ಸೋನಿಯಾಗೆ ಬೈಯ್ಯುತ್ತಿದ್ದ ಸಿದ್ದರಾಮಯ್ಯ ಈಗ ರಾಹುಲ್ ಗಾಂಧಿ ಮುಂದೆ ಬಾಗಿ ನಿಂತಿದ್ದಾರೆ: ಪ್ರಲ್ಹಾದ್ ಜೋಶಿ
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಹುಬ್ಬಳ್ಳಿ: ಈಶ್ವರಪ್ಪರನ್ನು ದೆಹಲಿಗೆ ಕರೆದಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿತ್ತು. ಭೇಟಿಗೆ ಅವಕಾಶ ಕೊಟ್ಟಿಲ್ಲ ಅನ್ನೋದು ಮಾಧ್ಯಮಗಳ ಮೂಲಕ ಗೊತ್ತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಾನು ಸತ್ಯಾಸತ್ಯೆ ಪರಿಶೀಲನೆ ಮಾಡುವೆ. ಈಶ್ವರಪ್ಪ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಹೀಗಾಗಿ ಅವರು ಪಕ್ಷದ ಪರವಾಗಿ ಕೆಲಸ ಮಾಡುವ ವಿಶ್ವಾಸವಿದೆ ಎಂದರು.
''ಸಿದ್ದರಾಮಯ್ಯನವರನ್ನು ನಮ್ಮ ಪಕ್ಷಕ್ಕೆ ಬನ್ನಿ ಅಂತ ಯಾರು ಕರೆದಿಲ್ಲಾ. ಸಿದ್ದರಾಮಯ್ಯ ಅವರಿಗೆ ಯಾವುದೇ ನೀತಿ ಸಿದ್ಧಾಂತ ಇಲ್ಲ. ಜೆಡಿಎಸ್ ನಲ್ಲಿದ್ದಾಗ ಅವರು ಯಾವ ಯಾವ ರೀತಿ ಸೋನಿಯಾ ಗಾಂಧಿಗೆ ಬೈದಿದ್ದು ನೋಡಿದ್ರೆ, ಸೋನಿಯಾ ಗಾಂಧಿ ಸಿದ್ದರಾಮಯ್ಯ ಮುಖ ನೋಡ ಬಾರದು. ಇಂಥವರು ಈಗ ರಾಹುಲ್ ಗಾಂಧಿ ಮುಂದೆ ಸೊಂಟ ಬಗ್ಗಿಸಿ ನಿಲ್ಲತ್ತಾರೆ. ಈ ಬಾರಿ ಸಿಎಂ ಮಾಡದಿದ್ದರೆ ಅವರ ಬಣ್ಣ ಏನು ಅಂತ ಗೊತ್ತಾಗುತ್ತಿತ್ತು ಎಂದರು.
''ಸಿದ್ದರಾಮಯ್ಯ ಈಗಾಗಲೇ ಮೂರು ಬಾರಿ ಹೇಳಿದ್ದಾರೆ, ಇದು ನನ್ನ ಕೊನೆಯ ಚುನಾವಣಾ ಅಂತ. ಸಿದ್ದರಾಮಯ್ಯ ಅವರ ಆರೋಗ್ಯ ಚೆನ್ನಾಗಿರಲಿ, ಆರೋಗ್ಯಕರ ಚುನಾವಣೆ ಅವರು ಎದುರಿಸಲಿ'' ಎಂದರು.
ಬೂತ್ ಅಧ್ಯಕ್ಷರ ಮನೆಗೆ ಜಿಲ್ಲಾಧ್ಯಕ್ಷರು ಅಭಿಯಾನ ದೇಶದಲ್ಲಿಯೇ ಮೊದಲು. ಧಾರವಾಡ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗಿ ಈ ಅಭಿಯಾನ ಆರಂಭಿಸಿದ್ದಾರೆ. ಗುರುವಾರ ಚಾಲನೆ ನೀಡಿದ್ದೇನೆ. ದಲಿತ ಮುಖಂಡರ ಮನೆಗೆ ಭೇಟಿ ನೀಡಿರುವೆ. ಅವರ ಮನೆಯಲ್ಲಿ ಸತ್ಕಾರ ಮಾಡಿದ್ದಾರೆ. ಉಪಾಹಾರ ಸಹ ಮಾಡಿರುವೆ ಎಂದರು.
''ಸಿದ್ದರಾಮಯ್ಯನವರನ್ನು ನಮ್ಮ ಪಕ್ಷಕ್ಕೆ ಬನ್ನಿ ಅಂತ ಯಾರು ಕರೆದಿಲ್ಲಾ. ಸಿದ್ದರಾಮಯ್ಯ ಅವರಿಗೆ ಯಾವುದೇ ನೀತಿ ಸಿದ್ಧಾಂತ ಇಲ್ಲ. ಜೆಡಿಎಸ್ ನಲ್ಲಿದ್ದಾಗ ಅವರು ಯಾವ ಯಾವ ರೀತಿ ಸೋನಿಯಾ ಗಾಂಧಿಗೆ ಬೈದಿದ್ದು ನೋಡಿದ್ರೆ, ಸೋನಿಯಾ ಗಾಂಧಿ ಸಿದ್ದರಾಮಯ್ಯ ಮುಖ ನೋಡ ಬಾರದು. ಇಂಥವರು ಈಗ ರಾಹುಲ್ ಗಾಂಧಿ ಮುಂದೆ ಸೊಂಟ ಬಗ್ಗಿಸಿ ನಿಲ್ಲತ್ತಾರೆ. ಈ ಬಾರಿ ಸಿಎಂ ಮಾಡದಿದ್ದರೆ ಅವರ ಬಣ್ಣ ಏನು ಅಂತ ಗೊತ್ತಾಗುತ್ತಿತ್ತು ಎಂದರು.
''ಸಿದ್ದರಾಮಯ್ಯ ಈಗಾಗಲೇ ಮೂರು ಬಾರಿ ಹೇಳಿದ್ದಾರೆ, ಇದು ನನ್ನ ಕೊನೆಯ ಚುನಾವಣಾ ಅಂತ. ಸಿದ್ದರಾಮಯ್ಯ ಅವರ ಆರೋಗ್ಯ ಚೆನ್ನಾಗಿರಲಿ, ಆರೋಗ್ಯಕರ ಚುನಾವಣೆ ಅವರು ಎದುರಿಸಲಿ'' ಎಂದರು.
ಬೂತ್ ಅಧ್ಯಕ್ಷರ ಮನೆಗೆ ಜಿಲ್ಲಾಧ್ಯಕ್ಷರು ಅಭಿಯಾನ ದೇಶದಲ್ಲಿಯೇ ಮೊದಲು. ಧಾರವಾಡ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗಿ ಈ ಅಭಿಯಾನ ಆರಂಭಿಸಿದ್ದಾರೆ. ಗುರುವಾರ ಚಾಲನೆ ನೀಡಿದ್ದೇನೆ. ದಲಿತ ಮುಖಂಡರ ಮನೆಗೆ ಭೇಟಿ ನೀಡಿರುವೆ. ಅವರ ಮನೆಯಲ್ಲಿ ಸತ್ಕಾರ ಮಾಡಿದ್ದಾರೆ. ಉಪಾಹಾರ ಸಹ ಮಾಡಿರುವೆ ಎಂದರು.