ಸೋರುತಿಹುದು ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿ ನಗರಿಯಲ್ಲಿ ವರುಣನ ರುದ್ರನರ್ತನ
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಹುಬ್ಬಳ್ಳಿ: ಬಡವರ ಸಂಜೀವಿನಿ ಎಂದು ಹೆಸರಾದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಸ್ಥಿತಿಯನ್ನು ಇಂದು ಸುರಿದ ಮಳೆಯಿಂದ ಬಯಲಾಗಿದೆ, ಸಂಜೆ ನಗರದಲ್ಲಿ ಸುರಿದ ಬಾರಿ ಮಳೆಗೆ ಕಿಮ್ಸ್ ಆಸ್ಪತ್ರೆಯ ಒಳಗಡೆಯೇ ನೀರು ಬಂದು ರೋಗಿಯ ಸಂಬಂಧಿಕರು, ರೋಗಿಗಳು, ಕಿಮ್ಸ್ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಪರದಾಡಿದ ದೃಶ್ಯಗಳು ಕಿಮ್ಸ್ ಆಸ್ಪತ್ರೆಯ ICU ಮುಂಭಾಗದಲ್ಲಿ ಕಂಡು ಬಂದವು.
ಕಿಮ್ಸ್ ಆಸ್ಪತ್ರೆಯ ನಿರ್ವಹಣೆಗಾಗಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ಅನುದಾನ ಹರಿದು ಬಂದರು ಕೂಡಾ, ಮಳೆಯ ನೀರು ಆಸ್ಪತ್ರೆಯೊಳಗೆ ಸೇರುವುದನ್ನು ತಪ್ಪಿಸಲು ಆಗಿಲ್ಲ. ನವಲಗುಂದ, ಕುಂದಗೋಳ ಪಟ್ಟಣದಲ್ಲಿಯೂ ಸಹ ಮಳೆರಾಯ ತನ್ನ ಆರ್ಭಟ ತೋರಿಸಿದ್ದಾನೆ. ಸುಮಾರು ದಿನಗಳಿಂದ ಬಿಸಿಲಿನಿಂದ ತತ್ತರಿಸಿದ್ದ ಪ್ರದೇಶಗಳಿಗೆ ಮಳೆರಾಯ ತಂಪೆರದಿದ್ದಾನೆ. ರೈತರ ಮೊಗದಲ್ಲಿ ಮಳೆಯ ಆಗಮನವು ಮಂದಹಾಸ ಮೂಡಿಸಿದೆ.
ಕಿಮ್ಸ್ ಆಸ್ಪತ್ರೆಯ ನಿರ್ವಹಣೆಗಾಗಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ಅನುದಾನ ಹರಿದು ಬಂದರು ಕೂಡಾ, ಮಳೆಯ ನೀರು ಆಸ್ಪತ್ರೆಯೊಳಗೆ ಸೇರುವುದನ್ನು ತಪ್ಪಿಸಲು ಆಗಿಲ್ಲ. ನವಲಗುಂದ, ಕುಂದಗೋಳ ಪಟ್ಟಣದಲ್ಲಿಯೂ ಸಹ ಮಳೆರಾಯ ತನ್ನ ಆರ್ಭಟ ತೋರಿಸಿದ್ದಾನೆ. ಸುಮಾರು ದಿನಗಳಿಂದ ಬಿಸಿಲಿನಿಂದ ತತ್ತರಿಸಿದ್ದ ಪ್ರದೇಶಗಳಿಗೆ ಮಳೆರಾಯ ತಂಪೆರದಿದ್ದಾನೆ. ರೈತರ ಮೊಗದಲ್ಲಿ ಮಳೆಯ ಆಗಮನವು ಮಂದಹಾಸ ಮೂಡಿಸಿದೆ.