ಹುಬ್ಬಳ್ಳಿ: ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿ ಹೋಟೆಲ್ ಉದ್ಯಮ, ಬೆಲೆ ಏರಿಕೆಗೆ ಸಿದ್ಧತೆ
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಹುಬ್ಬಳ್ಳಿ: ಇತೀಚಿಗೆ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದ ಹೋಟೆಲ್ ಉದ್ಯಮಕ್ಕೆ ದುಬಾರಿ ಬೆಲೆಗಳ ಶಾಕ್ ಎದುರಾಗಿದೆ. ತರಕಾರಿ, ಆಹಾರ ಪದಾರ್ಥಗಳು ಸೇರಿದಂತೆ ಬೆಲೆ ಏರಿಕೆಯು ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇದರೊಂದಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ಉಪಹಾರ, ಊಟದ ದರದಲ್ಲಿ ಹೆಚ್ಚಳ ಮಾಡಲು ಹೊಟೇಲ್ ಮಾಲೀಕರು ಮುಂದಾಗಿದ್ದಾರೆ.
ಹೋಟೆಲ್ ಉದ್ಯಮದಲ್ಲಿ ತರಕಾರಿ, ಬೇಳೆ, ವಿದ್ಯುತ್ ಮುಖ್ಯವಾಗಿದ್ದು, ಇವುಗಳ ದರದ ಮೇಲೆ ಹೋಟೆಲ್ ಉದ್ಯಮದ ಆದಾಯ, ಹೋಟೆಲ್ ತಿನಿಸುಗಳ ದರ ನಿಗದಿಯಾಗುತ್ತದೆ. ಪ್ರಸ್ತುತ ಮುಂಗಾರು ವಿಫಲ ಹಾಗೂ ಕಾರ್ಮಿಕರ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದ ತರಕಾರಿ, ಬೇಳೆಗಳ ದರ ಗಗನಕ್ಕೇರಿದೆ. ಇದರ ಜತೆಗೆ ವಿದ್ಯುತ್ ಶುಲ್ಕ ಕೂಡ ಹೆಚ್ಚಳವಾಗಿದೆ. ಇದು ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ.
ಟೊಮೆಟೊ ಕೆಜಿ 100 ರೂಪಾಯಿ ದಾಟಿ ಎಷ್ಟೋ ದಿನವಾಗಿದೆ. ಹುರುಳಿಕಾಯಿ, ಕ್ಯಾರೆಟ್, ಶುಂಠಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ, ತೊಂಡೆಕಾಯಿ ದರ ಸಹ ಹೆಚ್ಚಳವಾಗಿದೆ. ಇದಲ್ಲದೆ ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿಗಳ ಕೊರತೆಯೂ ಇದೆ. ಬೇಳೆಗಳ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಗುಣಮಟ್ಟದ ತೊಗರಿ ಬೇಳೆ ಕೆಜಿಗೆ 160 ರೂ. ಗಡಿ ದಾಟಿದೆ. ಉದ್ದಿನ ಬೇಳೆ 150 ರೂ ಗಡಿಯಲ್ಲಿದೆ. ಇದಲ್ಲದೆ ಮಸೂರ್ ದಾಲ್ 140 ರೂ, ಹೆಸರು ಬೇಳೆ ದರ ಕೂಡ 160 ರೂ. ತಲುಪಿದ್ದು, ಬೇಳೆ ಖರೀದಿಗೂ ಯೋಚನೆ ಮಾಡುವ ಪರಿಸ್ಥಿತಿ ಇದೆ. ಇದರ ಜತೆಗೆ ಜೀರಿಗೆ, ಅರಶಿನ, ದನಿಯಾ ಪೌಡರ್, ಕಾಳುಮೆಣಸಿನ ಪುಡಿ, ಮೆಣಸಿನ ಪುಡಿ ದರದಲ್ಲಿ ಗಣನೀಯ ಏರಿಕೆ ಕಂಡಿದೆ.
ಹೋಟೆಲ್ ಉದ್ಯಮದಲ್ಲಿ ತರಕಾರಿ, ಬೇಳೆ, ವಿದ್ಯುತ್ ಮುಖ್ಯವಾಗಿದ್ದು, ಇವುಗಳ ದರದ ಮೇಲೆ ಹೋಟೆಲ್ ಉದ್ಯಮದ ಆದಾಯ, ಹೋಟೆಲ್ ತಿನಿಸುಗಳ ದರ ನಿಗದಿಯಾಗುತ್ತದೆ. ಪ್ರಸ್ತುತ ಮುಂಗಾರು ವಿಫಲ ಹಾಗೂ ಕಾರ್ಮಿಕರ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದ ತರಕಾರಿ, ಬೇಳೆಗಳ ದರ ಗಗನಕ್ಕೇರಿದೆ. ಇದರ ಜತೆಗೆ ವಿದ್ಯುತ್ ಶುಲ್ಕ ಕೂಡ ಹೆಚ್ಚಳವಾಗಿದೆ. ಇದು ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ.
ಟೊಮೆಟೊ ಕೆಜಿ 100 ರೂಪಾಯಿ ದಾಟಿ ಎಷ್ಟೋ ದಿನವಾಗಿದೆ. ಹುರುಳಿಕಾಯಿ, ಕ್ಯಾರೆಟ್, ಶುಂಠಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ, ತೊಂಡೆಕಾಯಿ ದರ ಸಹ ಹೆಚ್ಚಳವಾಗಿದೆ. ಇದಲ್ಲದೆ ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿಗಳ ಕೊರತೆಯೂ ಇದೆ. ಬೇಳೆಗಳ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಗುಣಮಟ್ಟದ ತೊಗರಿ ಬೇಳೆ ಕೆಜಿಗೆ 160 ರೂ. ಗಡಿ ದಾಟಿದೆ. ಉದ್ದಿನ ಬೇಳೆ 150 ರೂ ಗಡಿಯಲ್ಲಿದೆ. ಇದಲ್ಲದೆ ಮಸೂರ್ ದಾಲ್ 140 ರೂ, ಹೆಸರು ಬೇಳೆ ದರ ಕೂಡ 160 ರೂ. ತಲುಪಿದ್ದು, ಬೇಳೆ ಖರೀದಿಗೂ ಯೋಚನೆ ಮಾಡುವ ಪರಿಸ್ಥಿತಿ ಇದೆ. ಇದರ ಜತೆಗೆ ಜೀರಿಗೆ, ಅರಶಿನ, ದನಿಯಾ ಪೌಡರ್, ಕಾಳುಮೆಣಸಿನ ಪುಡಿ, ಮೆಣಸಿನ ಪುಡಿ ದರದಲ್ಲಿ ಗಣನೀಯ ಏರಿಕೆ ಕಂಡಿದೆ.