ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಿಲ್ಲ ಎಂದ ಬಿಜೆಪಿ, ಪ್ರಲ್ಹಾದ್ ಜೋಶಿ ಸೋಲಿಸಲು ದಿಂಗಾಲೇಶ್ವರ ಶ್ರೀ ಕರೆ!
1181 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ''ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಲಿಂಗಾಯತ ಸಮಾಜದ ವಿರೋಧಿ ಆಗಿದ್ದು ಆ ಕ್ಷೇತ್ರದಿಂದ ಬದಲಾವಣೆ ಮಾಡಬೇಕು ಎಂದು ಮಾರ್ಚ್ 31 ರಂದು ಗಡುವು ಕೊಡಲಾಗಿತ್ತು. ಆದರೆ, ನಮ್ಮ ಗಡುವು ಒಳಗೆ ಭಾರತೀಯ ಜನತಾ ಪಕ್ಷದ ನಾಯಕ ಯಡಿಯೂರಪ್ಪ ಅವರು ಯಾವುದೇ ಕಾರಣಕ್ಕೂ ಜೋಶಿ ಅವರನ್ನು ಬದಲಾವಣೆ ಮಾಡಲ್ಲ ಅಂತಾ ಹೇಳಿದ್ದಾರೆ. ಆದ್ದರಿಂದ ತಮ್ಮ ನಿಲುವು ಸಹ ಅಚಲವಾಗಿದ್ದು, ಅವರನ್ನು ಸೋಲಿಸಲು ಚಿಂತನ ಮಂಥನ ನಡೆಸಲಾಗುತ್ತದೆ'' ಎಂದು ಫಕೀರ ದಿಂಗಾಲೇಶ್ವರ ಶ್ರೀ ಸ್ಪಷ್ಟಪಡಿಸಿದರು.
ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಈವರೆಗೂ ನಾವು ಕೊಟ್ಟಿರುವ ಗಡುವು ಮುಗಿಯುವ ಮೊದಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಯಾವುದೇ ಕಾರಣಕ್ಕೂ ಪ್ರಲ್ಹಾದ್ ಜೋಶಿಯವರನ್ನು ಧಾರವಾಡ ಲೋಕಸಭಾ ಕ್ಷೇತ್ರದಿಂದ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಅವರು ಬದಲಿ ಮಾಡದಿದ್ದರೆ ಮತದಾರ ಪ್ರಭುಗಳು ಬದಲಿ ಮಾಡಲಿದ್ದಾರೆ. ನಾವು ಕೂಡಾ ಅವರ ಜೊತೆ ಸೇರಿ ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸುವುದೆ ನಮ್ಮ ಗುರಿಯಾಗಿದೆ. ಪ್ರಲ್ಹಾದ್ ಜೋಶಿ ಅವರು ಈ ಹಿಂದೆಯೇ ಎರಡು ಬಾರಿ ನಮ್ಮ ಹತ್ತಿರ ಕ್ಷಮೆ ಕೇಳಿದ್ದಾರೆ. ಆಗ ನಾವು ಕ್ಷಮಾದಾನ ಮಾಡಿದ್ದೇವೆ. ಅವರು ಚುನಾವಣೆಯ ಸಮಯದಲ್ಲಿ ಕ್ಷಮೆ ಕೇಳುತ್ತಾರೆ. ಗೆದ್ದು ಬಂದ ನಂತರ ಎಲ್ಲಾ ಸ್ವಾಮೀಜಿಗಳನ್ನು, ನಾಯಕರನ್ನು, ನೌಕರರನ್ನು, ವ್ಯಾಪಾರಿಗಳನ್ನು , ಜನ ಪ್ರತಿನಿಧಿಗಳನ್ನು ತುಳಿಯುವ ಕೆಲಸ ಮಾಡಿದ್ದಾರೆ. ಮಹದಾಯಿ ಯೋಜನೆ ಹೋರಾಟಗಾರ ವಿರೇಶ ಸೊಬರದಮಠ, ವೀರಣ್ಣ ಎಳಲಿ ಇದ್ದರು.
ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಈವರೆಗೂ ನಾವು ಕೊಟ್ಟಿರುವ ಗಡುವು ಮುಗಿಯುವ ಮೊದಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಯಾವುದೇ ಕಾರಣಕ್ಕೂ ಪ್ರಲ್ಹಾದ್ ಜೋಶಿಯವರನ್ನು ಧಾರವಾಡ ಲೋಕಸಭಾ ಕ್ಷೇತ್ರದಿಂದ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಅವರು ಬದಲಿ ಮಾಡದಿದ್ದರೆ ಮತದಾರ ಪ್ರಭುಗಳು ಬದಲಿ ಮಾಡಲಿದ್ದಾರೆ. ನಾವು ಕೂಡಾ ಅವರ ಜೊತೆ ಸೇರಿ ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸುವುದೆ ನಮ್ಮ ಗುರಿಯಾಗಿದೆ. ಪ್ರಲ್ಹಾದ್ ಜೋಶಿ ಅವರು ಈ ಹಿಂದೆಯೇ ಎರಡು ಬಾರಿ ನಮ್ಮ ಹತ್ತಿರ ಕ್ಷಮೆ ಕೇಳಿದ್ದಾರೆ. ಆಗ ನಾವು ಕ್ಷಮಾದಾನ ಮಾಡಿದ್ದೇವೆ. ಅವರು ಚುನಾವಣೆಯ ಸಮಯದಲ್ಲಿ ಕ್ಷಮೆ ಕೇಳುತ್ತಾರೆ. ಗೆದ್ದು ಬಂದ ನಂತರ ಎಲ್ಲಾ ಸ್ವಾಮೀಜಿಗಳನ್ನು, ನಾಯಕರನ್ನು, ನೌಕರರನ್ನು, ವ್ಯಾಪಾರಿಗಳನ್ನು , ಜನ ಪ್ರತಿನಿಧಿಗಳನ್ನು ತುಳಿಯುವ ಕೆಲಸ ಮಾಡಿದ್ದಾರೆ. ಮಹದಾಯಿ ಯೋಜನೆ ಹೋರಾಟಗಾರ ವಿರೇಶ ಸೊಬರದಮಠ, ವೀರಣ್ಣ ಎಳಲಿ ಇದ್ದರು.