ಹಾಸನ: ಪ್ರಧಾನಿ ಮೋದಿ 5 ಕೆಜಿ ಅಕ್ಕಿ ಕೊಡ್ತಿದ್ದಾರೆ, ಚೀಲದ ಹಣ ಮಾತ್ರ ಸಿದ್ದರಾಮಯ್ಯ ಕೊಡ್ತಿರೋದು- ಆರ್ ಅಶೋಕ್
ಹಾಸನ ವಿಡಿಯೋಗಳಿಗೆ ಚಂದಾದಾರರಾಗಿ
ಹಾಸನ: ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರಕಾರವು ತಿಂಗಳಾದರೂ ಇದುವರೆಗೂ ಐದು ಗ್ಯಾರಂಟಿ ಜಾರಿಯಾಗಿರುವುದಿಲ್ಲ ಎಂದು ವ್ಯಂಗ್ಯವಾಡಿದ ಅವರು, ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಯಾವ ಕಾರಣಕ್ಕೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಹೆಚ್.ಎಂ.ಟಿ. ಸಮುದಾಯ ಭವನದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಉದ್ದೇಶಿಸಿ ಮತ್ತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ತಯಾರಿಗೆ ನರೇಂದ್ರ ಮೋದಿ ಅವರು ತಮ್ಮ 9 ವರ್ಷದ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸುತ್ತೇವೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾದರು ಅವರ ಗ್ಯಾರಂಟಿ ಯಾವುದು ಇನ್ನು ಜಾರಿಯಾಗಿರುವುದಿಲ್ಲ. ಈಗಾಗಲೇ ಬಸ್ ಡೋರ್ ಕಿತ್ತು ಹಾಕುವುದೆ ಅವರ ಗ್ಯಾರಂಟಿ ಆಗಿದೆ. ನಮಗಿಂತ ಹೆಚ್ಚಾಗಿ ಮೋದಿ ಹೆಸರು ಕಾಂಗ್ರೆಸ್ ಹೇಳುತ್ತಿದೆ. ಅವರ ಬಳಿ ಹಣವಿಲ್ಲ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದರು.
ಅಕ್ಕಿ ಕೊಡಲು 10 ಸಾವಿರ ಕೋಟಿ ಹಣ ಬೇಕು. ಯಾರದೋ ಮ್ಯಾನೇಜರ್ ಗೆ ಬರೆದ ಲೆಟರ್ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಲೋಕಸಭಾ ಚುನಾವಣೆವರಗೆ ಮೋದಿ ಟಾರ್ಗೆಟ್. ಲೊಕಸಭಾ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಚರ್ಚೆ ಇಲ್ಲ ಅದರ ಬಗ್ಗೆ ಯೋಚನೆ ಕೂಡ ಇಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು 5 ಕೆ ಜಿ ಅಕ್ಕಿ ಕೊಡುತ್ತಿದ್ದಾರೆ, ಚೀಲದ ಹಣ ಮಾತ್ರ ಸಿದ್ದರಾಮಯ್ಯ ಕೊಡುತ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ ಘೋಷಣೆ ಮಾಡುವುದಕ್ಕೆ ಮುಂಚೆ ಕೇಂದ್ರ ಸರ್ಕಾರ ಹಾಗು ಪುಡ್ ಕಾರ್ಪೊರೇಷನ್ ಕೇಳಬೇಕಿತ್ತು. ನಳೀನ್ ಕುಮಾರ್ ಕಟೀಲ್ ಇದ್ದು, ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಇರುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಗರದ ಹೊರವಲಯದಲ್ಲಿರುವ ಹೆಚ್.ಎಂ.ಟಿ. ಸಮುದಾಯ ಭವನದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಉದ್ದೇಶಿಸಿ ಮತ್ತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ತಯಾರಿಗೆ ನರೇಂದ್ರ ಮೋದಿ ಅವರು ತಮ್ಮ 9 ವರ್ಷದ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸುತ್ತೇವೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾದರು ಅವರ ಗ್ಯಾರಂಟಿ ಯಾವುದು ಇನ್ನು ಜಾರಿಯಾಗಿರುವುದಿಲ್ಲ. ಈಗಾಗಲೇ ಬಸ್ ಡೋರ್ ಕಿತ್ತು ಹಾಕುವುದೆ ಅವರ ಗ್ಯಾರಂಟಿ ಆಗಿದೆ. ನಮಗಿಂತ ಹೆಚ್ಚಾಗಿ ಮೋದಿ ಹೆಸರು ಕಾಂಗ್ರೆಸ್ ಹೇಳುತ್ತಿದೆ. ಅವರ ಬಳಿ ಹಣವಿಲ್ಲ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದರು.
ಅಕ್ಕಿ ಕೊಡಲು 10 ಸಾವಿರ ಕೋಟಿ ಹಣ ಬೇಕು. ಯಾರದೋ ಮ್ಯಾನೇಜರ್ ಗೆ ಬರೆದ ಲೆಟರ್ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಲೋಕಸಭಾ ಚುನಾವಣೆವರಗೆ ಮೋದಿ ಟಾರ್ಗೆಟ್. ಲೊಕಸಭಾ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಚರ್ಚೆ ಇಲ್ಲ ಅದರ ಬಗ್ಗೆ ಯೋಚನೆ ಕೂಡ ಇಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು 5 ಕೆ ಜಿ ಅಕ್ಕಿ ಕೊಡುತ್ತಿದ್ದಾರೆ, ಚೀಲದ ಹಣ ಮಾತ್ರ ಸಿದ್ದರಾಮಯ್ಯ ಕೊಡುತ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ ಘೋಷಣೆ ಮಾಡುವುದಕ್ಕೆ ಮುಂಚೆ ಕೇಂದ್ರ ಸರ್ಕಾರ ಹಾಗು ಪುಡ್ ಕಾರ್ಪೊರೇಷನ್ ಕೇಳಬೇಕಿತ್ತು. ನಳೀನ್ ಕುಮಾರ್ ಕಟೀಲ್ ಇದ್ದು, ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಇರುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.