ತನ್ವೀರ್ ಸೇಠ್ ಗೃಹ ಮಂತ್ರಿಗಳಿಗೆ ಪತ್ರ, ಪ್ರಕರಣ ವಾಪಾಸ್ ಪಡೆದರೆ ಉಗ್ರ ಹೋರಾಟ: ಟೆಂಗಿನಕಾಯಿ
1170 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ಡಿಜೆ ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗ ಹಾಗೂ ಹಳೇಹುಬ್ಬಳ್ಳಿ ಪ್ರಕರಣ ವಾಪಾಸ್ ಪಡೆಯಲು ತನ್ವೀರ್ ಸೇಠ್ ಗೃಹ ಮಂತ್ರಿಗಳಿಗೆ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದ ವಿಚಾರ ಸರಿಯಲ್ಲ. ಗೃಹ ಸಚಿವರು ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ ಪಡೆಯಲು ಮುಂದಾಗಬಾರದು ಒಂದು ವೇಳೆ ಪ್ರಕರಣ ವಾಪಾಸ್ ಪಡೆಯಲು ಮುಂದಾದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ಕಾನೂನು ಪ್ರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧ, ಈ ರೀತಿಯಾಗಿ ಪತ್ರ ಬರೆಯುವುದು ಸರಿಯಲ್ಲ. ವಿದ್ಯಾರ್ಥಿಗಳು ,ಯುವಕರು, ಮುಗ್ಧರು ಇದ್ದಾರೆ ಬಿಡುಗಡೆ ಮಾಡಿ ಅಂತಾ ಹೇಳುವುದು ತಪ್ಪು. ಈಗ ಪ್ರಕರಣ ಕಾನೂನು ಪ್ರಕಾರವೇ ನಡೆಯುತ್ತಿದೆ. ವಿಚಾರಣಾ ಹಂತದಲ್ಲಿ ಇರುವಾಗ ಪ್ರಕರಣ ವಾಪಾಸ್ ಪಡೆಯಿರಿ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಅಲ್ಪಸಂಖ್ಯಾತರ ತುಷ್ಟೀಕರಣ ಪರಮೋಚ್ಚ ಸ್ಥಾನಕ್ಕೆ ಹೋಗಿತ್ತು. ಅವರ ಓಲೈಕೆ ಹೆಚ್ಚಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಗಂಭೀರ ಸ್ವರೂಪದ ಪ್ರಕರಣ ವಾಪಾಸ್ ಪಡೆಯಲು ಮುಂದಾಗಿರುವುದು ಪೊಲೀಸರ ಮನೋಸ್ಥೈರ್ಯ ಕುಗ್ಗಿಸುವಂತದ್ದು. ಯಾವುದೇ ಕಾರಣಕ್ಕೂ ಪೊಲೀಸರ ಮೇಲೆ ಒತ್ತಡ ಬೇಡಾ, ಪೊಲೀಸ್ ಇಲಾಖೆಯಲ್ಲಿ ಅವರ ಬಂಧನ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಪೊಲೀಸರ ಕಮಿಷನರ್ ಕಾರ್ ಮೇಲೆ ಕಲ್ಲು ಹೊಡೆದಿವರು ಅಮಾಯಕರಾ ಎಂದರು.
ಕಾನೂನು ಪ್ರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧ, ಈ ರೀತಿಯಾಗಿ ಪತ್ರ ಬರೆಯುವುದು ಸರಿಯಲ್ಲ. ವಿದ್ಯಾರ್ಥಿಗಳು ,ಯುವಕರು, ಮುಗ್ಧರು ಇದ್ದಾರೆ ಬಿಡುಗಡೆ ಮಾಡಿ ಅಂತಾ ಹೇಳುವುದು ತಪ್ಪು. ಈಗ ಪ್ರಕರಣ ಕಾನೂನು ಪ್ರಕಾರವೇ ನಡೆಯುತ್ತಿದೆ. ವಿಚಾರಣಾ ಹಂತದಲ್ಲಿ ಇರುವಾಗ ಪ್ರಕರಣ ವಾಪಾಸ್ ಪಡೆಯಿರಿ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಅಲ್ಪಸಂಖ್ಯಾತರ ತುಷ್ಟೀಕರಣ ಪರಮೋಚ್ಚ ಸ್ಥಾನಕ್ಕೆ ಹೋಗಿತ್ತು. ಅವರ ಓಲೈಕೆ ಹೆಚ್ಚಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಗಂಭೀರ ಸ್ವರೂಪದ ಪ್ರಕರಣ ವಾಪಾಸ್ ಪಡೆಯಲು ಮುಂದಾಗಿರುವುದು ಪೊಲೀಸರ ಮನೋಸ್ಥೈರ್ಯ ಕುಗ್ಗಿಸುವಂತದ್ದು. ಯಾವುದೇ ಕಾರಣಕ್ಕೂ ಪೊಲೀಸರ ಮೇಲೆ ಒತ್ತಡ ಬೇಡಾ, ಪೊಲೀಸ್ ಇಲಾಖೆಯಲ್ಲಿ ಅವರ ಬಂಧನ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಪೊಲೀಸರ ಕಮಿಷನರ್ ಕಾರ್ ಮೇಲೆ ಕಲ್ಲು ಹೊಡೆದಿವರು ಅಮಾಯಕರಾ ಎಂದರು.