ಹುಬ್ಬಳ್ಳಿ: ಹೋಳಿ ಹಬ್ಬಕ್ಕೆ ಲಗ್ಗೆ ಇಟ್ಟಿವೆ ಥರಥರದ ತಮಟೆಗಳು, ಖರೀದಿ ಬಲು ಜೋರು
1088 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ಹೋಳಿ ಹಬ್ಬಬಂತಂದ್ರೆ ಸಾಕು, ವಾಣಿಜ್ಯ ನಗರಿ ಬೀದಿ ಬೀದಿಗಳಲ್ಲಿ ತಮಟೆ ಹಾಗೂ ಹಲಗೆ ಸದ್ದು ರಿಂಗಣಿಸುತ್ತದೆ. ವಾಣಿಜ್ಯ ನಗರಿಯಲ್ಲಿ ರಂಗ ಪಂಚಮಿ ರಂಗೇರುತ್ತಿದೆ. ಪಂಚಮಿಗಾಗಿಯೇ ಹುಬ್ಬಳ್ಳಿ ಮಾರುಕಟ್ಟೆಗೆ ಹಲಗೆಗಳು ಲಗ್ಗೆ ಇಟ್ಟಿವೆ, ಹಲಗೆ ಮಾರಾಟ ಜೋರಾಗಿದೆ.
ಪುಣೆ, ಬಾಗಲಕೋಟೆ, ಬೆಳಗಾವಿ, ವಿಜಯಪುರ ಬಿಟ್ಟರೆ ಹೋಳಿಯ ರಂಗು ನೋಡಬೇಕೆಂದರೆ ಅದು ಹುಬ್ಬಳ್ಳಿಯಲ್ಲಿ ಮಾತ್ರ. ರಂಗಿನಾಟದ ಹೋಳಿ ಹುಣ್ಣಿಮೆ ಪ್ರಮುಖ ಆಕರ್ಷಣೆಯೇ ಹಲಗೆ. ಹೀಗಾಗಿ ಹಲಗೆಗಳಿಗೆ ಭಾರಿ ಬೇಡಿಕೆ ಬಂದಿದೆ. ಗ್ರಾಹಕರು ವಿವಿಧ ಬಗೆಯ ಹಲಗೆಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ.
ಹಿಂದಿನಿಂದಲೂ ಚರ್ಮದ ಹಲಗೆಗೆ ಬೇಡಿಕೆ ಹೆಚ್ಚು. ಫೈಬರ್, ಪ್ಲಾಸ್ಟಿಕ್ ತಮಟೆಗಳು ಕೂಡ ಇತ್ತೀಚೆಗೆ ಬೇಡಿಕೆ ಹೆಚ್ಚಿಸಿಕೊಂಡಿವೆ. ಹೋಳಿ ಹುಣ್ಣಿಮೆಯಾಗಿ ಐದನೇ ದಿನ ಹುಬ್ಬಳ್ಳಿಯಲ್ಲಿ ರಂಗ ಪಂಚಮಿ ನಡೆಯುತ್ತದೆ. ಈಗಾಗಲೇ ನಗರದ ಸಾಯಿಬಾಬಾ ಮಂದಿರ, ದುರ್ಗದ ಬಯಲು, ಜನತಾ ಬಜಾರ್ ಸೇರಿದಂತೆ ಹಲವೆಡೆ ತರಹೇವಾರಿ ಹಲಗೆಗಳ ಮಾರಾಟ ಹೆಚ್ಚಾಗಿವೆ. ಜನರು ಕೂಡ ಬಂದು ಈಗಾಗಲೇ ಹಲಗೆಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಹಬ್ಬದ ಸಂಭ್ರಮ ಇಮ್ಮಡಿಗೊಳಿಸುವ ಹಲಗೆಗಳ ಮಾರಾಟ ಕೂಡ ಜೋರಾಗಿ ನಡೆಯುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಬೇಡಿಕೆ ಹೆಚ್ಚಿದೆ. ಹುಬ್ಬಳ್ಳಿ - ಧಾರವಾಡ ಅಲ್ಲದೆ ವಿಜಯಪುರ, ಬಾಗಲಕೋಟಿ ಸೇರಿದಂತೆ ಹಲವು ಜಿಲ್ಲೆಗಳಿಂದ ಜನರು ಬಂದು ಹಲಗೆ ಖರೀದಿಸುತ್ತಿದ್ದಾರೆ. ಇದರಿಂದಾಗಿ ಮಾರಾಟಗಾರರು ಹರ್ಷಗೊಂಡಿದ್ದು, ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಹುಬ್ಬಳ್ಳಿ ಹೋಳಿ ಸರ್ವಧರ್ಮದ ಪ್ರತೀಕವಾಗಿದೆ. ಎಲ್ಲಾ ಸಮುದಾಯವರು ರಂಗಪಂಚಮಿ ದಿನ ತಮ್ಮ ತಮ್ಮ ಓಣಿಗಳಲ್ಲಿ ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಾರೆ. ಚಿಣ್ಣರು ಬಲೂನು, ಪ್ಲಾಸ್ಟಿಕ್ ಕವರ್ ಹಾಗೂ ಪಿಚಕಾರಿಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಸ್ನೇಹಿತರಿಗೆ, ಬೈಕ್ಗಳ ಮೇಲೆ ಹೋಗುವವರ ಮೇಲೆ ಎರಚಿ ಕುಣಿದು ಕುಪ್ಪಳಿಸುತ್ತಾರೆ. ಜನರು ಫುಲ್ ಖುಷಿ ಆಗಿದ್ದು ಹಲಗಿ ಖರೀದಿ ಮಾಡುವವರು ಹಲಗೆ ಭಾರಿಸುವುದೇ ಒಂದು ಮಜಾ.ಹೋಳಿ ಹಬ್ಬಕ್ಕೆ ಹಲಗಿಯೇ ಮೆರಗು ತರುತ್ತದೆ ಎಂದರು. ಇನ್ನು ಹಲಗಿ ಮಾರಾಟಗಾರರು ಹಲಗೆಗಳ ಮಾರಾಟ ಮಾಡಲು ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದು ಜನರ ಆಯ್ಕೆಗೆ ತಕ್ಕಂತೆ ಈ ಸಲ ಹಲಗೆ ತರಲಾಗಿದೆ ಎನ್ನುತ್ತಾರೆ ಮಾರಾಟಗಾರರು.
ಪುಣೆ, ಬಾಗಲಕೋಟೆ, ಬೆಳಗಾವಿ, ವಿಜಯಪುರ ಬಿಟ್ಟರೆ ಹೋಳಿಯ ರಂಗು ನೋಡಬೇಕೆಂದರೆ ಅದು ಹುಬ್ಬಳ್ಳಿಯಲ್ಲಿ ಮಾತ್ರ. ರಂಗಿನಾಟದ ಹೋಳಿ ಹುಣ್ಣಿಮೆ ಪ್ರಮುಖ ಆಕರ್ಷಣೆಯೇ ಹಲಗೆ. ಹೀಗಾಗಿ ಹಲಗೆಗಳಿಗೆ ಭಾರಿ ಬೇಡಿಕೆ ಬಂದಿದೆ. ಗ್ರಾಹಕರು ವಿವಿಧ ಬಗೆಯ ಹಲಗೆಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ.
ಹಿಂದಿನಿಂದಲೂ ಚರ್ಮದ ಹಲಗೆಗೆ ಬೇಡಿಕೆ ಹೆಚ್ಚು. ಫೈಬರ್, ಪ್ಲಾಸ್ಟಿಕ್ ತಮಟೆಗಳು ಕೂಡ ಇತ್ತೀಚೆಗೆ ಬೇಡಿಕೆ ಹೆಚ್ಚಿಸಿಕೊಂಡಿವೆ. ಹೋಳಿ ಹುಣ್ಣಿಮೆಯಾಗಿ ಐದನೇ ದಿನ ಹುಬ್ಬಳ್ಳಿಯಲ್ಲಿ ರಂಗ ಪಂಚಮಿ ನಡೆಯುತ್ತದೆ. ಈಗಾಗಲೇ ನಗರದ ಸಾಯಿಬಾಬಾ ಮಂದಿರ, ದುರ್ಗದ ಬಯಲು, ಜನತಾ ಬಜಾರ್ ಸೇರಿದಂತೆ ಹಲವೆಡೆ ತರಹೇವಾರಿ ಹಲಗೆಗಳ ಮಾರಾಟ ಹೆಚ್ಚಾಗಿವೆ. ಜನರು ಕೂಡ ಬಂದು ಈಗಾಗಲೇ ಹಲಗೆಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಹಬ್ಬದ ಸಂಭ್ರಮ ಇಮ್ಮಡಿಗೊಳಿಸುವ ಹಲಗೆಗಳ ಮಾರಾಟ ಕೂಡ ಜೋರಾಗಿ ನಡೆಯುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಬೇಡಿಕೆ ಹೆಚ್ಚಿದೆ. ಹುಬ್ಬಳ್ಳಿ - ಧಾರವಾಡ ಅಲ್ಲದೆ ವಿಜಯಪುರ, ಬಾಗಲಕೋಟಿ ಸೇರಿದಂತೆ ಹಲವು ಜಿಲ್ಲೆಗಳಿಂದ ಜನರು ಬಂದು ಹಲಗೆ ಖರೀದಿಸುತ್ತಿದ್ದಾರೆ. ಇದರಿಂದಾಗಿ ಮಾರಾಟಗಾರರು ಹರ್ಷಗೊಂಡಿದ್ದು, ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಹುಬ್ಬಳ್ಳಿ ಹೋಳಿ ಸರ್ವಧರ್ಮದ ಪ್ರತೀಕವಾಗಿದೆ. ಎಲ್ಲಾ ಸಮುದಾಯವರು ರಂಗಪಂಚಮಿ ದಿನ ತಮ್ಮ ತಮ್ಮ ಓಣಿಗಳಲ್ಲಿ ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಾರೆ. ಚಿಣ್ಣರು ಬಲೂನು, ಪ್ಲಾಸ್ಟಿಕ್ ಕವರ್ ಹಾಗೂ ಪಿಚಕಾರಿಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಸ್ನೇಹಿತರಿಗೆ, ಬೈಕ್ಗಳ ಮೇಲೆ ಹೋಗುವವರ ಮೇಲೆ ಎರಚಿ ಕುಣಿದು ಕುಪ್ಪಳಿಸುತ್ತಾರೆ. ಜನರು ಫುಲ್ ಖುಷಿ ಆಗಿದ್ದು ಹಲಗಿ ಖರೀದಿ ಮಾಡುವವರು ಹಲಗೆ ಭಾರಿಸುವುದೇ ಒಂದು ಮಜಾ.ಹೋಳಿ ಹಬ್ಬಕ್ಕೆ ಹಲಗಿಯೇ ಮೆರಗು ತರುತ್ತದೆ ಎಂದರು. ಇನ್ನು ಹಲಗಿ ಮಾರಾಟಗಾರರು ಹಲಗೆಗಳ ಮಾರಾಟ ಮಾಡಲು ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದು ಜನರ ಆಯ್ಕೆಗೆ ತಕ್ಕಂತೆ ಈ ಸಲ ಹಲಗೆ ತರಲಾಗಿದೆ ಎನ್ನುತ್ತಾರೆ ಮಾರಾಟಗಾರರು.