ಹುಬ್ಬಳ್ಳಿಯಲ್ಲಿ ಕಡಿಮೆ ದರದಲ್ಲಿ ಈರುಳ್ಳಿ, ಕಡಲೇ ಬೇಳೆ ಮಾರಾಟ: ಓಡಾಡುತ್ತಿವೆ 'ಭಾರತ್' ಬ್ರ್ಯಾಂಡ್ ಗಾಡಿಗಳು
1147 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಇದೀಗ ಈರುಳ್ಳಿ ದರ ಶತಕದ ಹೊಸ್ತಿಲಲ್ಲಿದೆ. ಇದರ ಜೊತೆಗೆ ದೀಪಾವಳಿಯಲ್ಲಿ ಕಡಲೆ ಬೇಳೆ ಸೇರಿದಂತೆ ಆಹಾರ ಧಾನ್ಯಗಳ ಬೆಲೆ ಸಹ ಏರಿಕೆ ಕಂಡಿದೆ. ಈ ಹಿನ್ನಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಬ್ಸಿಡಿ ಮೂಲಕ ಈರುಳ್ಳಿ ಹಾಗೂ ಕಡಲೆ ಬೇಳೆ ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವು ಎರಡು ಸಂಸ್ಥೆಗಳಾದ NCCF ಹಾಗೂ NAAFD ಜೊತೆಗೆ ಸೇರಿ ಜನರಿಗೆ ಅನಕೂಲ ಆಗಲಿ ಎನ್ನುವ ಕಾರಣಕ್ಕೆ ಈರುಳ್ಳಿ ಹಾಗೂ ಬೇಳೆಗಳನ್ನು ಸಬ್ಸಿಡಿ ಮೂಲಕ ವಿತರಣೆ ಮಾಡುತ್ತಿದೆ. ಭಾರತ್ ಬ್ರ್ಯಾಂಡ್ನ ಗಾಡಿಗಳು ಈಗ ಎಲ್ಲೆಲ್ಲೂ ಕಾಣಸಿಗುತ್ತಿವೆ.
ಈರುಳ್ಳಿಗೆ ಮಾರುಕಟ್ಟೆಯಲ್ಲಿ 90 ರಿಂದ 100 ರೂಪಾಯಿ ಬೆಲೆ ಇದೆ. ಆದರೆ, ಕೇಂದ್ರ ಸರ್ಕಾರ 50 ರೂಪಾಯಿಗೆ ಎರಡು ಕೆಜಿ ಈರುಳ್ಳಿಯನ್ನು ಕೊಡುತ್ತಿದೆ. ಇದರ ಜೊತೆಗೆ ಕಡಲೇ ಬೇಳೆ 120 ರಿಂದ 130 ಇದ್ದರೆ, ಕೇವಲ 60 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ವೀಣಾ ಚೇತನ ಬಾರದ್ವಾಡ , ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಹಾಗೂ ಮಹಾನಗರ ಪಾಲಿಕೆ ಸದಸ್ಯ ರಾಜಣ್ಷ ಕೊರವಿ ಅವರು ಸಬ್ಸಿಡಿ ದರದಲ್ಲಿ ಮಾರಾಟವಾಗುತ್ತಿರುವ ಗಾಡಿಯ ಕುರಿತು ಮಾಹಿತಿ ಹಂಚಿದರು.
ಕಡಲೆ ಬೇಳೆ ಹಾಗೂ ಈರುಳ್ಳಿ ವಾಹನ ಬರುತ್ತಲೇ ಜನರು ಈರುಳ್ಳಿಗೆ ಮುಗಿ ಬೀಳುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಜನ 50 ರೂಪಾಯಿ ಕೊಟ್ಟು ಎರಡು ಕೆಜಿ ಈರುಳ್ಳಿ ಹಾಗೂ 60 ರೂಪಾಯಿಗೆ ಕಡಲೇ ಬೆಳೆ ಪಡೆದುಕೊಂಡರು. ಲೋಕಸಭೆ ಚುನಾವಣೆ ಹೊತ್ತಿಗೆ ಬೆಲೆ ಏರಿಕೆ ಬಿಸಿಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿದೆ.
ಈರುಳ್ಳಿಗೆ ಮಾರುಕಟ್ಟೆಯಲ್ಲಿ 90 ರಿಂದ 100 ರೂಪಾಯಿ ಬೆಲೆ ಇದೆ. ಆದರೆ, ಕೇಂದ್ರ ಸರ್ಕಾರ 50 ರೂಪಾಯಿಗೆ ಎರಡು ಕೆಜಿ ಈರುಳ್ಳಿಯನ್ನು ಕೊಡುತ್ತಿದೆ. ಇದರ ಜೊತೆಗೆ ಕಡಲೇ ಬೇಳೆ 120 ರಿಂದ 130 ಇದ್ದರೆ, ಕೇವಲ 60 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ವೀಣಾ ಚೇತನ ಬಾರದ್ವಾಡ , ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಹಾಗೂ ಮಹಾನಗರ ಪಾಲಿಕೆ ಸದಸ್ಯ ರಾಜಣ್ಷ ಕೊರವಿ ಅವರು ಸಬ್ಸಿಡಿ ದರದಲ್ಲಿ ಮಾರಾಟವಾಗುತ್ತಿರುವ ಗಾಡಿಯ ಕುರಿತು ಮಾಹಿತಿ ಹಂಚಿದರು.
ಕಡಲೆ ಬೇಳೆ ಹಾಗೂ ಈರುಳ್ಳಿ ವಾಹನ ಬರುತ್ತಲೇ ಜನರು ಈರುಳ್ಳಿಗೆ ಮುಗಿ ಬೀಳುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಜನ 50 ರೂಪಾಯಿ ಕೊಟ್ಟು ಎರಡು ಕೆಜಿ ಈರುಳ್ಳಿ ಹಾಗೂ 60 ರೂಪಾಯಿಗೆ ಕಡಲೇ ಬೆಳೆ ಪಡೆದುಕೊಂಡರು. ಲೋಕಸಭೆ ಚುನಾವಣೆ ಹೊತ್ತಿಗೆ ಬೆಲೆ ಏರಿಕೆ ಬಿಸಿಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿದೆ.