ಗ್ಯಾಸ್ ಏಜೆನ್ಸಿಗಳ ಮುಂದೆ ಜನವೋ ಜನ, ಇ-ಕೆವೈಸಿ ಅಪ್ಡೇಟ್ ಮಾಡಿಸಲು ತರಾತುರಿ
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಕೊಡ್ತಾರಂತೆ ಅಂತ ಹುಬ್ಬಳ್ಳಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸುದ್ದಿ ಹರಡುತ್ತಿದ್ದಂತೆ ಗ್ಯಾಸ್ ಅಂಗಡಿ, ಆಫೀಸ್ಗಳ ಮುಂದೆ ಜನರು ಜಮಾಯಿಸಿದರು.
ಗ್ಯಾಸ್ ಸಿಲಿಂಡರ್ ವಿತರಕ ಏಜೆನ್ಸಿಗಳಲ್ಲಿ ಜನರು ಇ-ಕೆವೈಸಿಗೆ ದುಂಬಾಲು ಬಿದ್ದಿದ್ದಾರೆ. ಆದರೆ, ಈ ಬಗ್ಗೆ ಸಾರ್ವಜನಿಕರು ಹಾಗೂ ವಿತರಕರಲ್ಲಿ ಸರಿಯಾದ ಮಾಹಿತಿ ಇಲ್ಲ. 200 ರಿಂದ 300 ರೂಪಾಯಿಗೆ ಪ್ರಧಾನಿ ಮೋದಿ ಅವರು ಸಿಲಿಂಡರ್ ಕೊಡ್ತಾರೆ ಎಂಬ ವದಂತಿ ಹಬ್ಬಿದೆ. ಕೇಂದ್ರ ಪೆಟ್ರೋಲಿಯಂ ಇಲಾಖೆಯಿಂದ ಗ್ರಾಹಕರಿಂದ ಇ-ಕೆವೈಸಿ ಮಾಡಿಸಿ ಎಂದು ಆದೇಶ ಬಂದಿದ್ದು, ಅದರಂತೆ ಎಲ್ಲರ ಇ-ಕೆವೈಸಿ ಪಡೆದುಕೊಳ್ಳಿ ಎಂದು ಗ್ಯಾಸ್ ಸಿಲಿಂಡರ್ ವಿತರಕರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ ಇ-ಕೆವೈಸಿ ಯಾಕೆ ಎಂಬುದು ಏಜೆನ್ಸಿ ಮಾಲೀಕರಿಗೂ ಗೊತ್ತಿಲ್ಲ.
ಹುಬ್ಬಳ್ಳಿಯ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಜನರು ಗ್ಯಾಸ್ ಸಿಲಿಂಡರ್ ವಿತರಕ ಏಜೆನ್ಸಿಗಳ ಬಳಿ ಬೆಳಗ್ಗಿನಿಂದಲೇ ಸಾಲುಗಟ್ಟಿ ನಿಂತಿದ್ದಾರೆ. ಏಜೆನ್ಸಿಗಳಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡು, ಇ-ಕೆವೈಸಿ ಅಪ್ಡೇಟ್ಗೂ ಸಮಸ್ಯೆಯಾಗಿದೆ. ಇದರಿಂದ ಜನರು ಮತ್ತಷ್ಟು ಕಾಯುವಂತಾಗಿದೆ. ಡಿಸೆಂಬರ್ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಹಲವು ಗ್ಯಾಸ್ ಏಜೆನ್ಸಿಗಳು ಹೇಳುತ್ತಿವೆ.
ಕೇಂದ್ರ ಸರಕಾರದ ಉಜ್ವಲ ಯೋಜನೆಯಲ್ಲಿ ಕಡಿಮೆ ದರದಲ್ಲಿ ಬಡವರಿಗೆ ಸಿಲಿಂಡರ್ ನೀಡಲಾಗುತ್ತಿದೆ. ಐದು ರಾಜ್ಯಗಳ ಚುನಾವಣೆಗೂ ಮುನ್ನ ಸಿಲಿಂಡರ್ ದರದಲ್ಲಿ 200 ರೂಪಾಯಿ ಸಬ್ಸಿಡಿ ಘೋಷಣೆ ಮಾಡಲಾಗಿತ್ತು. ಈ ವೇಳೆ ಹಲವು ಕಡೆ ಉಜ್ವಲ ಮತ್ತು ಸಬ್ಸಿಡಿ ಸಿಲಿಂಡರ್ಗಳನ್ನು ವಾಣಿಜ್ಯ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರು ಇದೆ. ಅದನ್ನು ತಡೆಗಟ್ಟಲು ಇ-ಕೆವೈಸಿ ಮಾಡಿಸಿ ಎಂದು ಕೇಂದ್ರ ಪೆಟ್ರೋಲಿಯಂ ಇಲಾಖೆ ಸೂಚನೆ ನೀಡಿರಬಹುದು ಎಂದು ಕೆಲ ವಿತರಕರು ಅಭಿಪ್ರಾಯ ಪಟ್ಟಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪೂರ ರಸ್ತೆಯಲ್ಲಿರೋ ಸ್ವಸ್ತಿಕ್ ಗ್ಯಾಸ್ ಏಜನ್ಸಿ , ರೇಣುಕಾ ಗ್ಯಾಸ್ ಕಚೇರಿ, ಕಾಪಿಕರ್ ರಸ್ತೆಯ ಭಾರತ್ ಗ್ಯಾಸ್ ಎಜೆನ್ಸಿ ಎದುರು ಜನ ಸೇರುತ್ತಿದ್ದಾರೆ. ಹಲವು ಕಡೆ ಜನರು ಸಾಲುಗಟ್ಟಿರುವ ದೃಶ್ಯಗಳು ಸಾಮಾನ್ಯವಾಗಿದೆ.
ಗ್ಯಾಸ್ ಸಿಲಿಂಡರ್ ವಿತರಕ ಏಜೆನ್ಸಿಗಳಲ್ಲಿ ಜನರು ಇ-ಕೆವೈಸಿಗೆ ದುಂಬಾಲು ಬಿದ್ದಿದ್ದಾರೆ. ಆದರೆ, ಈ ಬಗ್ಗೆ ಸಾರ್ವಜನಿಕರು ಹಾಗೂ ವಿತರಕರಲ್ಲಿ ಸರಿಯಾದ ಮಾಹಿತಿ ಇಲ್ಲ. 200 ರಿಂದ 300 ರೂಪಾಯಿಗೆ ಪ್ರಧಾನಿ ಮೋದಿ ಅವರು ಸಿಲಿಂಡರ್ ಕೊಡ್ತಾರೆ ಎಂಬ ವದಂತಿ ಹಬ್ಬಿದೆ. ಕೇಂದ್ರ ಪೆಟ್ರೋಲಿಯಂ ಇಲಾಖೆಯಿಂದ ಗ್ರಾಹಕರಿಂದ ಇ-ಕೆವೈಸಿ ಮಾಡಿಸಿ ಎಂದು ಆದೇಶ ಬಂದಿದ್ದು, ಅದರಂತೆ ಎಲ್ಲರ ಇ-ಕೆವೈಸಿ ಪಡೆದುಕೊಳ್ಳಿ ಎಂದು ಗ್ಯಾಸ್ ಸಿಲಿಂಡರ್ ವಿತರಕರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ ಇ-ಕೆವೈಸಿ ಯಾಕೆ ಎಂಬುದು ಏಜೆನ್ಸಿ ಮಾಲೀಕರಿಗೂ ಗೊತ್ತಿಲ್ಲ.
ಹುಬ್ಬಳ್ಳಿಯ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಜನರು ಗ್ಯಾಸ್ ಸಿಲಿಂಡರ್ ವಿತರಕ ಏಜೆನ್ಸಿಗಳ ಬಳಿ ಬೆಳಗ್ಗಿನಿಂದಲೇ ಸಾಲುಗಟ್ಟಿ ನಿಂತಿದ್ದಾರೆ. ಏಜೆನ್ಸಿಗಳಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡು, ಇ-ಕೆವೈಸಿ ಅಪ್ಡೇಟ್ಗೂ ಸಮಸ್ಯೆಯಾಗಿದೆ. ಇದರಿಂದ ಜನರು ಮತ್ತಷ್ಟು ಕಾಯುವಂತಾಗಿದೆ. ಡಿಸೆಂಬರ್ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಹಲವು ಗ್ಯಾಸ್ ಏಜೆನ್ಸಿಗಳು ಹೇಳುತ್ತಿವೆ.
ಕೇಂದ್ರ ಸರಕಾರದ ಉಜ್ವಲ ಯೋಜನೆಯಲ್ಲಿ ಕಡಿಮೆ ದರದಲ್ಲಿ ಬಡವರಿಗೆ ಸಿಲಿಂಡರ್ ನೀಡಲಾಗುತ್ತಿದೆ. ಐದು ರಾಜ್ಯಗಳ ಚುನಾವಣೆಗೂ ಮುನ್ನ ಸಿಲಿಂಡರ್ ದರದಲ್ಲಿ 200 ರೂಪಾಯಿ ಸಬ್ಸಿಡಿ ಘೋಷಣೆ ಮಾಡಲಾಗಿತ್ತು. ಈ ವೇಳೆ ಹಲವು ಕಡೆ ಉಜ್ವಲ ಮತ್ತು ಸಬ್ಸಿಡಿ ಸಿಲಿಂಡರ್ಗಳನ್ನು ವಾಣಿಜ್ಯ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರು ಇದೆ. ಅದನ್ನು ತಡೆಗಟ್ಟಲು ಇ-ಕೆವೈಸಿ ಮಾಡಿಸಿ ಎಂದು ಕೇಂದ್ರ ಪೆಟ್ರೋಲಿಯಂ ಇಲಾಖೆ ಸೂಚನೆ ನೀಡಿರಬಹುದು ಎಂದು ಕೆಲ ವಿತರಕರು ಅಭಿಪ್ರಾಯ ಪಟ್ಟಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪೂರ ರಸ್ತೆಯಲ್ಲಿರೋ ಸ್ವಸ್ತಿಕ್ ಗ್ಯಾಸ್ ಏಜನ್ಸಿ , ರೇಣುಕಾ ಗ್ಯಾಸ್ ಕಚೇರಿ, ಕಾಪಿಕರ್ ರಸ್ತೆಯ ಭಾರತ್ ಗ್ಯಾಸ್ ಎಜೆನ್ಸಿ ಎದುರು ಜನ ಸೇರುತ್ತಿದ್ದಾರೆ. ಹಲವು ಕಡೆ ಜನರು ಸಾಲುಗಟ್ಟಿರುವ ದೃಶ್ಯಗಳು ಸಾಮಾನ್ಯವಾಗಿದೆ.