ಕಾಂಗ್ರೆಸ್ ಗ್ಯಾರಂಟಿ ಗಲಾಟೆ; ಕಂಡೀಷನ್ ಹಾಕಿದ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ
1050 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ಚುನಾವಣೆಗೂ ಮೊದಲು ಎಲ್ಲವೂ ಉಚಿತ ಎಂದಿದ್ದ ಕಾಂಗ್ರೆಸ್, ಈಗ ಒಂದೊಂದು ಗ್ಯಾರಂಟಿಗೂ ಕಂಡೀಷನ್ ಹಾಕುತ್ತಿದೆ. ಹೀಗಾಗಿ ಸಾರ್ವಜನಿಕರಲ್ಲಿ ಗೊಂದಲ ಮೂಡಿದ್ದು, ಆಕ್ರೋಶಕ್ಕೂ ಕಾರಣವಾಗಿದೆ. ಹುಬ್ಬಳ್ಳಿಯ ಮಂದಿ ತಮ್ಮದೇ ಆದ ಪ್ರತಿಕ್ರಿಯೆ ನೀಡಿದ್ದಾರೆ.
ಕಾಟಾಚಾರಕ್ಕೆ ಯೋಜನೆ ಜಾರಿ ಮಾಡಬಾರದು. ಬಡವರಿಗೆ ನಿಜವಾದ ಅರ್ಹ ಫಲಾನುಭವಿಗಳಿಗೆ ಮುಟ್ಟಬೇಕು. ಮಹಿಳೆಯರಿಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣ, 2000 ಸಾವಿರ ರೂ. ನೀಡುವುದು ಯಾರಿಗೆ ಅಂತಾ ಸ್ಪಷ್ಟನೆ ಸರಿಯಾಗಿ ಇಲ್ಲ ಎಂದು ಹೇಳಿದ್ದಾರೆ. ಅಕ್ಕಿ ಬದಲಾಗಿ ಬೇರೆ ಬೇರೆ ದವಸ ಧಾನ್ಯಗಳನ್ನು ನೀಡಿದರೆ ಅನುಕೂಲ ಆಗುತ್ತದೆ. ಮನೆಯೊಡತಿಗಷ್ಟೇ ಅಲ್ಲ ನಮಗೂ ಕೊಡಿ ಎಂದು ಹೇಳಿದ್ದಾರೆ. ಪುರುಷರೂ ಕೂಡ ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಎಲ್ಲ ಕಡೆಗಳಿಂದ ಕೂಗು ಈಗ ಹೆಚ್ಚಾಗುತ್ತಿದೆ. ಮನೆಯ ಆಗು ಹೋಗುಗಳ ಜೊತೆಗೆ ಇಡೀ ಜವಾಬ್ದಾರಿ ನೋಡಿಕೊಂಡು ಹೋಗುವ ಮನೆಯೊಡೆಯನಿಗೂ ಮಾಸಿಕ 2 ಸಾವಿರ ರೂಪಾಯಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಟಾಚಾರಕ್ಕೆ ಯೋಜನೆ ಜಾರಿ ಮಾಡಬಾರದು. ಬಡವರಿಗೆ ನಿಜವಾದ ಅರ್ಹ ಫಲಾನುಭವಿಗಳಿಗೆ ಮುಟ್ಟಬೇಕು. ಮಹಿಳೆಯರಿಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣ, 2000 ಸಾವಿರ ರೂ. ನೀಡುವುದು ಯಾರಿಗೆ ಅಂತಾ ಸ್ಪಷ್ಟನೆ ಸರಿಯಾಗಿ ಇಲ್ಲ ಎಂದು ಹೇಳಿದ್ದಾರೆ. ಅಕ್ಕಿ ಬದಲಾಗಿ ಬೇರೆ ಬೇರೆ ದವಸ ಧಾನ್ಯಗಳನ್ನು ನೀಡಿದರೆ ಅನುಕೂಲ ಆಗುತ್ತದೆ. ಮನೆಯೊಡತಿಗಷ್ಟೇ ಅಲ್ಲ ನಮಗೂ ಕೊಡಿ ಎಂದು ಹೇಳಿದ್ದಾರೆ. ಪುರುಷರೂ ಕೂಡ ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಎಲ್ಲ ಕಡೆಗಳಿಂದ ಕೂಗು ಈಗ ಹೆಚ್ಚಾಗುತ್ತಿದೆ. ಮನೆಯ ಆಗು ಹೋಗುಗಳ ಜೊತೆಗೆ ಇಡೀ ಜವಾಬ್ದಾರಿ ನೋಡಿಕೊಂಡು ಹೋಗುವ ಮನೆಯೊಡೆಯನಿಗೂ ಮಾಸಿಕ 2 ಸಾವಿರ ರೂಪಾಯಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.