ತ್ಯಾಜ್ಯ ತೆರವಿಗೆ ಟೆಂಡರ್ ಕರೆದಿದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
1056 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ಅಂತೂ ಇಂತೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ತ್ಯಾಜ್ಯಕ್ಕೆ ಮುಕ್ತಿ ನೀಡಲು ಮುಂದಾಗಿದೆ. ತ್ಯಾಜ್ಯ ವಿಲೇವಾರಿ ಘಟಕದಲ್ಲಿ ದಶಕಗಳಿಂದ ಕೊಳೆಯುತ್ತ ಬಿದ್ದಿರುವ ತ್ಯಾಜ್ಯಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಬಂದಿದೆ. ಈ ನಿಟ್ಟಿನಲ್ಲಿ ಪಾಲಿಕೆಯು ಹೊಸ ನಿರ್ಧಾರಕ್ಕೆ ಬಂದಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯ ಕೆಂಪಗೇರಿ ಮತ್ತು ಧಾರವಾಡದ ಹೊಸ ಯಲ್ಲಾಪುರದ ತ್ಯಾಜ್ಯ ಘಟಕದಲ್ಲಿ ವರ್ಷಗಳಿಂದ ಗುಡ್ಡದಂತೆ ಸಂಗ್ರಹವಾಗಿರುವ ತ್ಯಾಜ್ಯದ ವಿಲೇವಾರಿಗೆ ಪಾಲಿಕೆ ಟೆಂಡರ್ ಕರೆದಿದೆ. ಕೆಂಪಗೇರಿ ಘಟಕದಲ್ಲಿರುವ ಅಂದಾಜು 3.6 ಲಕ್ಷ ಟನ್ ಹಳೆಯ ತ್ಯಾಜ್ಯ ತೆರವಿಗೆ 22.70 ಕೋಟಿ ರೂಪಾಯಿ ಮತ್ತು ಹೊಸ ಯಲ್ಲಾಪುರದಲ್ಲಿರುವ 1.2 ಲಕ್ಷ ಟನ್ ತ್ಯಾಜ್ಯ ತೆರವಿಗೆ 7.15 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯ ಕೆಂಪಗೇರಿ ಮತ್ತು ಧಾರವಾಡದ ಹೊಸ ಯಲ್ಲಾಪುರದ ತ್ಯಾಜ್ಯ ಘಟಕದಲ್ಲಿ ವರ್ಷಗಳಿಂದ ಗುಡ್ಡದಂತೆ ಸಂಗ್ರಹವಾಗಿರುವ ತ್ಯಾಜ್ಯದ ವಿಲೇವಾರಿಗೆ ಪಾಲಿಕೆ ಟೆಂಡರ್ ಕರೆದಿದೆ. ಕೆಂಪಗೇರಿ ಘಟಕದಲ್ಲಿರುವ ಅಂದಾಜು 3.6 ಲಕ್ಷ ಟನ್ ಹಳೆಯ ತ್ಯಾಜ್ಯ ತೆರವಿಗೆ 22.70 ಕೋಟಿ ರೂಪಾಯಿ ಮತ್ತು ಹೊಸ ಯಲ್ಲಾಪುರದಲ್ಲಿರುವ 1.2 ಲಕ್ಷ ಟನ್ ತ್ಯಾಜ್ಯ ತೆರವಿಗೆ 7.15 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ.