ಭಾರತದಲ್ಲಿ ಇದ್ದೀವಾ?, ಪಾಕಿಸ್ತಾನದಲ್ಲಿ ಇದ್ದೀವಾ?, ಭಯವಾಗುತ್ತಿದೆ: ಆರ್.ಅಶೋಕ್
ಹಾಸನ ವಿಡಿಯೋಗಳಿಗೆ ಚಂದಾದಾರರಾಗಿ
ಹಾಸನ: ಕರ್ನಾಟಕವು ಭಯೋತ್ಪಾದಕರ ತಾಣವಾಗೋ ವ್ಯವಸ್ಥೆ ಕಾಣುತ್ತಿದ್ದು, ಇದೆಲ್ಲವನ್ನೂ ನೋಡಿದ್ರೆ ನಾವು ಇಂಡಿಯಾದಲ್ಲಿ ಇದ್ದೇವಾ?, ಪಾಕಿಸ್ತಾನದಲ್ಲಿ ಇದ್ದೇವಾ?, ಎಂದು ಭಯವಾಗುತ್ತಿದೆ ಎಂದು ವಿಪಕ್ಷದ ನಾಯಕ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಆಗಮಿಸಿ ನಗರದ ಖಾಸಗಿ ಹೋಟೆಲೊಂದರಲ್ಲಿ ಜೆಡಿಎಸ್ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಭಯೋತ್ಪಾದಕರ ತಾಣವಾಗೋ ವ್ಯವಸ್ಥೆ ಕಾಣುತ್ತಿದೆ. ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಇನ್ನು ಮುಂದೆ ಜೈ ಶ್ರೀರಾಮ್ ನಡೆಯಲ್ಲ. ಅಲ್ಲಾ ಹೋ ಅಕ್ಬರ್ ಎನ್ನಬೇಕು ಎಂದು ಧಮ್ಕಿ ಹಾಕಿದ್ದಾರೆ. ಇವರು ಹಿಂದುಗಳ ಮೇಲೆ ಹಾದಿ ಬೀದಿಯಲ್ಲಿ ಹಲ್ಲೆ ಮಾಡೋ ಹಿಯ್ಯಾಳಿಸೋ ಚಾಳಿ ಜಾಸ್ತಿ ಆಗ್ತಾ ಇದೆ ಎಂದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದು ಹೆಚ್ಚಾಗುತ್ತಿದೆ. ಈಗಾಗಲೇ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರು ಕಾಂಗ್ರೆಸ್ ಕಾರ್ಯಕರ್ತರು ಎಂದು ಸಾಬೀತಾಗಿದೆ. ಅವರನ್ನು ರಾಜ್ಯ ಸರ್ಕಾರದ ಸಚಿವರೇ ಬೆಂಬಲಿಸಿದ್ರು. ರಾಮೇಶ್ಚರಂ ಹೋಟೆಲ್ ಪ್ರಕರಣ ತಿರುಚೋ ಯತ್ನವನ್ನು ಡಿ.ಕೆ.ಶಿವಕುಮಾರ್ ಮಾಡಿದ್ರು. ಮಂಡ್ಯದಲ್ಲಿ ಹನುಮ ದ್ವಜ ಇಳಿಸಿದ್ರು. ಇದೆಲ್ಲವನ್ನೂ ನೋಡಿದ್ರೆ ನಾವು ಇಂಡಿಯಾದಲ್ಲಿ ಇದೀವಾ ಪಾಕಿಸ್ತಾನದಲ್ಲಿ ಇದೀವಅ ಎಂದು ಭಯವಾಗುತ್ತಿದೆ ಎಂದರು.
ಹಿಂದುಗಳನ್ನ ಎರಡನೇ ದರ್ಜೆ ಪ್ರಜೆಗಳಂತೆ ಕಾಣೋ ಪರಿಸ್ಥಿತಿ ಬಂದಿದೆ. ಸಿದ್ದರಾಮಯ್ಯ ಸಿಎಂ ಆದ ಮೇಲೆ ಟಿಪ್ಪು ಸಂಸ್ಕ್ರತಿ ಬಂದಿದೆ. ಜೈ ಶ್ರೀರಾಮ್ ಎಂದು ಕೂಗಿದವರ ವಿರುದ್ಧ ಗೂಂಡಾ ಕಾಯಿದೆ ಹಾಕಬೇಕು. ಕಠಿಣ ಕ್ರಮ ಆಗದಿದ್ದರೆ ಈ ಸರ್ಕಾರವೇ ಅವರಿಗೆ ಬೆಂಬಲಿಸುತ್ತೆ ಅನ್ನೋ ಮೆಸೇಜ್ ಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಮೋದಿಯವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಾ ಇದ್ದಾರೆ. ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಇವರಿಗೆ ಹೊಟ್ಟೆಯಲ್ಲಿ ಮೆಣಸಿನ ಕಾಯಿ ಮುರಿದಂತೆ ಆಗಿದೆ. ಹಳೆ ಮೈಸೂರು ಭಾಗದ ಹೊಂದಾಣಿಕೆ ಇವರಿಗೆ ಕಷ್ಟವಾಗಿದೆ. ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ ಎಂದು ಡೈವೊರ್ಟ್ ಮಾಡಲು ಹೊರಟಿದ್ದಾರೆ. ಅವರಿಗೆ ಚುನಾವಣೆಗೆ ವಿಚಾರವೇ ಇಲ್ಲ. ಅವರು ತಮ್ಮ ಪ್ರದಾನಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿಲ್ಲ ಎಂದು ವ್ಯಂಗ್ಯವಾಡಿ, ಅವರಲ್ಲಿ ನಾಯಕತ್ವದ ಕೊರತೆ ಇದೆ. ಅವರು ದೇಶಕ್ಕೆ ಏನು ಮಾಡಿದಾರೆ ಎಂದು ಹೇಳಬಹುದಿತ್ತು. ಆದರೆ ಅವರು ಹೇಳೋಕೆ ತಯಾರಿಲ್ಲ ಎಂದರು.
ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಆಗಮಿಸಿ ನಗರದ ಖಾಸಗಿ ಹೋಟೆಲೊಂದರಲ್ಲಿ ಜೆಡಿಎಸ್ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಭಯೋತ್ಪಾದಕರ ತಾಣವಾಗೋ ವ್ಯವಸ್ಥೆ ಕಾಣುತ್ತಿದೆ. ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಇನ್ನು ಮುಂದೆ ಜೈ ಶ್ರೀರಾಮ್ ನಡೆಯಲ್ಲ. ಅಲ್ಲಾ ಹೋ ಅಕ್ಬರ್ ಎನ್ನಬೇಕು ಎಂದು ಧಮ್ಕಿ ಹಾಕಿದ್ದಾರೆ. ಇವರು ಹಿಂದುಗಳ ಮೇಲೆ ಹಾದಿ ಬೀದಿಯಲ್ಲಿ ಹಲ್ಲೆ ಮಾಡೋ ಹಿಯ್ಯಾಳಿಸೋ ಚಾಳಿ ಜಾಸ್ತಿ ಆಗ್ತಾ ಇದೆ ಎಂದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದು ಹೆಚ್ಚಾಗುತ್ತಿದೆ. ಈಗಾಗಲೇ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರು ಕಾಂಗ್ರೆಸ್ ಕಾರ್ಯಕರ್ತರು ಎಂದು ಸಾಬೀತಾಗಿದೆ. ಅವರನ್ನು ರಾಜ್ಯ ಸರ್ಕಾರದ ಸಚಿವರೇ ಬೆಂಬಲಿಸಿದ್ರು. ರಾಮೇಶ್ಚರಂ ಹೋಟೆಲ್ ಪ್ರಕರಣ ತಿರುಚೋ ಯತ್ನವನ್ನು ಡಿ.ಕೆ.ಶಿವಕುಮಾರ್ ಮಾಡಿದ್ರು. ಮಂಡ್ಯದಲ್ಲಿ ಹನುಮ ದ್ವಜ ಇಳಿಸಿದ್ರು. ಇದೆಲ್ಲವನ್ನೂ ನೋಡಿದ್ರೆ ನಾವು ಇಂಡಿಯಾದಲ್ಲಿ ಇದೀವಾ ಪಾಕಿಸ್ತಾನದಲ್ಲಿ ಇದೀವಅ ಎಂದು ಭಯವಾಗುತ್ತಿದೆ ಎಂದರು.
ಹಿಂದುಗಳನ್ನ ಎರಡನೇ ದರ್ಜೆ ಪ್ರಜೆಗಳಂತೆ ಕಾಣೋ ಪರಿಸ್ಥಿತಿ ಬಂದಿದೆ. ಸಿದ್ದರಾಮಯ್ಯ ಸಿಎಂ ಆದ ಮೇಲೆ ಟಿಪ್ಪು ಸಂಸ್ಕ್ರತಿ ಬಂದಿದೆ. ಜೈ ಶ್ರೀರಾಮ್ ಎಂದು ಕೂಗಿದವರ ವಿರುದ್ಧ ಗೂಂಡಾ ಕಾಯಿದೆ ಹಾಕಬೇಕು. ಕಠಿಣ ಕ್ರಮ ಆಗದಿದ್ದರೆ ಈ ಸರ್ಕಾರವೇ ಅವರಿಗೆ ಬೆಂಬಲಿಸುತ್ತೆ ಅನ್ನೋ ಮೆಸೇಜ್ ಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಮೋದಿಯವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಾ ಇದ್ದಾರೆ. ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಇವರಿಗೆ ಹೊಟ್ಟೆಯಲ್ಲಿ ಮೆಣಸಿನ ಕಾಯಿ ಮುರಿದಂತೆ ಆಗಿದೆ. ಹಳೆ ಮೈಸೂರು ಭಾಗದ ಹೊಂದಾಣಿಕೆ ಇವರಿಗೆ ಕಷ್ಟವಾಗಿದೆ. ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ ಎಂದು ಡೈವೊರ್ಟ್ ಮಾಡಲು ಹೊರಟಿದ್ದಾರೆ. ಅವರಿಗೆ ಚುನಾವಣೆಗೆ ವಿಚಾರವೇ ಇಲ್ಲ. ಅವರು ತಮ್ಮ ಪ್ರದಾನಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿಲ್ಲ ಎಂದು ವ್ಯಂಗ್ಯವಾಡಿ, ಅವರಲ್ಲಿ ನಾಯಕತ್ವದ ಕೊರತೆ ಇದೆ. ಅವರು ದೇಶಕ್ಕೆ ಏನು ಮಾಡಿದಾರೆ ಎಂದು ಹೇಳಬಹುದಿತ್ತು. ಆದರೆ ಅವರು ಹೇಳೋಕೆ ತಯಾರಿಲ್ಲ ಎಂದರು.