ಐದು ಗ್ಯಾರಂಟಿಗಳ ಕುರಿತು ಶೀಘ್ರದಲ್ಲೇ ಸಿಹಿ ಸುದ್ದಿ: ಸಚಿವ ಸಂತೋಷ ಲಾಡ್
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಹುಬ್ಬಳ್ಳಿ: ಚುನಾವಣಾ ಸಂದರ್ಭದಲ್ಲಿ ನಾವು ನೀಡಿದ ಐದು ಗ್ಯಾರಂಟಿಗಳ ಕುರಿತು ಗುರುವಾರ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಚರ್ಚೆ ಆಗುತ್ತದೆ. ಎರಡು ಮೂರು ದಿನಗಳ ಸಿಹಿ ಸುದ್ದಿ ಸಿಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಮಂಗಳವಾರ ಕಲಘಟಗಿ, ಅಳ್ನಾವರ ಮತ್ತು ಹುಬ್ಬಳ್ಳಿ-ಧಾರವಾಡ ಪ್ರವಾಸ ಮಾಡುತ್ತಿರುವೆ. ಧಾರವಾಡ ಜಿಲ್ಲೆಯ ಕಲಘಟಗಿ ಹಾಗೂ ಅಳ್ನಾವರ ಕ್ಷೇತ್ರದ ಜನತೆಗೆ ಗೌರವ ಮತ್ತು ಅಭಿನಂದನೆ ಸಲ್ಲಿಸಲು ಬಂದಿದ್ದೇನೆ ಎಂದ ಅವರು ಅವರಿಗೆ ಪ್ರೀತಿಯಿಂದ ಗೌರವಿಸಬೇಕಾಗಿದೆ ಎಂದರು. ಕೇವಲ 20 ತಿಂಗಳ ಕಾಲ ನಾನು ಕಾರ್ಮಿಕ ಸಚಿವನಾಗಿದ್ದಾಗ ಕಡಿಮೆ ಸಮಯ ಸಿಕ್ಕಿತ್ತು, ಈಗ ಮತ್ತೆ ಅದೇ ಖಾತೆ ಸಿಕ್ಕೆದೆ. ಹೆಚ್ಚಿನ ಕೆಲಸ ಮಾಡುವ ಗುರಿಯಿದೆ. ಸಾಕಷ್ಟು ಹೊಸ ಹೊಸ ಯೋಜನೆ ತರುವ ಆಸೆ ಇದೆ ಎಂದರು.
ಮಂಗಳವಾರ ಕಲಘಟಗಿ, ಅಳ್ನಾವರ ಮತ್ತು ಹುಬ್ಬಳ್ಳಿ-ಧಾರವಾಡ ಪ್ರವಾಸ ಮಾಡುತ್ತಿರುವೆ. ಧಾರವಾಡ ಜಿಲ್ಲೆಯ ಕಲಘಟಗಿ ಹಾಗೂ ಅಳ್ನಾವರ ಕ್ಷೇತ್ರದ ಜನತೆಗೆ ಗೌರವ ಮತ್ತು ಅಭಿನಂದನೆ ಸಲ್ಲಿಸಲು ಬಂದಿದ್ದೇನೆ ಎಂದ ಅವರು ಅವರಿಗೆ ಪ್ರೀತಿಯಿಂದ ಗೌರವಿಸಬೇಕಾಗಿದೆ ಎಂದರು. ಕೇವಲ 20 ತಿಂಗಳ ಕಾಲ ನಾನು ಕಾರ್ಮಿಕ ಸಚಿವನಾಗಿದ್ದಾಗ ಕಡಿಮೆ ಸಮಯ ಸಿಕ್ಕಿತ್ತು, ಈಗ ಮತ್ತೆ ಅದೇ ಖಾತೆ ಸಿಕ್ಕೆದೆ. ಹೆಚ್ಚಿನ ಕೆಲಸ ಮಾಡುವ ಗುರಿಯಿದೆ. ಸಾಕಷ್ಟು ಹೊಸ ಹೊಸ ಯೋಜನೆ ತರುವ ಆಸೆ ಇದೆ ಎಂದರು.