Dharwad: ಸ್ವಾತಂತ್ರ್ಯ ಬಂದು 75 ವರ್ಷಗಳಾದ್ರೂ ರೈತನ ಹೊಲಗಳಿಗಿಲ್ಲ ಸರಿಯಾದ ರಸ್ತೆ! ಅನ್ನದಾತರಿಂದ ಸರ್ಕಾರಕ್ಕೆ ಹಿಡಿಶಾಪ
1003 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಜನಪ್ರತಿನಿಧಿಗಳು ರೈತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ. ಆದ್ರೇ ಅದೇ ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದರು ಕೂಡಾ ನಾಯಕರುಗಳು ಆಲಿಸುವುದೇ ಇಲ್ಲಾ ಎಂಬುದಕ್ಕೆ ಈ ದೃಶ್ಯಗಳು ಸಾಕ್ಷಿ. ದೇಶಕ್ಕೆ ಸ್ವಾತಂತ್ರ್ಯ ಬಂದೂ 75 ವರ್ಷ ಗತಿಸುತ್ತಲಿದ್ದರೂ, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ರೈತರು ತಮ್ಮ ಹೊಲಕ್ಕೆ ಹೋಗಲು ನರಕಯಾತನೆ ಪಡ್ತಾ ಇದ್ದಾರೆ. ಇನ್ನೂ ಕೆಲ ರೈತರು ಹೊಲಕ್ಕೆ ದಾರಿ ಇಲ್ಲ ಎಂಬ ಕಾರಣಕ್ಕೆ ಹೊಲ ಉತ್ತದೆ ಬಿತ್ತದೆ ಕೈ ಬಿಟ್ಟಿದ್ದಾರಂತೆ. ಅಷ್ಟರಮಟ್ಟಿಗೆ ರಸ್ತೆ ಸ್ಥಿತಿ ಹದಗೆಟ್ಟಿದೆ.
ಹೀಗೆ ಈ ತರಹದ ಅವ್ಯವಸ್ಥೆ ಸುಳಿಯಲ್ಲೇ ಸಿಲುಕಿರುವ ಚಾಕಲಬ್ಬಿ ಗ್ರಾಮಸ್ಥರು ಚಾಕಲಬ್ಬಿಯಿಂದ ಹಿರೇಗುಂಜಳಕ್ಕೆ ಸಂಪರ್ಕ ಮಾಡೋ ಕೇವಲ 4 ಕಿಲೋಮೀಟರ್ ರಸ್ತೆಗೆ ಇಂದಿಗೂ ಹಿಡಿ ಮಣ್ಣು ಬಿದ್ದಿಲ್ಲಾ ಎಂದರೆ ವಿಪರ್ಯಾಸವೇ ಸರಿ. ರಸ್ತೆ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ಚಾಕಲಬ್ಬಿ ಗ್ರಾಮಸ್ಥರು ರಸ್ತೆಗಾಗಿ ಎಂಎಲ್ಎ, ಎಂಪಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ಚಪ್ಪಲಿ ಸವೆಸಿದರು ಪ್ರಯೋಜನ ಆಗಿಲ್ಲ. ಇದರಿಂದ ಇದೇ ರಸ್ತೆಯಲ್ಲಿ ಮಳೆಯಾದ್ರೇ ಚಪ್ಪಲಿ ಕೈಯಲ್ಲಿ ಹಿಡಿದು ರೈತಾಪಿ ಜನ ಕಾಯಕಕ್ಕೆ ಜಮೀನಿಗೆ ತೆರಳುತ್ತಿದ್ದಾರೆ.
ಈ ದಾರಿಗೆ ಹೊಂದಿಕೊಂಡೇ ಚಾಕಲಬ್ಬಿ ರೈತರ ನೂರಾರು ಎಕರೆ ಜಮೀನು ಇವೆ. ಆದರೆ, ಅವುಗಳಿಗೆ ಸಂಪರ್ಕಿಸುವ ರಸ್ತೆ ಮಾತ್ರ ಕಸ, ಕಡ್ಡಿ, ರಾಡಿ, ನೀರು ಸಂಗ್ರಹವಾಗಿ ಬೃಹತ್ ತಗ್ಗು ಬಿದ್ದಿವೆ. ಈ ರಸ್ತೆಯಲ್ಲಿ ರೈತರು ಹರಸಾಹಸ ಪಟ್ಟು ಟ್ರ್ಯಾಕ್ಟರ್ ಓಡಿಸಬೇಕು ಅದು ಹಾಳಾದ್ರೂ ಸರಿ, ಇನ್ನು ಚಕ್ಕಡಿ ಎತ್ತು ಇಲ್ಲಿ ಹೋಗೋದೆ ಇಲ್ಲಾ ಬಿಡಿ ಅಷ್ಟರಮಟ್ಟಿಗೆ ರಸ್ತೆ ಹಾಳಾಗಿದೆ.
ಹೀಗೆ ಈ ತರಹದ ಅವ್ಯವಸ್ಥೆ ಸುಳಿಯಲ್ಲೇ ಸಿಲುಕಿರುವ ಚಾಕಲಬ್ಬಿ ಗ್ರಾಮಸ್ಥರು ಚಾಕಲಬ್ಬಿಯಿಂದ ಹಿರೇಗುಂಜಳಕ್ಕೆ ಸಂಪರ್ಕ ಮಾಡೋ ಕೇವಲ 4 ಕಿಲೋಮೀಟರ್ ರಸ್ತೆಗೆ ಇಂದಿಗೂ ಹಿಡಿ ಮಣ್ಣು ಬಿದ್ದಿಲ್ಲಾ ಎಂದರೆ ವಿಪರ್ಯಾಸವೇ ಸರಿ. ರಸ್ತೆ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ಚಾಕಲಬ್ಬಿ ಗ್ರಾಮಸ್ಥರು ರಸ್ತೆಗಾಗಿ ಎಂಎಲ್ಎ, ಎಂಪಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ಚಪ್ಪಲಿ ಸವೆಸಿದರು ಪ್ರಯೋಜನ ಆಗಿಲ್ಲ. ಇದರಿಂದ ಇದೇ ರಸ್ತೆಯಲ್ಲಿ ಮಳೆಯಾದ್ರೇ ಚಪ್ಪಲಿ ಕೈಯಲ್ಲಿ ಹಿಡಿದು ರೈತಾಪಿ ಜನ ಕಾಯಕಕ್ಕೆ ಜಮೀನಿಗೆ ತೆರಳುತ್ತಿದ್ದಾರೆ.
ಈ ದಾರಿಗೆ ಹೊಂದಿಕೊಂಡೇ ಚಾಕಲಬ್ಬಿ ರೈತರ ನೂರಾರು ಎಕರೆ ಜಮೀನು ಇವೆ. ಆದರೆ, ಅವುಗಳಿಗೆ ಸಂಪರ್ಕಿಸುವ ರಸ್ತೆ ಮಾತ್ರ ಕಸ, ಕಡ್ಡಿ, ರಾಡಿ, ನೀರು ಸಂಗ್ರಹವಾಗಿ ಬೃಹತ್ ತಗ್ಗು ಬಿದ್ದಿವೆ. ಈ ರಸ್ತೆಯಲ್ಲಿ ರೈತರು ಹರಸಾಹಸ ಪಟ್ಟು ಟ್ರ್ಯಾಕ್ಟರ್ ಓಡಿಸಬೇಕು ಅದು ಹಾಳಾದ್ರೂ ಸರಿ, ಇನ್ನು ಚಕ್ಕಡಿ ಎತ್ತು ಇಲ್ಲಿ ಹೋಗೋದೆ ಇಲ್ಲಾ ಬಿಡಿ ಅಷ್ಟರಮಟ್ಟಿಗೆ ರಸ್ತೆ ಹಾಳಾಗಿದೆ.