ಗಜೇಂದ್ರಗಡ: ದೇವಮೂಲೆಯ ಆಂಜನೇಯ ದೇವಸ್ಥಾನ, ಮ್ಯಾಕಲಝರಿ ಹನುಮನಿಗೆ ಬೊಮ್ಮಾಯಿ ಪೂಜೆ
1070 views
ಗದಗ ವಿಡಿಯೋಗಳಿಗೆ ಚಂದಾದಾರರಾಗಿಗದಗ: ಲೋಕಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಸಂದರ್ಭದಲ್ಲಿ ಹಾವೇರಿ-ಗದಗ ಲೋಕ ಸಭಾ ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ಅಬ್ಬರದ ಪ್ರಚಾರ ಆರಂಭಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಮ್ಯಾಕಲಝರಿ ಗ್ರಾಮದಿಂದ ಮೊದಲು ಪ್ರಚಾರ ಆರಂಭ ಮಾಡಿದ್ದಾರೆ. ಗ್ರಾಮದ ಮುತ್ತೈದೆ ಮಹಿಳೆಯರು ಆರತಿ ಬೆಳಗಿ ಸ್ವಾಗತಗೈದರು. ಈ ಗ್ರಾಮದ ಆಂಜನೇಯನಿಗೆ ಬಸವರಾಜ ಬೊಮ್ಮಾಯಿ ಅವರು ವಿಶೇಷ ಪೂಜೆ ಸಲ್ಲಿಸಿದರು.
ಮ್ಯಾಕಲಝರಿ ಆಂಜನೇಯನ ಮೊದಲ ಪೂಜೆ ಬಗ್ಗೆ ಐತಿಹಾಸಿಕ ಹಿನ್ನಲೆ ಇದೆ. ಇದು ಜಿಲ್ಲೆಯ ಕೊನೆಯ ಗ್ರಾಮವಾಗಿದ್ದು, ವಾಸ್ತು ಪ್ರಕಾರ ಜಿಲ್ಲೆಯ ಈಶಾನ್ಯ ದಿಕ್ಕಿನಲ್ಲಿರುವ ಗ್ರಾಮವಿದು. ಇದಕ್ಕೆ ದೇವಮೂಲೆ ಆಂಜನೇಯ ದೇವಸ್ಥಾನ ಎಂದು ಪ್ರತೀತಿ ಪಡೆದಿದೆ. ಹಾಗಾಗಿ ಈ ಆಂಜನೇಯನಿಗೆ ಯಾರು ಮೊದಲು ಪೂಜೆ ಮಾಡಿಸುತ್ತಾರೆ, ಅವರು ಗೆಲುವು ಖಚಿತ ಎಂಬ ನಂಬಿಕೆ ಇದೆ. ಗ್ರಾಮ ಪಂಚಾಯತಿ ಚುನಾವಣೆ ಯಿಂದ ಹಿಡಿದು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಈ ದೇವರ ಮೊರೆ ಹೋಗ್ತಾರೆ. ಈ ನಂಬಿಕೆ ಆರೇಳು ದಶಕಗಳಿಂದ ನಡೆದು ಬಂದಿದೆ ಎನ್ನಲಾಗ್ತಿದೆ.
ಯಾವುದೇ ಚುನಾವಣೆ ಬರಲಿ, ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಘೋಷಣೆ ಆಗ್ತಿದ್ದಂತೆ ಈ ಆಂಜನೇಯನಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತುಕೊಳ್ಳುತ್ತಾರೆ. ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಮೊದಲು ಕಾಂಗ್ರೆಸ್ ಪಟ್ಟಿ ಬಿಡುಗಡೆಯಲ್ಲಿ ಜಿ.ಎಸ್ ಪಾಟೀಲ ಹೆಸರು ಘೋಷಣೆ ಆಯಿತು. ಕೊನೆಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಹೆಸರು ಘೋಷಣೆ ಆಯಿತು. ಮೊದಲು ಘೋಷಣೆ ಆಗುತ್ತಿದ್ದಂತೆ ಜಿ.ಎಸ್ ಪಾಟೀಲ ಪೂಜೆ ಸಲ್ಲಿಸಿದರು. ಈ ಬಾರಿ ರೋಣ ವಿಧಾನಸಭಾ ಮತಕ್ಷೇತ್ರದ ಶಾಸಕರಾದರು. ಈ ಹಿಂದೆ ಕಳಕಪ್ಪ ಬಂಡಿ ಮೊದಲು ಪೂಜೆ ಸಲ್ಲಿಸಿದ್ದರು ಆಗ ಅವರು ಶಾಸಕರಾಗಿ ಆಯ್ಕೆ ಆದರು. ಇಂತಹ ಅನೇಕ ಉದಾಹರಣೆಗಳಿವೆ ಎನ್ನುತ್ತಾರೆ ಇಲ್ಲಿನ ಅರ್ಚಕರು. ಈಗ ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬೋಮ್ಮಾಯಿ, ಮ್ಯಾಕಲಝರಿ ಆಂಜನೇಯನ ಮೋರೆ ಹೋಗಿದ್ದಾರೆ.
ಮ್ಯಾಕಲಝರಿ ಆಂಜನೇಯನ ಮೊದಲ ಪೂಜೆ ಬಗ್ಗೆ ಐತಿಹಾಸಿಕ ಹಿನ್ನಲೆ ಇದೆ. ಇದು ಜಿಲ್ಲೆಯ ಕೊನೆಯ ಗ್ರಾಮವಾಗಿದ್ದು, ವಾಸ್ತು ಪ್ರಕಾರ ಜಿಲ್ಲೆಯ ಈಶಾನ್ಯ ದಿಕ್ಕಿನಲ್ಲಿರುವ ಗ್ರಾಮವಿದು. ಇದಕ್ಕೆ ದೇವಮೂಲೆ ಆಂಜನೇಯ ದೇವಸ್ಥಾನ ಎಂದು ಪ್ರತೀತಿ ಪಡೆದಿದೆ. ಹಾಗಾಗಿ ಈ ಆಂಜನೇಯನಿಗೆ ಯಾರು ಮೊದಲು ಪೂಜೆ ಮಾಡಿಸುತ್ತಾರೆ, ಅವರು ಗೆಲುವು ಖಚಿತ ಎಂಬ ನಂಬಿಕೆ ಇದೆ. ಗ್ರಾಮ ಪಂಚಾಯತಿ ಚುನಾವಣೆ ಯಿಂದ ಹಿಡಿದು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಈ ದೇವರ ಮೊರೆ ಹೋಗ್ತಾರೆ. ಈ ನಂಬಿಕೆ ಆರೇಳು ದಶಕಗಳಿಂದ ನಡೆದು ಬಂದಿದೆ ಎನ್ನಲಾಗ್ತಿದೆ.
ಯಾವುದೇ ಚುನಾವಣೆ ಬರಲಿ, ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಘೋಷಣೆ ಆಗ್ತಿದ್ದಂತೆ ಈ ಆಂಜನೇಯನಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತುಕೊಳ್ಳುತ್ತಾರೆ. ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಮೊದಲು ಕಾಂಗ್ರೆಸ್ ಪಟ್ಟಿ ಬಿಡುಗಡೆಯಲ್ಲಿ ಜಿ.ಎಸ್ ಪಾಟೀಲ ಹೆಸರು ಘೋಷಣೆ ಆಯಿತು. ಕೊನೆಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಹೆಸರು ಘೋಷಣೆ ಆಯಿತು. ಮೊದಲು ಘೋಷಣೆ ಆಗುತ್ತಿದ್ದಂತೆ ಜಿ.ಎಸ್ ಪಾಟೀಲ ಪೂಜೆ ಸಲ್ಲಿಸಿದರು. ಈ ಬಾರಿ ರೋಣ ವಿಧಾನಸಭಾ ಮತಕ್ಷೇತ್ರದ ಶಾಸಕರಾದರು. ಈ ಹಿಂದೆ ಕಳಕಪ್ಪ ಬಂಡಿ ಮೊದಲು ಪೂಜೆ ಸಲ್ಲಿಸಿದ್ದರು ಆಗ ಅವರು ಶಾಸಕರಾಗಿ ಆಯ್ಕೆ ಆದರು. ಇಂತಹ ಅನೇಕ ಉದಾಹರಣೆಗಳಿವೆ ಎನ್ನುತ್ತಾರೆ ಇಲ್ಲಿನ ಅರ್ಚಕರು. ಈಗ ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬೋಮ್ಮಾಯಿ, ಮ್ಯಾಕಲಝರಿ ಆಂಜನೇಯನ ಮೋರೆ ಹೋಗಿದ್ದಾರೆ.