅಥವಾ 3ನೇ ವಾರ ಮಾವು ಮೇಳ ನಡೆಯುತ್ತದೆ. ಧಾರವಾಡದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ನಡೆಯುವ ಈ ಮಾವು ಮೇಳದಲ್ಲಿ 100-150 ಟನ್ ಮಾವು ಮಾರಾಟವಾಗಿ ಒಂದು ಕೋಟಿ ರೂಪಾಯಿ ವರೆಗೂ ವಹಿವಾಟು ಆಗುತ್ತಿತ್ತು. ಮೇಳಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ಇತ್ತು. 2019 ಮೇ ತಿಂಗಳಲ್ಲಿ ನಡೆದ ಮೂರು ದಿನಗಳ ಮಾವು ಮೇಳಕ್ಕೆ ಗ್ರಾಹಕರು ಮತ್ತು ರೈತರಿಂದ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಇದರಿಂದ ಮಾವಿನ ಹಣ್ಣಿನ ಮಾರಾಟವೂ ಹೆಚ್ಚಿತ್ತು. ಜತೆಗೆ ಅಪರೂಪದ ವಿವಿಧ ತಳಿಯ ಮಾವುಗಳ ಪ್ರದರ್ಶನವೂ ಗಮನ ಸೆಳೆದಿತ್ತು.
ಈ ಬಾರಿ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿಯೇ ಮಾವು ಮೇಳ ಆಯೋಜಿಸಲು ನಿರ್ಧರಿಸಿತ್ತು. ಆದರೆ, ಮಾವು ಇಳುವರಿ ಕುಸಿತ, ಅನುದಾನದ ಕೊರತೆ ನೆಪ ಹೇಳಿ, ಮಾವು ಮೇಳ ಇಲ್ಲದಂತಾಗಿದೆ ಎನ್ನುತ್ತಾರೆ ಮಾವು ಬೆಳೆಗಾರರು.