Gadag: ಪ್ರೇಕ್ಷಕರಿಲ್ಲದೇ ಬಣ್ಣ ಮಾಸಿದ ರಂಗಭೂಮಿ ಕಲಾವಿದರ ಬದುಕು! ಕಂಪನಿ ನಾಟಕಗಳಿಗೆ ಜನ ಬರ್ತಿಲ್ಲ, ಜೀವನ ನಿರ್ವಹಣಗೆ ಪರದಾಟ
1003 views
ಗದಗ ವಿಡಿಯೋಗಳಿಗೆ ಚಂದಾದಾರರಾಗಿಒಂದು ಕಡೆ ಕನ್ನಡಿ ಮುಂದೆ ಕುಳಿತು ಮುಖಕ್ಕೆ ಬಣ್ಣ ಹಚ್ಚುತ್ತಿರೋ ಕಲಾವಿದರು.. ಇನ್ನೊಂದು ಕಡೆ ನಾಟಕ ಪ್ರದರ್ಶನಕ್ಕೆ ಸಜ್ಜಾಗಿರೋ ವೇದಿಕೆ.. ಮತ್ತೊಂದು ಕಡೆ ನಾಟಕದ ಟೆಂಟ್ ಕಡೆ ಜನ ಸುಳಿಯದಿರುವುದು.. ಈ ಎಲ್ಲ ದೃಶ್ಯಗಳು ಕಂಡುಬಂದಿದ್ದು ಗದಗದಲ್ಲಿ.. ಪ್ರೇಕ್ಷಕರಿಲ್ಲದೇ ನಾಟಕ ಕಲೆ ಸೊರಗುತ್ತಿದ್ದು, ರಂಗಭೂಮಿ ಕಲಾವಿದರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು, ವೇದಿಕೆಯ ಮೇಲೆ ಮೇಲೆ ರಾಜ, ರಾಣಿಯರಂತೆ ಕಾಣುವ, ಪ್ರೇಕ್ಷಕರನ್ನು ಖುಷಿಪಡಿಸುವ ಕಲಾವಿದರ ಬದುಕಿನ ವಾಸ್ತವವೇ ಬೇರೆಯಿದೆ. ಮಕ್ಕಳ ಶಿಕ್ಷಣ, ಆರೋಗ್ಯ, ಕೌಟುಂಬಿಕ ಜವಾಬ್ದಾರಿ ನಿರ್ವಹಣೆಗಾಗಿ ರಂಗಭೂಮಿ ಕಲಾವಿದರು ನಿರಂತರವಾಗಿ ಪರದಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಕಲಾವಿದರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ಲಭಿಸುತ್ತಿವೆ. ಇತ್ತೀಚಿನ ದಿನಮಾನದಲ್ಲಿ ಬಣ್ಣ ಹಚ್ಚುವ ರಂಗ ಭೂಮಿ ಕಲಾವಿದರ ಬದುಕಿನ ಬಣ್ಣ ಮಾಸುತ್ತಿರುವುದು ಅಕ್ಷರಶಃ ಸತ್ಯ.
Panchamasali Reservation: ಪಂಚಮಸಾಲಿ 2ಎ ಮೀಸಲಾತಿ: ಮಂಗಳವಾರ ಶಿಗ್ಗಾವಿಯ ಸಿಎಂ ಮನೆ ಮುಂದೆ ಧರಣಿ
ಗದಗ ನಗರದಲ್ಲಿ ಎರಡು ತಿಂಗಳಿನಿಂದ ಬಿಎಸ್ ಆರ್ ನಾಟಕ ಸಂಘದ ವತಿಯಿಂದ ಎರಡು ನಾಟಕಗಳು ಪ್ರದರ್ಶನವಾಗಿವೆ. ಮೂರನೇ ನಾಟಕವು ಪ್ರದರ್ಶನವಾಗುತ್ತಿದೆ. ಆದರೆ, ನಿರಂತರ ಸುರಿದ ಮಳೆಯಿಂದ ಪ್ರೇಕ್ಷಕರು ಇತ್ತ ಕಡೆ ಮುಖಮಾಡುತ್ತಿಲ್ಲ. ನಾಟಕ ಪ್ರದರ್ಶನದಿಂದ ಬರುವ ಹಣವು ಖರ್ಚಿಗೆ ಸಾಕಾಗುತ್ತಿಲ್ಲ. ಸರ್ಕಾರದ ರಂಗ ಮಂದಿರಗಳಿಲ್ಲ ಕಾರಣ ಒಂದು ಕಡೆಯಿಂದ ಬೇರೆಡೆಗೆ ನಾಟಕ ಸ್ಥಳಾಂತರಕ್ಕೆ ಸಾಕಷ್ಟು ಹಣ ಖರ್ಚಾಗುತ್ತಿದೆ. ಲೈಸೆನ್ಸ್ ಪಡೆಯಲು ಕಲಾವಿದರ ವಿವಿಧ ಇಲಾಖೆಗಳಿಗೆ ತಿಂಗಳಾನುಗಟ್ಟಲೇ ಅಲೆದಾಡುವ ಸ್ಥಿತಿ ಬಂದಿದೆ.
ಕೋವಿಡ್ ಬಿಕ್ಕಟ್ಟಿನಿಂದಾಗಿ ಹದಗೆಟ್ಟು ಹೋಗಿದೆ ರಂಗ ಭೂಮಿ ಕಲಾವಿದರ ಬದುಕು
ಕಳೆದೆರೆಡು ವರ್ಷಗಳಿಂದ ಕೋವಿಡ್ ಬಿಕ್ಕಟ್ಟಿನಿಂದಾಗಿ ಕಲಾವಿದರ ಬಾಳಂತೂ ಸಂಪೂರ್ಣ ಹದಗೆಟ್ಟು ಹೋಗಿದೆ. ಮೊದಲಿನಂತೆ ಜನರು ನಾಟಕಗಳ ವೀಕ್ಷಣೆಗೆ ಬರುತ್ತಿಲ್ಲ. ಕೋವಿಡ್ ಸಮಯದಲ್ಲಿ ನಾಟಕ ಕಂಪನಿಗಳ ಬಾಗಿಲು ಮುಚ್ಚಿ, ಕಲಾವಿದರ ಬದುಕು ದುಸ್ಥರವಾಗಿತ್ತು. ಕಲಾವಿದರ ಕೊರತೆ, ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಲಿಕ್ಕಾಗಿ ಹೆಂಡತಿ- ಮಕ್ಕಳನ್ನು ಬಿಟ್ಟು ಕಂಪನಿಯಲ್ಲಿ ಟೆಂಟು ಹಾಕಿರುವ ಕಲಾವಿದರ ಬಣ್ಣದ ಬದುಕಿನ ಹಿಂದಿರುವ ಕಷ್ಟಗಳು ಮನಮಿಡಿಯುವಂತೆ ಮಾಡುತ್ತವೆ.
ಸಂಸಾರ ಸಮೇತ ಊರೂರು ಅಲೆಯುವ ಕಲಾವಿದರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ನಾಟಕ ಕಲಾವಿದರ ಮಕ್ಕಳಿಗೆ ಶಿಕ್ಷಣ, ಕಲಾವಿದರಿಗೆ ಸೂರು, ಮಾಸಾಶನ ಅಗತ್ಯ ಸೌಕರ್ಯಗಳನ್ನು ನೀಡಿ ಕಲಾವಿದರ ಬದುಕಿಗೆ ಆಸರೆಯಾಗಿ ಕಲಾವಿದರ ಬದುಕಿನ ಬಣ್ಣಕ್ಕೆ ಮೆರಗು ಮೂಡಿಸಬೇಕಿದೆ ಎನ್ನುತ್ತಾರೆ ರಂಗಭೂಮಿ ಕಲಾವಿದ ಜೇವರ್ಗಿ ರಾಜಣ್ಣ.
ಹೌದು, ವೇದಿಕೆಯ ಮೇಲೆ ಮೇಲೆ ರಾಜ, ರಾಣಿಯರಂತೆ ಕಾಣುವ, ಪ್ರೇಕ್ಷಕರನ್ನು ಖುಷಿಪಡಿಸುವ ಕಲಾವಿದರ ಬದುಕಿನ ವಾಸ್ತವವೇ ಬೇರೆಯಿದೆ. ಮಕ್ಕಳ ಶಿಕ್ಷಣ, ಆರೋಗ್ಯ, ಕೌಟುಂಬಿಕ ಜವಾಬ್ದಾರಿ ನಿರ್ವಹಣೆಗಾಗಿ ರಂಗಭೂಮಿ ಕಲಾವಿದರು ನಿರಂತರವಾಗಿ ಪರದಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಕಲಾವಿದರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ಲಭಿಸುತ್ತಿವೆ. ಇತ್ತೀಚಿನ ದಿನಮಾನದಲ್ಲಿ ಬಣ್ಣ ಹಚ್ಚುವ ರಂಗ ಭೂಮಿ ಕಲಾವಿದರ ಬದುಕಿನ ಬಣ್ಣ ಮಾಸುತ್ತಿರುವುದು ಅಕ್ಷರಶಃ ಸತ್ಯ.
Panchamasali Reservation: ಪಂಚಮಸಾಲಿ 2ಎ ಮೀಸಲಾತಿ: ಮಂಗಳವಾರ ಶಿಗ್ಗಾವಿಯ ಸಿಎಂ ಮನೆ ಮುಂದೆ ಧರಣಿ
ಗದಗ ನಗರದಲ್ಲಿ ಎರಡು ತಿಂಗಳಿನಿಂದ ಬಿಎಸ್ ಆರ್ ನಾಟಕ ಸಂಘದ ವತಿಯಿಂದ ಎರಡು ನಾಟಕಗಳು ಪ್ರದರ್ಶನವಾಗಿವೆ. ಮೂರನೇ ನಾಟಕವು ಪ್ರದರ್ಶನವಾಗುತ್ತಿದೆ. ಆದರೆ, ನಿರಂತರ ಸುರಿದ ಮಳೆಯಿಂದ ಪ್ರೇಕ್ಷಕರು ಇತ್ತ ಕಡೆ ಮುಖಮಾಡುತ್ತಿಲ್ಲ. ನಾಟಕ ಪ್ರದರ್ಶನದಿಂದ ಬರುವ ಹಣವು ಖರ್ಚಿಗೆ ಸಾಕಾಗುತ್ತಿಲ್ಲ. ಸರ್ಕಾರದ ರಂಗ ಮಂದಿರಗಳಿಲ್ಲ ಕಾರಣ ಒಂದು ಕಡೆಯಿಂದ ಬೇರೆಡೆಗೆ ನಾಟಕ ಸ್ಥಳಾಂತರಕ್ಕೆ ಸಾಕಷ್ಟು ಹಣ ಖರ್ಚಾಗುತ್ತಿದೆ. ಲೈಸೆನ್ಸ್ ಪಡೆಯಲು ಕಲಾವಿದರ ವಿವಿಧ ಇಲಾಖೆಗಳಿಗೆ ತಿಂಗಳಾನುಗಟ್ಟಲೇ ಅಲೆದಾಡುವ ಸ್ಥಿತಿ ಬಂದಿದೆ.
ಕೋವಿಡ್ ಬಿಕ್ಕಟ್ಟಿನಿಂದಾಗಿ ಹದಗೆಟ್ಟು ಹೋಗಿದೆ ರಂಗ ಭೂಮಿ ಕಲಾವಿದರ ಬದುಕು
ಕಳೆದೆರೆಡು ವರ್ಷಗಳಿಂದ ಕೋವಿಡ್ ಬಿಕ್ಕಟ್ಟಿನಿಂದಾಗಿ ಕಲಾವಿದರ ಬಾಳಂತೂ ಸಂಪೂರ್ಣ ಹದಗೆಟ್ಟು ಹೋಗಿದೆ. ಮೊದಲಿನಂತೆ ಜನರು ನಾಟಕಗಳ ವೀಕ್ಷಣೆಗೆ ಬರುತ್ತಿಲ್ಲ. ಕೋವಿಡ್ ಸಮಯದಲ್ಲಿ ನಾಟಕ ಕಂಪನಿಗಳ ಬಾಗಿಲು ಮುಚ್ಚಿ, ಕಲಾವಿದರ ಬದುಕು ದುಸ್ಥರವಾಗಿತ್ತು. ಕಲಾವಿದರ ಕೊರತೆ, ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಲಿಕ್ಕಾಗಿ ಹೆಂಡತಿ- ಮಕ್ಕಳನ್ನು ಬಿಟ್ಟು ಕಂಪನಿಯಲ್ಲಿ ಟೆಂಟು ಹಾಕಿರುವ ಕಲಾವಿದರ ಬಣ್ಣದ ಬದುಕಿನ ಹಿಂದಿರುವ ಕಷ್ಟಗಳು ಮನಮಿಡಿಯುವಂತೆ ಮಾಡುತ್ತವೆ.
ಸಂಸಾರ ಸಮೇತ ಊರೂರು ಅಲೆಯುವ ಕಲಾವಿದರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ನಾಟಕ ಕಲಾವಿದರ ಮಕ್ಕಳಿಗೆ ಶಿಕ್ಷಣ, ಕಲಾವಿದರಿಗೆ ಸೂರು, ಮಾಸಾಶನ ಅಗತ್ಯ ಸೌಕರ್ಯಗಳನ್ನು ನೀಡಿ ಕಲಾವಿದರ ಬದುಕಿಗೆ ಆಸರೆಯಾಗಿ ಕಲಾವಿದರ ಬದುಕಿನ ಬಣ್ಣಕ್ಕೆ ಮೆರಗು ಮೂಡಿಸಬೇಕಿದೆ ಎನ್ನುತ್ತಾರೆ ರಂಗಭೂಮಿ ಕಲಾವಿದ ಜೇವರ್ಗಿ ರಾಜಣ್ಣ.