Dharwad: ಧಾರವಾಡದ ರಂಗಾಯಣದಲ್ಲಿ 150 ಕಲಾವಿದರಿಂದ ಸಿದ್ಧಗೊಳ್ಳುತ್ತಿದೆ ಕಿತ್ತೂರು ರಾಣಿ ಚೆನ್ನಮ್ಮರ ನಾಟಕ
1003 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ್ತಿ, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ರಾಣಿ ಕಿತ್ತೂರು ಚೆನ್ನಮ್ಮರ ವೀರಗಾಥೆಯನ್ನು ಮನೆ ಮನೆಗೂ ತಲುಪಿಸಲು ಧಾರವಾಡದ ರಂಗಾಯಣ ಸಕಲ ಸಿದ್ಧತೆ ಮಾಡಿಕೊಂಡಿದೆ.
ಧಾರವಾಡದ ರಂಗಾಯಣ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದು, 150 ಜನರು ಚೆನ್ನಮ್ಮನ ನಾಟಕಕ್ಕೆ ಕಳೆದ ಒಂದು ತಿಂಗಳಿನಿಂದ ಹಗಲು–ರಾತ್ರಿ ತಾಲೀಮು ನಡೆಸುತ್ತಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಾಟಕದ ತಾಲೀಮು ಜೋರಾಗಿ ನಡೆದಿದೆ. ಈಗಾಗಲೇ ಶೇ. 80 ರಷ್ಟು ತಯಾರಿ ಮುಕ್ತಾಯವಾಗಿದ್ದು, ಧ್ವನಿ ಮತ್ತು ಬೆಳಕಿನ ಆರ್ಭಟಕ್ಕೆ ಪೂರಕ ತಂತ್ರಜ್ಞಾನ ಅಳವಡಿಸಿ ಸಜ್ಜುಗೊಳಿಸಲಾಗುತ್ತಿದೆ. ರಂಗ ಪರಿಕರಿಗಳು, ವಸ್ತ್ರವಿನ್ಯಾಸ, ನೆರಳು–ಬೆಳಕಿನ ಕಾರ್ಯ ಮುಗಿಯುವ ಹಂತದಲ್ಲಿವೆ. ಚೆನ್ನಮ್ಮನ ಪಾತ್ರಕ್ಕೆ ಜೀವ ತುಂಬಲು ಬಯಲಾಟ, ಯಕ್ಷಗಾನ, ಕಥಕ್ಕಳಿ ಸೇರಿದಂತೆ ಎಲ್ಲ ಪರಂಪರೆಯ ಕಲಾಪ್ರಕಾರಗಳನ್ನು ಅಳವಡಿಸಲಾಗಿದೆ.
ರಸ್ತೆಗೆ ಡಾ.ಪುನೀತ್ ರಾಜ್ಕುಮಾರ್ ಹೆಸರಿಡಲು ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
ಪ್ರದರ್ಶನ ಕುರಿತು ಪ್ರತಿಕ್ರಿಯೆ ನೀಡಿರುವ ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವೀನಾಯ್ಕರ್, ನಾಟಕದಲ್ಲಿ ಚೆನ್ನಮ್ಮನ ಬಾಲ್ಯ, ಯೌವನ ಮತ್ತು ರಾಣಿ ಆದಾಗಿನ ಹಂತಗಳ ನಟನೆಗೆ ಪ್ರತ್ಯೇಕ ನಟಿಯರು ನಟಿಸುತ್ತಿದ್ದಾರೆ. ವಿಶೇಷ ಅಂದರೆ ಈ ನಾಟಕದಲ್ಲಿ ಎರಡು ಆನೆ ಹಾಗೂ ಹತ್ತು ಕುದುರೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ನಾಟಕ ನೋಡುವಾಗ ಐತಿಹಾಸಿಕ ಕಾಲಕ್ಕೆ ಜಾರುವಂತೆ ನಾಟಕವನ್ನು ಹೆಣೆಯಲಾಗಿದೆ ಎಂದು ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್ ತಿಂಗಳಲ್ಲಿ ಈ ನಾಟಕವು ಪ್ರದರ್ಶನಗೊಳ್ಳಲಿದೆ. ಅದೇ ವೇಳೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹ ಭೇಟಿ ನೀಡುವ ನಿರೀಕ್ಷೆಯಿದ್ದು, ನಾಟಕವನ್ನು ಅವರ ಕೈಯಿಂದಲೇ ಉದ್ಘಾಟನೆ ಮಾಡಿಸುವ ಯೋಚನೆಯೂ ಇದೆ. ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನು ಭಯಭೀತಿಗೊಳಿಸಿದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ನಾಟಕ ನೋಡಲು ಇದೀಗ ಎಲ್ಲರೂ ತವಕದಿಂದ ಕಾಯುತ್ತಿದ್ದಾರೆ.
ಧಾರವಾಡದ ರಂಗಾಯಣ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದು, 150 ಜನರು ಚೆನ್ನಮ್ಮನ ನಾಟಕಕ್ಕೆ ಕಳೆದ ಒಂದು ತಿಂಗಳಿನಿಂದ ಹಗಲು–ರಾತ್ರಿ ತಾಲೀಮು ನಡೆಸುತ್ತಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಾಟಕದ ತಾಲೀಮು ಜೋರಾಗಿ ನಡೆದಿದೆ. ಈಗಾಗಲೇ ಶೇ. 80 ರಷ್ಟು ತಯಾರಿ ಮುಕ್ತಾಯವಾಗಿದ್ದು, ಧ್ವನಿ ಮತ್ತು ಬೆಳಕಿನ ಆರ್ಭಟಕ್ಕೆ ಪೂರಕ ತಂತ್ರಜ್ಞಾನ ಅಳವಡಿಸಿ ಸಜ್ಜುಗೊಳಿಸಲಾಗುತ್ತಿದೆ. ರಂಗ ಪರಿಕರಿಗಳು, ವಸ್ತ್ರವಿನ್ಯಾಸ, ನೆರಳು–ಬೆಳಕಿನ ಕಾರ್ಯ ಮುಗಿಯುವ ಹಂತದಲ್ಲಿವೆ. ಚೆನ್ನಮ್ಮನ ಪಾತ್ರಕ್ಕೆ ಜೀವ ತುಂಬಲು ಬಯಲಾಟ, ಯಕ್ಷಗಾನ, ಕಥಕ್ಕಳಿ ಸೇರಿದಂತೆ ಎಲ್ಲ ಪರಂಪರೆಯ ಕಲಾಪ್ರಕಾರಗಳನ್ನು ಅಳವಡಿಸಲಾಗಿದೆ.
ರಸ್ತೆಗೆ ಡಾ.ಪುನೀತ್ ರಾಜ್ಕುಮಾರ್ ಹೆಸರಿಡಲು ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
ಪ್ರದರ್ಶನ ಕುರಿತು ಪ್ರತಿಕ್ರಿಯೆ ನೀಡಿರುವ ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವೀನಾಯ್ಕರ್, ನಾಟಕದಲ್ಲಿ ಚೆನ್ನಮ್ಮನ ಬಾಲ್ಯ, ಯೌವನ ಮತ್ತು ರಾಣಿ ಆದಾಗಿನ ಹಂತಗಳ ನಟನೆಗೆ ಪ್ರತ್ಯೇಕ ನಟಿಯರು ನಟಿಸುತ್ತಿದ್ದಾರೆ. ವಿಶೇಷ ಅಂದರೆ ಈ ನಾಟಕದಲ್ಲಿ ಎರಡು ಆನೆ ಹಾಗೂ ಹತ್ತು ಕುದುರೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ನಾಟಕ ನೋಡುವಾಗ ಐತಿಹಾಸಿಕ ಕಾಲಕ್ಕೆ ಜಾರುವಂತೆ ನಾಟಕವನ್ನು ಹೆಣೆಯಲಾಗಿದೆ ಎಂದು ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್ ತಿಂಗಳಲ್ಲಿ ಈ ನಾಟಕವು ಪ್ರದರ್ಶನಗೊಳ್ಳಲಿದೆ. ಅದೇ ವೇಳೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹ ಭೇಟಿ ನೀಡುವ ನಿರೀಕ್ಷೆಯಿದ್ದು, ನಾಟಕವನ್ನು ಅವರ ಕೈಯಿಂದಲೇ ಉದ್ಘಾಟನೆ ಮಾಡಿಸುವ ಯೋಚನೆಯೂ ಇದೆ. ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನು ಭಯಭೀತಿಗೊಳಿಸಿದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ನಾಟಕ ನೋಡಲು ಇದೀಗ ಎಲ್ಲರೂ ತವಕದಿಂದ ಕಾಯುತ್ತಿದ್ದಾರೆ.