ವರ್ಷಗಳೇ ಕಳೆದರೂ ಮುಗಿಯುತ್ತಿಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ ; ಜನರಿಗೆ ನಿತ್ಯ ನರಕ ದರ್ಶನ
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಹುಬ್ಬಳ್ಳಿ,: ಅತೀ ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿಗೆ ವಿಶ್ವದರ್ಜೆ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಆರಂಭವಾಗಿದೆ. ಈ ಸ್ಮಾರ್ಟ್ ಸಿಟಿ ಯೋಜನೆ ಜನರಿಗೆ ಅನುಕೂಲ ಆಗಿದ್ದಕ್ಕಿಂತ ಅನಾನುಕೂಲಗಳನ್ನು ಸೃಷ್ಟಿ ಮಾಡುತ್ತಿರುವುದೇ ಹೆಚ್ಚು. ಎಷ್ಟೋ ವರ್ಷಗಳಿಂದ ಮಂದಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಜನರಿಗೆ ಜೀವ ಹಿಂಡುತ್ತಿವೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳು ಜನಸಾಮಾನ್ಯರಿಗೆ ಇನ್ನಿಲ್ಲದ ತೊಂದರೆ ನೀಡುತ್ತಿದೆ. ಸ್ಮಾರ್ಟ್ ಸಿಟಿ ಅಂದರೆ ಸಾಕು ಹುಬ್ಬಳ್ಳಿ ಜನ ನಿದ್ದೆಗಣ್ಣಿನಲ್ಲಿ ಸಹ ಬೆಚ್ಚಿಬೀಳುತ್ತಾರೆ. ಸ್ಮಾರ್ಟ್ ಸಿಟಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ಅವೈಜ್ಞಾನಿಕ ಪ್ಲಾನ್ಗಳು, ಇಂಜಿನಿಯರ್ಗಳ ಅರ್ಥವಿಲ್ಲದ ಕಾಮಗಾರಿಗಳು, ಕೈಕಟ್ಟಿ ಕುಳಿತಿರುವ ಮಹಾನಗರ ಪಾಲಿಕೆ ಜಾಣ ನಡೆ. ಜನರಿಗೆ ನಿತ್ಯ ನರಕ ದರ್ಶನ ಮಾಡಿಸುತ್ತಿದೆ.
ಸ್ಮಾರ್ಟ್ ಯೋಜನೆಯಡಿ ಅಭಿವೃದ್ಧಿಗೊಳುತ್ತಿರುವ ನಗರದ ರಸ್ತೆಗಳ ವಾಹನ ಸವಾರಿಗೆ ಮರಣ ಶಾಸನಗಳಾಗಿವೆ. ಈ ಕಾಮಗಾರಿಗಳ ನೆಪ ಹೇಳಿ ಈಗ ನಗರ ಸಾರಿಗೆ ಸಹ ಜನರಿಗೆ ಸಂಕಷ್ಟ ನೀಡುತ್ತಿದೆ. ಸ್ಮಾರ್ಟ್ ಕಾಮಗಾರಿಗಳು ನಡೆಯುತ್ತಿರುವ ಏರಿಯಾಗಳಲ್ಲಿ ಸುಮಾರು 6 ತಿಂಗಳಿಂದ ಸಿಟಿ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಶಾಲೆಯ ಮಕ್ಕಳು, ಉದ್ಯೋಗಸ್ಥರು ಪರದಾಡುವಂತಾಗಿದೆ.
ನಗರದ ಅಶೋಕನಗರ, ಅಧ್ಯಾಪಕರ ನಗರ, ಉಪ ಕಾರಾಗೃಹ , ನೃತಪತುಂಗ ಬೆಟ್ಟ, ಪತ್ರಕರ್ತ ನಗರ ಸೇರಿದಂತೆ ವಿವಿಧ ಏರಿಯಾಗಳಲ್ಲಿ ಏಕಕಾಲದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವೈಟ್ ಟಾಂಪಿಂಗ್ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಹಕಾರದಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ.
ಎಲ್ಲಾ ರಸ್ತೆಗಳನ್ನು ಅಗೆದ ಕಾರಣ ಬಸ್ ಸಂಚಾರವನ್ನು ನಿಲ್ಲಿಸಲಾಗಿತ್ತು. ಸಾರ್ವಜನಿಕರು ಸಹ ಕಾಮಗಾರಿಗಳು ಎರಡು ಮೂರು ತಿಂಗಳಲ್ಲಿ ಮುಗಿಯುತ್ತೆ, ಮುಂದೆ ಸರಾಗವಾಗಿ ಸಂಚಾರ ಮಾಡಬಹುದು. ಒಳ್ಳೆಯ ರಸ್ತೆಗಳಾಗುತ್ತವೆ ಅಂತ ಆರಂಭದಲ್ಲಿ ಖುಷಿಪಟ್ಟಿದ್ದರು. ಆಗ ಖುಷಿಪಟ್ಟ ಜನ ಈಗ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕಾಮಗಾರಿಗಳು ಆರಂಭವಾಗಿ ವರ್ಷಗಳು ಕಳೆದರೂ ಇನ್ನೂ ಮುಗಿಯುತ್ತಿಲ್ಲ ಕಾಮಾಗರಿಗಳಿಂದ ಜನ ಬೇಸತ್ತಿದ್ದು ಶೀಘ್ರವೇ ಕಾಮಗಾರಿಗೆ ಮುಕ್ತಿ ಕಾಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳು ಜನಸಾಮಾನ್ಯರಿಗೆ ಇನ್ನಿಲ್ಲದ ತೊಂದರೆ ನೀಡುತ್ತಿದೆ. ಸ್ಮಾರ್ಟ್ ಸಿಟಿ ಅಂದರೆ ಸಾಕು ಹುಬ್ಬಳ್ಳಿ ಜನ ನಿದ್ದೆಗಣ್ಣಿನಲ್ಲಿ ಸಹ ಬೆಚ್ಚಿಬೀಳುತ್ತಾರೆ. ಸ್ಮಾರ್ಟ್ ಸಿಟಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ಅವೈಜ್ಞಾನಿಕ ಪ್ಲಾನ್ಗಳು, ಇಂಜಿನಿಯರ್ಗಳ ಅರ್ಥವಿಲ್ಲದ ಕಾಮಗಾರಿಗಳು, ಕೈಕಟ್ಟಿ ಕುಳಿತಿರುವ ಮಹಾನಗರ ಪಾಲಿಕೆ ಜಾಣ ನಡೆ. ಜನರಿಗೆ ನಿತ್ಯ ನರಕ ದರ್ಶನ ಮಾಡಿಸುತ್ತಿದೆ.
ಸ್ಮಾರ್ಟ್ ಯೋಜನೆಯಡಿ ಅಭಿವೃದ್ಧಿಗೊಳುತ್ತಿರುವ ನಗರದ ರಸ್ತೆಗಳ ವಾಹನ ಸವಾರಿಗೆ ಮರಣ ಶಾಸನಗಳಾಗಿವೆ. ಈ ಕಾಮಗಾರಿಗಳ ನೆಪ ಹೇಳಿ ಈಗ ನಗರ ಸಾರಿಗೆ ಸಹ ಜನರಿಗೆ ಸಂಕಷ್ಟ ನೀಡುತ್ತಿದೆ. ಸ್ಮಾರ್ಟ್ ಕಾಮಗಾರಿಗಳು ನಡೆಯುತ್ತಿರುವ ಏರಿಯಾಗಳಲ್ಲಿ ಸುಮಾರು 6 ತಿಂಗಳಿಂದ ಸಿಟಿ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಶಾಲೆಯ ಮಕ್ಕಳು, ಉದ್ಯೋಗಸ್ಥರು ಪರದಾಡುವಂತಾಗಿದೆ.
ನಗರದ ಅಶೋಕನಗರ, ಅಧ್ಯಾಪಕರ ನಗರ, ಉಪ ಕಾರಾಗೃಹ , ನೃತಪತುಂಗ ಬೆಟ್ಟ, ಪತ್ರಕರ್ತ ನಗರ ಸೇರಿದಂತೆ ವಿವಿಧ ಏರಿಯಾಗಳಲ್ಲಿ ಏಕಕಾಲದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವೈಟ್ ಟಾಂಪಿಂಗ್ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಹಕಾರದಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ.
ಎಲ್ಲಾ ರಸ್ತೆಗಳನ್ನು ಅಗೆದ ಕಾರಣ ಬಸ್ ಸಂಚಾರವನ್ನು ನಿಲ್ಲಿಸಲಾಗಿತ್ತು. ಸಾರ್ವಜನಿಕರು ಸಹ ಕಾಮಗಾರಿಗಳು ಎರಡು ಮೂರು ತಿಂಗಳಲ್ಲಿ ಮುಗಿಯುತ್ತೆ, ಮುಂದೆ ಸರಾಗವಾಗಿ ಸಂಚಾರ ಮಾಡಬಹುದು. ಒಳ್ಳೆಯ ರಸ್ತೆಗಳಾಗುತ್ತವೆ ಅಂತ ಆರಂಭದಲ್ಲಿ ಖುಷಿಪಟ್ಟಿದ್ದರು. ಆಗ ಖುಷಿಪಟ್ಟ ಜನ ಈಗ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕಾಮಗಾರಿಗಳು ಆರಂಭವಾಗಿ ವರ್ಷಗಳು ಕಳೆದರೂ ಇನ್ನೂ ಮುಗಿಯುತ್ತಿಲ್ಲ ಕಾಮಾಗರಿಗಳಿಂದ ಜನ ಬೇಸತ್ತಿದ್ದು ಶೀಘ್ರವೇ ಕಾಮಗಾರಿಗೆ ಮುಕ್ತಿ ಕಾಣಿಸಬೇಕು ಎಂದು ಮನವಿ ಮಾಡಿದ್ದಾರೆ.