ಕಾಂಗ್ರೆಸ್ ಗ್ಯಾರಂಟಿಯಿಂದ ಕರ್ನಾಟಕ ದಿವಾಳಿ ಅಂತಿದ್ರು, ಈಗ ಮೋದಿಯೇ ಗ್ಯಾರಂಟಿ ಬೆನ್ನತ್ತಿದ್ದಾರೆ: ಎಚ್ಕೆ ಪಾಟೀಲ್
1118 views
ಗದಗ ವಿಡಿಯೋಗಳಿಗೆ ಚಂದಾದಾರರಾಗಿಗದಗ: ನರೇಂದ್ರ ಮೋದಿ ಅವರು ಕಾಂಗ್ರೆಸ್ನ ಗ್ಯಾರಂಟಿಗಳ ಕೊಡೆಯನ್ನು ಹಿಡಿದು ಎಲ್ಲಾ ಕಡೆಗೂ ಓಡಾಡುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳಿಂದ ಕರ್ನಾಟಕ ದಿವಾಳಿಯಾಗುತ್ತೆ ಅನ್ನುತ್ತಿದ್ದವರು, ಈಗ ಗ್ಯಾರಂಟಿಗಳ ಮಾತುಗಳನ್ನು ಆಡುತ್ತಿದ್ದಾರೆ'' ಎಂದು ಸಚಿವ ಎಚ್ಕೆ ಪಾಟೀಲ್ ಬಿಜೆಪಿಗೆ ಕುಟುಕಿದರು. ಮೋದಿ ಅಲೆಯ ಮುಂದೆ ಕಾಂಗ್ರೆಸ್ ಗ್ಯಾರಂಟಿ ವರ್ಕೌಟ್ ಆಗೊಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ''ಮೋದಿ ಅವರು ನಮ್ಮ ಗ್ಯಾರಂಟಿ ಕೊಡೆ ಹಿಡಿದುಕೊಂಡು ಓಡಾಡುತ್ತಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದ್ದಾರೆ. ಗ್ಯಾರಂಟಿ ಅಂದ್ರೆ ಬೋಗಸ್ ಅಂತ ಮೋದಿ ಹೇಳುತ್ತಿದ್ದರು. ಮೋದಿ ಅವರೇ ಆ ಬೋಗಸ್ ಛತ್ರಿ ಹಿಡಿಕೊಂಡು ಅಡ್ಡಾಡುತ್ತಿದ್ದಾರೆ. ಮನುಷ್ಯನಿಗೆ ಸ್ವಾಭಿಮಾನ ಅನ್ನೋದು ಇರಬೇಕು. ನಿಮ್ಮ ಪ್ರತಿಸ್ಪರ್ಧಿ ಏನು ಮಾಡ್ತಾರೆ, ನೀವು ಅದನ್ನೇ ಹೇಳ್ತಾ ಹೋದ್ರೆ. ಜನ್ರಿಗೆ ನಿಮ್ಮ ವಿಶ್ವಾಸಾರ್ಹತೆ ಉಳಿಯುತ್ತಾ? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ನಾವೆಲ್ಲಾ ಗ್ಯಾರಂಟಿ ಘೋಷಣೆ ಮಾಡುವಾಗ ಆಗ ನಿಮ್ಮ ಮಾತು ಏನಿತ್ತು? ಗ್ಯಾರಂಟಿ ಅಂದ್ರೆ ಸರ್ಕಾರ ದಿವಾಳಿ ಅಂದಿದ್ರಿ?'' ಎಂದು ಪ್ರಶ್ನಿಸಿದರು.''5 ಗ್ಯಾರಂಟಿಗಳನ್ನು ಅನುಷ್ಟಾನಗೊಳಿಸುವುದು ಅಷ್ಟೇ ಅಲ್ಲಾ, ನಾವು 2 ಬಜೆಟ್ ಸಲ್ಲಿಸಿದ್ದೇವೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೇವೆ. ನೂರಕ್ಕೆ ನೂರರಷ್ಟು ಜನರನ್ನು ಮುಟ್ಟಿದ್ದೇವೆ. ಭ್ರಷ್ಟಾಚಾರ ರಹಿತವಾದ ಗ್ಯಾರಂಟಿಗಳನ್ನು ಜನ್ರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೇವೆ. 1 ಕೋಟಿ 10 ಲಕ್ಷ ಬಡ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತಿದ್ದೇವೆ. ಇದು ಕ್ರಾಂತಿಕಾರಕ ಕಾರ್ಯಕ್ರಮ. ನಮ್ಮ ಕಾರ್ಯಕ್ರಮಗಳನ್ನು ಯಾರು ಕಾಪಿ ಮಾಡ್ತಾರೆ ಅವರು ಕೊಚ್ಚಿ ಹೋಗ್ತಾರೆ'' ಎಂದು ಎಚ್ಕೆ ಪಾಟೀಲ್ ಹೇಳಿದರು.