ಕಾಂಗ್ರೆಸ್ ಗೊಂದಲದ ಗೂಡಾಗಿದೆ, ನೀರಿನ ವಿಚಾರವಾದಲ್ಲಿ ಕಾಂಗ್ರೆಸ್ ಅನ್ಯಾಯ ಮಾಡಿದೆ: ಪ್ರಲ್ಹಾದ್ ಜೋಶಿ
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
''ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಭಿಮಾನ ಕರ್ನಾಟಕ ಅಂತ ಮಾತನಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರವಾಗಿ ಯಾವುದೇ ಸಹಕಾರ ನೀಡುತ್ತಿಲ್ಲ. ಕೇಂದ್ರ ಜಲ ಸಂಪನ್ಮೂಲಗಳ ವಿಚಾರದಲ್ಲಿ ಅವರು ಸಹಕಾರ ಕೊಟ್ಟಿಲ್ಲ. ಇದನ್ನು ಅವರು ಎದೆ ಮುಟ್ಟಿಕೊಂಡು ಹೇಳಲಿ'' ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೇಳಿದರು.
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಸರಕಾರ ರೂಪಿಸಿರುವ ಕಾನೂನುಗಳೇ ಪಾಲನೆ ಆಗುತ್ತಿದೆ. ಘಮಂಡಿ ಘಟಬಂಧನ ಉಳಿಸಿಕೊಳ್ಳಲು ಡಿಎಂಕೆ ಪರವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರಚಾರ ಮಾಡುತ್ತಾರೆ. ಆದರೆ, ಮೇಕೆದಾಟು ಯೋಜನೆ ಬಗ್ಗೆ ಡಿಎಂಕೆ ಜೊತೆಗೆ ಚರ್ಚೆ ಯಾಕೆ ಮಾಡತ್ತಿಲ್ಲ? ಡಿಎಂಕೆ ನಮ್ಮ ಮಾತು ಕೇಳೊದಿಲ್ಲ. ನಾವೇನು ಮಾಡಿದರೂ ಅದಕ್ಕೆ ಸಹಜವಾಗಿ ವಿರೋಧ ಮಾಡತ್ತಾರೆ.
ನೀರಿನ ವಿಚಾರವಾದಲ್ಲಿ ರಾಜ್ಯಕ್ಕೆ ಯಾರಾದರೂ ಅನ್ಯಾಯ ಮಾಡಿದ್ದರೆ, ಅದು ಕಾಂಗ್ರೆಸ್ ಪಾರ್ಟಿ ಎಂದ ಅವರು ನೆಲ, ಜಲ ಸಂರಕ್ಷಣೆ ವಿಚಾರವಾಗಿ ನಾವು ಬದ್ಧರಾಗಿದ್ದೇವೆ. ನಿಮ್ಮ ನಾಟಕ ಜನ ನಂಬೋದಿಲ್ಲ, ನಮ್ಮನ್ನು ಜನ ಇಲ್ಲಿ ಸೋಲಿಸಿರಬಹುದು. ಆದರೆ, ದೇಶದಲ್ಲಿ ಬಿಜೆಪಿ ಕೈಹಿಡಿದ್ದಾರೆ. ಕೇಂದ್ರದಲ್ಲಿ ನಿಮ್ಮದು ನಾಯಕತ್ವ ಇಲ್ಲದ ಪಾರ್ಟಿ ಎಂದರು.
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಸರಕಾರ ರೂಪಿಸಿರುವ ಕಾನೂನುಗಳೇ ಪಾಲನೆ ಆಗುತ್ತಿದೆ. ಘಮಂಡಿ ಘಟಬಂಧನ ಉಳಿಸಿಕೊಳ್ಳಲು ಡಿಎಂಕೆ ಪರವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರಚಾರ ಮಾಡುತ್ತಾರೆ. ಆದರೆ, ಮೇಕೆದಾಟು ಯೋಜನೆ ಬಗ್ಗೆ ಡಿಎಂಕೆ ಜೊತೆಗೆ ಚರ್ಚೆ ಯಾಕೆ ಮಾಡತ್ತಿಲ್ಲ? ಡಿಎಂಕೆ ನಮ್ಮ ಮಾತು ಕೇಳೊದಿಲ್ಲ. ನಾವೇನು ಮಾಡಿದರೂ ಅದಕ್ಕೆ ಸಹಜವಾಗಿ ವಿರೋಧ ಮಾಡತ್ತಾರೆ.
ನೀರಿನ ವಿಚಾರವಾದಲ್ಲಿ ರಾಜ್ಯಕ್ಕೆ ಯಾರಾದರೂ ಅನ್ಯಾಯ ಮಾಡಿದ್ದರೆ, ಅದು ಕಾಂಗ್ರೆಸ್ ಪಾರ್ಟಿ ಎಂದ ಅವರು ನೆಲ, ಜಲ ಸಂರಕ್ಷಣೆ ವಿಚಾರವಾಗಿ ನಾವು ಬದ್ಧರಾಗಿದ್ದೇವೆ. ನಿಮ್ಮ ನಾಟಕ ಜನ ನಂಬೋದಿಲ್ಲ, ನಮ್ಮನ್ನು ಜನ ಇಲ್ಲಿ ಸೋಲಿಸಿರಬಹುದು. ಆದರೆ, ದೇಶದಲ್ಲಿ ಬಿಜೆಪಿ ಕೈಹಿಡಿದ್ದಾರೆ. ಕೇಂದ್ರದಲ್ಲಿ ನಿಮ್ಮದು ನಾಯಕತ್ವ ಇಲ್ಲದ ಪಾರ್ಟಿ ಎಂದರು.