ಐದು ವರ್ಷ ನೀವು, ಐದು ವರ್ಷ ನಾವು ಅಂತಾ ಬಿಜೆಪಿ - ಕಾಂಗ್ರೆಸ್ ಒಪ್ಪಂದ : ಎಚ್ಡಿ ರೇವಣ್ಣ ಆರೋಪ
ಹಾಸನ ವಿಡಿಯೋಗಳಿಗೆ ಚಂದಾದಾರರಾಗಿ
ಹಾಸನ: ರಾಜ್ಯದಲ್ಲಿ ಜೆಡಿಎಸ್ ಮುಗಿಸಲು ಎರಡು ರಾಷ್ಟ್ರೀಯ ಪಕ್ಷ ಮುಂದಾಗಿದ್ದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಟ್ಟಿಹಾಕಲು 17 ಪಕ್ಷಗಳು ಒಟ್ಟಾಗಿ ಅವಕಾಶ ಸಿಂಧು ರಾಜಕಾರಣ ಮಾಡಲು ಹೊರಟಿವೆ ಎಂದು ಶಾಸಕ ಹಾಗೂ ಮಾಜಿ ಸಚಿವ ಎಚ್ಡಿ ರೇವಣ್ಣ ಟೀಕಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಸೇರಿಕೊಂಡು ಜೆಡಿಎಸ್ ಅನ್ನು ಮುಗಿಸಲು ಹೊರಟಿವೆ ಐದು ವರ್ಷ ನಾವು, ಇನ್ನು ಐದು ವರ್ಷ ಬಿಜೆಪಿ ಎಂದು ತೀರ್ಮಾನಿಸಿಕೊಂಡು ಜೆಡಿಎಸ್ ಮುಗಿಸಲು ಹೊರಟಿವೆ. ಯಾರಿಂದಲೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಆರು ಬಾರಿ ಶಾಸಕನಾಗಿ ದೇವೇಗೌಡರ ಜತೆ ಮೂಟೆ ಹೊತ್ತಿದ್ದೇನೆ. ರಾಜಕಾರಣ ಗೊತ್ತಿರುವ ರೇವಣ್ಣ ರಾಜಕೀಯ ಬಿಡುತ್ತಾರೆ ಎಂದರೆ ಅದು ಅವರ ಕನಸು, ಹೋರಾಟ ಮಾಡುತ್ತೇನೆ. 3800 ಮತಗಳಲ್ಲಿ ಗೆದ್ದಿದ್ದಾರೆ ಎಂದರೆ ಅದ್ಯಾವ ರೀತಿ ಆಗಿದೆ ಎಂಬುದು ತಿಳಿದಿದೆ. ನಮ್ಮ ಉದಾಸೀನದಿಂದ ಕೆಲವು ಕ್ಷೇತ್ರದಲ್ಲಿ ಸೋಲು ಕಂಡಿದ್ದೇವೆ 2028ರ ಚುನಾವಣೆ ನಮ್ಮ ಗುರಿ ಎಂದರು.
ಇನ್ನು, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಬಿಜೆಪಿ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರಲ್ಲ, ಹೊಂದಾಣಿಕೆ ಇಲ್ಲ ಎಂದು ಹೇಳಿಲ್ಲವೇ ಎಂದು ಹೇಳಿದರು.
ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಸೇರಿಕೊಂಡು ಜೆಡಿಎಸ್ ಅನ್ನು ಮುಗಿಸಲು ಹೊರಟಿವೆ ಐದು ವರ್ಷ ನಾವು, ಇನ್ನು ಐದು ವರ್ಷ ಬಿಜೆಪಿ ಎಂದು ತೀರ್ಮಾನಿಸಿಕೊಂಡು ಜೆಡಿಎಸ್ ಮುಗಿಸಲು ಹೊರಟಿವೆ. ಯಾರಿಂದಲೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಆರು ಬಾರಿ ಶಾಸಕನಾಗಿ ದೇವೇಗೌಡರ ಜತೆ ಮೂಟೆ ಹೊತ್ತಿದ್ದೇನೆ. ರಾಜಕಾರಣ ಗೊತ್ತಿರುವ ರೇವಣ್ಣ ರಾಜಕೀಯ ಬಿಡುತ್ತಾರೆ ಎಂದರೆ ಅದು ಅವರ ಕನಸು, ಹೋರಾಟ ಮಾಡುತ್ತೇನೆ. 3800 ಮತಗಳಲ್ಲಿ ಗೆದ್ದಿದ್ದಾರೆ ಎಂದರೆ ಅದ್ಯಾವ ರೀತಿ ಆಗಿದೆ ಎಂಬುದು ತಿಳಿದಿದೆ. ನಮ್ಮ ಉದಾಸೀನದಿಂದ ಕೆಲವು ಕ್ಷೇತ್ರದಲ್ಲಿ ಸೋಲು ಕಂಡಿದ್ದೇವೆ 2028ರ ಚುನಾವಣೆ ನಮ್ಮ ಗುರಿ ಎಂದರು.
ಇನ್ನು, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಬಿಜೆಪಿ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರಲ್ಲ, ಹೊಂದಾಣಿಕೆ ಇಲ್ಲ ಎಂದು ಹೇಳಿಲ್ಲವೇ ಎಂದು ಹೇಳಿದರು.