ಹಿಜಾಬ್ ನಿಷೇಧ ವಾಪಸ್ ; ಇದರಲ್ಲಿ ತಪ್ಪೇನಿದೆ? ; ಸಚಿವ ಸಂತೋಷ್ ಲಾಡ್
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಹುಬ್ಬಳ್ಳಿ: ಹಿಜಾಬ್ ನಿಷೇಧ ಆದೇಶ ವಾಪಾಸ್ ಸಿದ್ದರಾಮಯ್ಯ ಹೇಳಿಕೆ ಹೇಗೆ ದಂಗಲ್ ಆಗುತ್ತದೆ. ಅವರು ಕಾನೂನಾತ್ಮಕವಾಗಿ ಹೇಳಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಗರಂ ಆದರು.
ಧಾರವಾಡದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಷಯದಲ್ಲಿ ಸಿದ್ದರಾಮಯ್ಯ ಆದೇಶ ವಾಪಾಸ್ ತೆಗೆದುಕೊಳ್ಳುವ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ಸಂತೋಷ್ ಲಾಡ್. ಮಾಧ್ಯಮಗಳು ಧರ್ಮ ದಂಗಲ್ ಎಂಬ ಪದವನ್ನು ಬಳಸುತ್ತಿದ್ದಾರೆ. ಇದು ಹೇಗೆ ಧರ್ಮ ದಂಗಲ್ ಆಗುತ್ತದೆ. ಹಿಜಾಬ್ ವಿಚಾರದಲ್ಲಿ ದಂಗಲ್ ಎಂಬ ಪದ ಬಳಸಿ ಏಕೆ ಹೇಳುತ್ತೀರಾ? ಎಂದು ಕಿಡಿಕಾರಿದರು.
ಹಿಜಾಬ್ ಧರಿಸಲು ಕಾನೂನಾತ್ಮಕ, ಸಂವಿಧಾನಾತ್ಮಕವಾಗಿ ಅವಕಾಶವಿದೆ. ಅದರಲ್ಲಿ ಸಿದ್ದರಾಮಯ್ಯ ಅವರ ತಪ್ಪೇನಿದೆ ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡರು. ನಾನೊಬ್ಬ ಹಿಂದೂ ಅಲ್ವಾ? ನಾನೇನು ವಿರೋಧ ಮಾಡುತ್ತಿಲ್ಲ, ನೀವು ಹಿಂದೂ ಅಲ್ವಾ? ನೀವು ವಿರೋಧ ಮಾಡುತ್ತೀರಾ? ನಿಮ್ಮ ನಿಲುವು ಏನೂ? ಹಿಜಾಬ್ ವಿಚಾರವನ್ನು ವಿರೋಧ ಪಕ್ಷಗಳು ವಿರೋಧ ಮಾಡುತ್ತವೆ. ಅವರು ಮಾಡಲಿ ಎಂದರು.
ಮುಸ್ಲಿಂ ತುಷ್ಟೀಕರಣ ಆರೋಪ ವಿಚಾರವಾಗಿ ಮಾತನಾಡಿ, ವಿರೋಧ ಪಕ್ಷದ ದೃಷ್ಟಿಕೋನ ಹಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎಂದರೆ ಏನೂ? ಹಿಂದೂ, ಮುಸ್ಲಿಂ, ಸಿಖ್, ಬುದ್ದ ಎಲ್ಲರನ್ನೂ ಒಂದೇ ರೀತಿ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ವಿವಿಧ ನಿಯಮಗಳ ವಾಪಾಸ್ ತೆಗೆದುಕೊಳ್ಳುವ ವಿಚಾರವಾಗಿ ಮಾತನಾಡಿ, ಹಿಜಾಬ್ ನಿಷೇಧ ವಾಪಾಸ್ದಂತೆ ಇತರೆ ನಿಯಮಗಳ ವಿಚಾರವನ್ನು ಕಾನೂನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ. ಸಂವಿಧಾನ ಬದ್ದವಾಗಿ ಯಾವ ರೀತಿ ಇರಬೇಕೆಂದು ಇದೆ. ಆ ರೀತಿ ಮಾಡತ್ತೇವೆ. ಇದನ್ನು ಮುಖ್ಯಮಂತ್ರಿಗಳು ಪರಿಶೀಲನೆ ಮಾಡತ್ತಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಷಯದಲ್ಲಿ ಸಿದ್ದರಾಮಯ್ಯ ಆದೇಶ ವಾಪಾಸ್ ತೆಗೆದುಕೊಳ್ಳುವ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ಸಂತೋಷ್ ಲಾಡ್. ಮಾಧ್ಯಮಗಳು ಧರ್ಮ ದಂಗಲ್ ಎಂಬ ಪದವನ್ನು ಬಳಸುತ್ತಿದ್ದಾರೆ. ಇದು ಹೇಗೆ ಧರ್ಮ ದಂಗಲ್ ಆಗುತ್ತದೆ. ಹಿಜಾಬ್ ವಿಚಾರದಲ್ಲಿ ದಂಗಲ್ ಎಂಬ ಪದ ಬಳಸಿ ಏಕೆ ಹೇಳುತ್ತೀರಾ? ಎಂದು ಕಿಡಿಕಾರಿದರು.
ಹಿಜಾಬ್ ಧರಿಸಲು ಕಾನೂನಾತ್ಮಕ, ಸಂವಿಧಾನಾತ್ಮಕವಾಗಿ ಅವಕಾಶವಿದೆ. ಅದರಲ್ಲಿ ಸಿದ್ದರಾಮಯ್ಯ ಅವರ ತಪ್ಪೇನಿದೆ ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡರು. ನಾನೊಬ್ಬ ಹಿಂದೂ ಅಲ್ವಾ? ನಾನೇನು ವಿರೋಧ ಮಾಡುತ್ತಿಲ್ಲ, ನೀವು ಹಿಂದೂ ಅಲ್ವಾ? ನೀವು ವಿರೋಧ ಮಾಡುತ್ತೀರಾ? ನಿಮ್ಮ ನಿಲುವು ಏನೂ? ಹಿಜಾಬ್ ವಿಚಾರವನ್ನು ವಿರೋಧ ಪಕ್ಷಗಳು ವಿರೋಧ ಮಾಡುತ್ತವೆ. ಅವರು ಮಾಡಲಿ ಎಂದರು.
ಮುಸ್ಲಿಂ ತುಷ್ಟೀಕರಣ ಆರೋಪ ವಿಚಾರವಾಗಿ ಮಾತನಾಡಿ, ವಿರೋಧ ಪಕ್ಷದ ದೃಷ್ಟಿಕೋನ ಹಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎಂದರೆ ಏನೂ? ಹಿಂದೂ, ಮುಸ್ಲಿಂ, ಸಿಖ್, ಬುದ್ದ ಎಲ್ಲರನ್ನೂ ಒಂದೇ ರೀತಿ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ವಿವಿಧ ನಿಯಮಗಳ ವಾಪಾಸ್ ತೆಗೆದುಕೊಳ್ಳುವ ವಿಚಾರವಾಗಿ ಮಾತನಾಡಿ, ಹಿಜಾಬ್ ನಿಷೇಧ ವಾಪಾಸ್ದಂತೆ ಇತರೆ ನಿಯಮಗಳ ವಿಚಾರವನ್ನು ಕಾನೂನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ. ಸಂವಿಧಾನ ಬದ್ದವಾಗಿ ಯಾವ ರೀತಿ ಇರಬೇಕೆಂದು ಇದೆ. ಆ ರೀತಿ ಮಾಡತ್ತೇವೆ. ಇದನ್ನು ಮುಖ್ಯಮಂತ್ರಿಗಳು ಪರಿಶೀಲನೆ ಮಾಡತ್ತಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.