ಲೋಕಸಭೆ ಟಿಕೆಟ್ಗಾಗಿ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ ; ಜಗದೀಶ್ ಶೆಟ್ಟರ್
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಧಾರವಾಡ: ಬಿಜೆಪಿಯ ಪೇ ಸಿಎಸ್ ಅಭಿಯಾನಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೌಂಟರ್ ಕೊಟ್ಟಿದ್ದಾರೆ. ಇದು ಕಾಂಗ್ರೆಸ್ ಕಾರ್ಬನ್ ಕಾಪಿ ಆಗಿದ್ದುಪೇ ಸಿಎಸ್ಗೆ ಅರ್ಥಾನೆ ಇಲ್ಲ ಹಾಗೂ ಜನ ನಂಬಲ್ಲ ಎಂದು ಹೇಳಿದರು.
ಪೇ ಮುಖ್ಯಮಂತ್ರಿ ಅವತ್ತಿಗೆ ಲೇಟೆಸ್ಟ್. ಈಗ ಕಾಂಗ್ರೆಸ್ನವರು ಮಾಡಿದ್ದನ್ನೇ ಕಾಪಿ ಮಾಡೋಕೆ ಹೊರಟಿದ್ದಾರೆ. ಜನ ನಂಬಲ್ಲ ಎಂದು ತಿರುಗೇಟು ನೀಡಿದರು. ಬಿಜೆಪಿ ಸರಕಾರ ಬಂದ ನಾಲ್ಕು ವರ್ಷಗಳ ಬಳಿಕ ಅಭಿಯಾನ ಆರಂಭವಾಗಿತ್ತು. ಆದ್ರೆ ಮೂರು ತಿಂಗಳಲ್ಲಿ ಬಿಜೆಪಿಯವರು ಮಾಡ್ತಾರೆ ಅಂದ್ರೆ ಅದಕ್ಕೆ ಅರ್ಥ ಇಲ್ಲ, ಬಿಜೆಪಿಯಲ್ಲಿದ್ದಾಗ ಎಲ್ಲ ವಿಷಯಗಳನ್ನು ನಾನು ಕೋರ್ ಕಮೀಟಿಯಲ್ಲಿ ಹೇಳಿದ್ದೆ, ಹೊರಗಡೆ ಹೇಳೋಕೆ ಆಗೋದ ವಿಷಯವನ್ನು ಹೇಳಿದ್ದೆ ಆದ್ರೆ ಅವರು ತಿಳಿದುಕೊಳ್ಳಲಿಲ್ಲ ಎಂದರು.
ದೆಹಲಿಗೆ ನಾನು ಹೋಗಿದ್ದೆ, ಖುದ್ದು ರಾಹುಲ್ ಗಾಂಧಿ ಮೂರು ಗಂಟೆ ನಮ್ಮ ಜೊತೆ ಚರ್ಚೆ ಮಾಡಿದ್ರು, ಲೋಕಸಭೆಯಲ್ಲಿ ಹೇಗೆ ಗೆಲ್ಲಬೇಕು ಅನ್ನೋ ಚರ್ಚೆ ಆಯ್ತು. ಗ್ಯಾರಂಟಿ ಅನುಷ್ಠಾನದ ಬಗ್ಗೆಯೂ ಚರ್ಚೆ ಆಯ್ತು, ರಾಜ್ಯ ರಾಜಕಾರಣದ ಅವಲೋಕನ ರಾಹುಲ್ ಗಾಂಧಿ ತಿಳಿದುಕೊಂಡರು. ಯಾವ ಟಾಸ್ಕ್ ಕೊಟ್ಟಿಲ್ಲ, ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಎಂದು ಹೇಳಿದರು.
ಎಲ್ಲರದೂ ಒಂದೇ ಲೋಕಸಭೆಯಲ್ಲಿ ನಾವು 15 ರಿಂದ 20 ಸೀಟ್ ಗೆಲ್ಲಬೇಕು ಬಿಜೆಪಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ತಿದೆ. ಲೀಡರ್ ಲೆಸ್ ಪಾರ್ಟಿ ಆಗಿದೆ, ಮೂರು ತಿಂಗಳಾದ್ರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗ್ತಿಲ್ಲ, ಬಿಜೆಪಿ ದಯನೀಯ ಪರಸ್ಥಿತಿ ಬಗ್ಗೆಯೂ ಚರ್ಚೆ ಆಯ್ತು ಎಂದರು.
ನನಗೆ ಸೀಟ್ ಬೇಕು ಎಂದು ಯಾವ ಬೇಡಿಕೆಯನ್ನು ಹಾಕಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿದ್ದಾಗ ಬೇಕಾಬಿಟ್ಟಿ ಕಾಮಗಾರಿ ಮಂಜೂರು ಮಾಡಿದ್ರು. ಇದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಇರಲಿಲ್ಲ, ಸರ್ಕಾರ ಬಂದು ಮೂರು ತಿಂಗಳಾಗಿದೆ, ಗುತ್ತಿಗೆದಾರ ಬಿಲ್ ಬಾಕಿ ಇರೋದು ಕಳೆದ ಸರ್ಕಾರದ್ದು, ಇವಾಗ ಆಪಾದನೆ ಮಾಡೋದು ದುರುದ್ದೇಶದಿಂದ ಎಂದು ಕಿಡಿಕಾರಿದರು.
ಪೇ ಮುಖ್ಯಮಂತ್ರಿ ಅವತ್ತಿಗೆ ಲೇಟೆಸ್ಟ್. ಈಗ ಕಾಂಗ್ರೆಸ್ನವರು ಮಾಡಿದ್ದನ್ನೇ ಕಾಪಿ ಮಾಡೋಕೆ ಹೊರಟಿದ್ದಾರೆ. ಜನ ನಂಬಲ್ಲ ಎಂದು ತಿರುಗೇಟು ನೀಡಿದರು. ಬಿಜೆಪಿ ಸರಕಾರ ಬಂದ ನಾಲ್ಕು ವರ್ಷಗಳ ಬಳಿಕ ಅಭಿಯಾನ ಆರಂಭವಾಗಿತ್ತು. ಆದ್ರೆ ಮೂರು ತಿಂಗಳಲ್ಲಿ ಬಿಜೆಪಿಯವರು ಮಾಡ್ತಾರೆ ಅಂದ್ರೆ ಅದಕ್ಕೆ ಅರ್ಥ ಇಲ್ಲ, ಬಿಜೆಪಿಯಲ್ಲಿದ್ದಾಗ ಎಲ್ಲ ವಿಷಯಗಳನ್ನು ನಾನು ಕೋರ್ ಕಮೀಟಿಯಲ್ಲಿ ಹೇಳಿದ್ದೆ, ಹೊರಗಡೆ ಹೇಳೋಕೆ ಆಗೋದ ವಿಷಯವನ್ನು ಹೇಳಿದ್ದೆ ಆದ್ರೆ ಅವರು ತಿಳಿದುಕೊಳ್ಳಲಿಲ್ಲ ಎಂದರು.
ದೆಹಲಿಗೆ ನಾನು ಹೋಗಿದ್ದೆ, ಖುದ್ದು ರಾಹುಲ್ ಗಾಂಧಿ ಮೂರು ಗಂಟೆ ನಮ್ಮ ಜೊತೆ ಚರ್ಚೆ ಮಾಡಿದ್ರು, ಲೋಕಸಭೆಯಲ್ಲಿ ಹೇಗೆ ಗೆಲ್ಲಬೇಕು ಅನ್ನೋ ಚರ್ಚೆ ಆಯ್ತು. ಗ್ಯಾರಂಟಿ ಅನುಷ್ಠಾನದ ಬಗ್ಗೆಯೂ ಚರ್ಚೆ ಆಯ್ತು, ರಾಜ್ಯ ರಾಜಕಾರಣದ ಅವಲೋಕನ ರಾಹುಲ್ ಗಾಂಧಿ ತಿಳಿದುಕೊಂಡರು. ಯಾವ ಟಾಸ್ಕ್ ಕೊಟ್ಟಿಲ್ಲ, ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಎಂದು ಹೇಳಿದರು.
ಎಲ್ಲರದೂ ಒಂದೇ ಲೋಕಸಭೆಯಲ್ಲಿ ನಾವು 15 ರಿಂದ 20 ಸೀಟ್ ಗೆಲ್ಲಬೇಕು ಬಿಜೆಪಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ತಿದೆ. ಲೀಡರ್ ಲೆಸ್ ಪಾರ್ಟಿ ಆಗಿದೆ, ಮೂರು ತಿಂಗಳಾದ್ರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗ್ತಿಲ್ಲ, ಬಿಜೆಪಿ ದಯನೀಯ ಪರಸ್ಥಿತಿ ಬಗ್ಗೆಯೂ ಚರ್ಚೆ ಆಯ್ತು ಎಂದರು.
ನನಗೆ ಸೀಟ್ ಬೇಕು ಎಂದು ಯಾವ ಬೇಡಿಕೆಯನ್ನು ಹಾಕಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿದ್ದಾಗ ಬೇಕಾಬಿಟ್ಟಿ ಕಾಮಗಾರಿ ಮಂಜೂರು ಮಾಡಿದ್ರು. ಇದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಇರಲಿಲ್ಲ, ಸರ್ಕಾರ ಬಂದು ಮೂರು ತಿಂಗಳಾಗಿದೆ, ಗುತ್ತಿಗೆದಾರ ಬಿಲ್ ಬಾಕಿ ಇರೋದು ಕಳೆದ ಸರ್ಕಾರದ್ದು, ಇವಾಗ ಆಪಾದನೆ ಮಾಡೋದು ದುರುದ್ದೇಶದಿಂದ ಎಂದು ಕಿಡಿಕಾರಿದರು.