ಹುಬ್ಬಳ್ಳಿಯಲ್ಲಿ ಗಣಪತಿಗೆ ನಾನ್ವೆಜ್ ನೈವೇದ್ಯ: ತಟ್ಟೆಯಲ್ಲಿ ಮಟನ್, ಚಿಕನ್, ಫಿಶ್
1147 views
dharwad ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ವಿಘ್ನ ನಿವಾರಕ ಗಣಪತಿಗೆ ಚಕ್ಕುಲಿ, ಕಡುಬು, ಮೋದಕ ಬಗೆ ಬಗೆಯ ಕಜ್ಜಾಯಗಳನ್ನು ನೈವೇದ್ಯ ಮಾಡುವುದು ಸಹಜ. ಆದರೆ, ಸಸ್ಯಾಹಾರಿ ಸಿಹಿ-ಖಾರದ ಜೊತೆಗೆ ಮಾಂಸಾಹಾರಿ ಪದಾರ್ಥಗಳನ್ನೂ ನೈವೇದ್ಯ ಮಾಡುವ ವಾಡಿಕೆ ಇಲ್ಲಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ಕುಟುಂಬವೊಂದರಲ್ಲಿ ಗಣೇಶನಿಗೆ ನಾನ್ -ವೆಬ್ ನೈವೇದ್ಯ ಮಾಡುವ ರೂಢಿ ಇದೆ. ಗಣೇಶ ಚತುರ್ಥಿಯ ಮಾರನೇ ದಿನ ಗಣೇಶ ಮತ್ತು ಆತನ ವಾಹನ ಮೂಷಕನಿಗೆ ನಾನ್ ವೆಜ್ ಭಕ್ಷ್ಯ ಭೋಜನಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ಇಲ್ಲಿ ಲಾಡು ಬದಲು ಖೀಮಾ ಉಂಡಿ, ಕರಿಗಡುಬು ಬದಲು ಮಟನ್, ಚಿಕನ್, ಫಿಶ್ ಜೊತೆಗೆ ಬಿರಿಯಾನಿ ಇತ್ಯಾದಿ ನೈವೇದ್ಯ ಅರ್ಪಿಸಲಾಗುತ್ತದೆ ಎನ್ನುತ್ತಾರೆ ನಾಗೇಶ ಸಾ ಕಲಬುರಗಿ ಮತ್ತು ಅವರ ಕುಟುಂಬದ ಸದಸ್ಯರು.
ಹೀಗೆ ನಾನ್ ವೆಜ್ ನೈವೇದ್ಯ ಮಾಡ್ತಿರೋರು ಸಾವಜಿ ಸಮುದಾಯದವರು. ಗಣೇಶ ಚತುರ್ಥಿಯ ಮರು ದಿನ 'ಇಲಿವಾರ' ಅಂತಾನೇ ಸಾವಜಿ ಸಮುದಾಯದವರು ಆಚರಿಸುತ್ತಾರೆ. ಮೂಷಕನಿಗೂ ವೆಜ್ ಜೊತೆ ನಾನ್ ವೆಜ್ ನೈವೇದ್ಯ ಅರ್ಪಿಸಲಾಗುತ್ತದೆ. ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.
ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆಯೇ ನಾನ್ ವೆಜ್ ತಿನ್ನೋದನ್ನು ಆರಂಭಿಸುತ್ತೇವೆ ಅಂತಾರೆ ಸಾವಜಿ ಸಮಾಜದವರು. ಗೌರಿಸುತ ಗಣಪತಿ ನಮಗೂ ಮಗನಿದ್ದಂತೆ. ಆತನೂ ನಾನ್ ವೆಜ್ ತಿನ್ನಲಿ ಅಂತ ನಾವು ಮಾಂಸ ನೈವೇದ್ಯವಾಗಿ ಇಡ್ತೇವೆ. ಆತನಿಗೆ ನಾನ್ ವೆಜ್ ನೈವೇದ್ಯ ಮಾಡಿದ ನಂತರ ನಾವು ತಿಂತೇವೆ ಎನ್ನುತ್ತಾರೆ ಕುಟುಂಬದವರು.
ವಾಣಿಜ್ಯ ನಗರಿ ಹುಬ್ಬಳ್ಳಿಯ ಕುಟುಂಬವೊಂದರಲ್ಲಿ ಗಣೇಶನಿಗೆ ನಾನ್ -ವೆಬ್ ನೈವೇದ್ಯ ಮಾಡುವ ರೂಢಿ ಇದೆ. ಗಣೇಶ ಚತುರ್ಥಿಯ ಮಾರನೇ ದಿನ ಗಣೇಶ ಮತ್ತು ಆತನ ವಾಹನ ಮೂಷಕನಿಗೆ ನಾನ್ ವೆಜ್ ಭಕ್ಷ್ಯ ಭೋಜನಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ಇಲ್ಲಿ ಲಾಡು ಬದಲು ಖೀಮಾ ಉಂಡಿ, ಕರಿಗಡುಬು ಬದಲು ಮಟನ್, ಚಿಕನ್, ಫಿಶ್ ಜೊತೆಗೆ ಬಿರಿಯಾನಿ ಇತ್ಯಾದಿ ನೈವೇದ್ಯ ಅರ್ಪಿಸಲಾಗುತ್ತದೆ ಎನ್ನುತ್ತಾರೆ ನಾಗೇಶ ಸಾ ಕಲಬುರಗಿ ಮತ್ತು ಅವರ ಕುಟುಂಬದ ಸದಸ್ಯರು.
ಹೀಗೆ ನಾನ್ ವೆಜ್ ನೈವೇದ್ಯ ಮಾಡ್ತಿರೋರು ಸಾವಜಿ ಸಮುದಾಯದವರು. ಗಣೇಶ ಚತುರ್ಥಿಯ ಮರು ದಿನ 'ಇಲಿವಾರ' ಅಂತಾನೇ ಸಾವಜಿ ಸಮುದಾಯದವರು ಆಚರಿಸುತ್ತಾರೆ. ಮೂಷಕನಿಗೂ ವೆಜ್ ಜೊತೆ ನಾನ್ ವೆಜ್ ನೈವೇದ್ಯ ಅರ್ಪಿಸಲಾಗುತ್ತದೆ. ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.
ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆಯೇ ನಾನ್ ವೆಜ್ ತಿನ್ನೋದನ್ನು ಆರಂಭಿಸುತ್ತೇವೆ ಅಂತಾರೆ ಸಾವಜಿ ಸಮಾಜದವರು. ಗೌರಿಸುತ ಗಣಪತಿ ನಮಗೂ ಮಗನಿದ್ದಂತೆ. ಆತನೂ ನಾನ್ ವೆಜ್ ತಿನ್ನಲಿ ಅಂತ ನಾವು ಮಾಂಸ ನೈವೇದ್ಯವಾಗಿ ಇಡ್ತೇವೆ. ಆತನಿಗೆ ನಾನ್ ವೆಜ್ ನೈವೇದ್ಯ ಮಾಡಿದ ನಂತರ ನಾವು ತಿಂತೇವೆ ಎನ್ನುತ್ತಾರೆ ಕುಟುಂಬದವರು.