ಕುಂದಗೋಳ: ಮೆಣಸಿನಕಾಯಿ ಬೆಳೆಗೆ ರೋಗ, ಅತಿವೃಷ್ಟಿಯಿಂದ ಹಾನಿ, ಬೆಳೆ ಇಳಿಮುಖ
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಧಾರವಾಡ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದ ಕುಂದಗೋಳ ತಾಲೂಕಿನ ಮೆಣಸಿನಕಾಯಿಯ ಘಾಟು ಪ್ರತಿ ಋತುವಿನಲ್ಲೂ ಇಳಿಕೆಯಾಗುತ್ತಿದೆ. ರೈತರಿಗೆ ಮೆಣಸಿನಕಾಯಿ ಬೆಳೆ ಬೆಳೆಯಲು ಇಚ್ಚಾಶಕ್ತಿ ಕುಂದುತ್ತಲಿದೆ. ಇದರಿಂದಾಗಿ ರೈತರು ಬೇರೆ ಬೆಳೆಯತ್ತ ಮುಖ ಮಾಡಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಎಲ್ಲೆಡೆ ಸುಮಾರು 20 ಸಾವಿರ ಹೆಕ್ಟೇರ್ನಿಂದ 12 ಸಾವಿರ ಹೆಕ್ಟೇರ್ ಜಮೀನು ಕಣ, ಕಟ್ಟೆಗಳಲ್ಲಿ ಮೆಣಸಿನಕಾಯಿ ಕಾಣಸಿಗುತ್ತಿತ್ತು. ಆದರೆ, ಕಳೆದ ಋತುವಿನಲ್ಲಿ ಮೆಣಸಿಕಾಯಿ ಬೆಳೆಯು ಕೇವಲ 8,500 ಹೆಕ್ಟೇರ್ಗೆ ಹಾಗೂ 2023-24 ನೇ ಸಾಲಿನಲ್ಲಿ 6000 ಹೆಕ್ಟೇರ್ಗೆ ಇಳಿಕೆಯಾಗಿದೆ.
ಈ ವರ್ಷ ಮುಂಗಾರು ಋತು ಇನ್ನೇನು ಕೆಲ ದಿನಗಳಲ್ಲಿ ಆರಂಭವಾಗಲಿದ್ದು, ರೈತರು ಮೆಣಸಿನಕಾಯಿ ಬೆಳೆಯಲು ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸದ ಅಗತ್ಯವಿದೆ ಅಂತಾರೆ ಕುಂದಗೋಳ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಕರೋಶಿ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಎಲ್ಲೆಡೆ ಸುಮಾರು 20 ಸಾವಿರ ಹೆಕ್ಟೇರ್ನಿಂದ 12 ಸಾವಿರ ಹೆಕ್ಟೇರ್ ಜಮೀನು ಕಣ, ಕಟ್ಟೆಗಳಲ್ಲಿ ಮೆಣಸಿನಕಾಯಿ ಕಾಣಸಿಗುತ್ತಿತ್ತು. ಆದರೆ, ಕಳೆದ ಋತುವಿನಲ್ಲಿ ಮೆಣಸಿಕಾಯಿ ಬೆಳೆಯು ಕೇವಲ 8,500 ಹೆಕ್ಟೇರ್ಗೆ ಹಾಗೂ 2023-24 ನೇ ಸಾಲಿನಲ್ಲಿ 6000 ಹೆಕ್ಟೇರ್ಗೆ ಇಳಿಕೆಯಾಗಿದೆ.
ಈ ವರ್ಷ ಮುಂಗಾರು ಋತು ಇನ್ನೇನು ಕೆಲ ದಿನಗಳಲ್ಲಿ ಆರಂಭವಾಗಲಿದ್ದು, ರೈತರು ಮೆಣಸಿನಕಾಯಿ ಬೆಳೆಯಲು ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸದ ಅಗತ್ಯವಿದೆ ಅಂತಾರೆ ಕುಂದಗೋಳ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಕರೋಶಿ.