ಬರಗಾಲದಲ್ಲೂ ಬಂಪರ್ ಬೆಳೆ ಬೆಳೆದ ಹಾವೇರಿ ರೈತ; ಅನ್ನದಾತನ ಕೈ ಹಿಡಿದ ಕಪ್ಪು ಕಲ್ಲಂಗಡಿ!
1065 views
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿಹಾವೇರಿ: ಬರಗಾಲಕ್ಕೂ ಸೆಡ್ಡು ಹೊಡೆದು ಹಾವೇರಿ ರೈತ ಬರಪೂರ ಕಲ್ಲಂಗಡಿ ಬೆಳೆದು ದುಪ್ಪಟ್ಟು ಆದಾಯಗಳಿಸಿದ್ದಾರೆ. ಹೌದು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ಕಾಕೋಳ ಗ್ರಾಮದ ಶಿವಪ್ಪ ನವಲೆ ಎಂಬುವರನ್ನು ಕಪ್ಪು ಕಲ್ಲಂಗಡಿ ಕೈ ಹಿಡಿದಿದೆ. ಇಂಥ ಬರಗಾಲದಲ್ಲೂ ಕೂಡ ಬಂಪರ್ ಬೆಳೆ ಬೆಳೆದು ಶಿವಪ್ಪ ಸೈ ಎನಿಸಿಕೊಂಡಿದ್ದಾರೆ.
ಈ ಮೊದಲು ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯುತ್ತಿದ್ದರು, ಆದರೆ ಕಳೆದ ವರ್ಷದಿಂದ ಶಿವಪ್ಪ ಸಾಂಪ್ರದಾಯಕ ಬೆಳೆಗಳಿಗೆ ಪೂರ್ಣ ವಿರಾಮ ನೀಡಿ, ಕಲ್ಲಂಗಡಿ ಬೆಳೆಯತ್ತಿದ್ದಾರೆ. ಐಸ್ ಬಾಕ್ಸ್ ಹೆಸರಿನ ಕಪ್ಪು ಕಲ್ಲಂಗಡಿ ಹಣ್ಣು ಬೆಳೆದಿರುವ ಶಿವಪ್ಪನಿಗೆ ದುಪ್ಪಟ್ಟು ಆದಾಯ ಸಿಕ್ಕಿದೆ. ನಾಲ್ಕು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದ ಶಿವಪ್ಪ ಈವರೆಗೆ ಸುಮಾರು 50 ಟನ್ ಕಲ್ಲಂಗಡಿ ಮಾರಿದ್ದಾನೆ. ಒಂದು ಟನ್ ಕಲ್ಲಂಗಡಿಗೆ 15 ಸಾವಿರ ರೂಪಾಯಿ ನೀಡಿ ವರ್ತಕರೇ ಜಮೀನಿಗೆ ಬಂದು ಖರೀದಿ ಮಾಡಿದ್ದಾರೆ. ಕಲ್ಲಂಗಡಿ ಹಾಕುವಾಗ ಸುಮಾರು 1 ಲಕ್ಷ ಖರ್ಚು ಆಗಿತ್ತಂತೆ, ಇದೀಗ ಖರ್ಚೆಲ್ಲ ಕಳೆದು ನಿವ್ವಳ 3 ಲಕ್ಷ ರೂಪಾಯಿ ಆದಾಯ ಸಿಕ್ಕಿದೆ ಅಂತಾರೆ ರೈತ ಶಿವಪ್ಪ.
ಪ್ರಸ್ತುತ ವರ್ಷ ಕಲ್ಲಂಗಡಿ ಹಾಕಿದಾಗ ಹಿಂಗಾರು ಕೈಕೊಟ್ಟಿತ್ತು. ನಂತರ ಕೊಳವೆ ಬಾವಿ ಸಹಾಯದಿಂದ ಕಲ್ಲಂಗಡಿ ಬೆಳೆದಿದ್ದಾರೆ. ಇನ್ನೇನು ಹಣ್ಣು ಪೂರ್ಣ ಪ್ರಮಾಣದಲ್ಲಿ ಆಗುವ ವೇಳೆ ಕೊಳವೆ ಬಾವಿ ಸಹ ಕೈಕೊಟ್ಟಿತು. ಆದರೂ ಸಹ ಛಲ ಬಿಡದೆ ಅಕ್ಕಪಕ್ಕದ ರೈತರಿಂದ ನೀರು ಪಡೆದು ಕಲ್ಲಂಗಡಿ ಬೆಳೆದಿದ್ದಾರೆ. ಸರಿಯಾಗಿ ನೀರು ಇದ್ದಿದ್ದರೇ ಮಳೆಯಾಗಿದ್ದರೆ 4 ಎಕರೆಗೆ ಸುಮಾರು 100 ಟನ್ ಕಲ್ಲಂಗಡಿ ಬರುತ್ತಿತ್ತಂತೆ.
ಇನ್ನೂ ಜಮೀನಿನಲ್ಲಿ ಕೊಳವೆ ಬತ್ತಿ ಹೋದಾಗ ಇವರ ಸಹಾಯಕ್ಕೆ ಬಂದಿದ್ದು ಸಾವಯುವ ಕೃಷಿತಜ್ಞ ಗಂಗಯ್ಯ ಕುಲಕರ್ಣಿ. ಹೌದು.. ಗಂಗಯ್ಯ ಕುಲಕರ್ಣಿ ಸಾವಯುವ ಕೃಷಿ ಸಹಾಯಕನಾಗಿದ್ದು ಸಾವಯುವ ಬೆಳೆಗಳಿಗೆ ಹೆಚ್ಚು ಆಧ್ಯತೆ ನೀಡುತ್ತಾ ಬಂದಿದ್ದಾರೆ. ಬರಗಾಲದಲ್ಲಿ ನೀರು ಇಲ್ಲದ ವೇಳೆ ಕಲ್ಲಂಗಡಿ ಬೆಳೆ ರಕ್ಷಿಸುವ ಉಪಾಯ ತಿಳಿಸಿದ ಗಂಗಯ್ಯ. ರೈತ ಶಿವಪ್ಪನಿಗೆ ನೆರವಾಗಿದ್ದಾರೆ. ಶಿವಪ್ಪನಿಗೆ ಶುದ್ದ ಜೈವಿಕ ಉತ್ಪನ್ನಗಳ ಬಳಕೆಗೆ ಗಂಗಯ್ಯ ಶಿಪಾರಸ್ಸು ಮಾಡಿದ್ದಾರೆ. ತೇವಾಂಶ ಹಿಡಿದಿಡುವ ಜೈವಿಕ ಉತ್ಪನ್ನಗಳ ಬಳಕೆಯಿಂದ ಶಿವಪ್ಪನಿಗೆ ಈ ರೀತಿಯ ಇಳುವರಿ ಬಂದಿದೆ. ನೀರು ಇಲ್ಲದಾಗ ಇನ್ನೇನು ಕಲ್ಲಂಗಡಿ ಒಣಗಿಹೋಗುತ್ತೆ ಎಂದಾಗ ಶಿವಪ್ಪನ ಕೈಹಿಡಿದಿದ್ದು ಸಾವಯುವ ಗೊಬ್ಬರ
ಎನ್ನುತ್ತಾರೆ ಕೃಷಿತಜ್ಞ ಗಂಗಯ್ಯ ಕುಲಕರ್ಣಿ.
ಇಂತಹ ಬರಗಾಲದಲ್ಲೂ ಕಷ್ಟಪಟ್ಟು ಶಿವಪ್ಪ ಕಲ್ಲಂಗಡಿ ಬೆಳೆದಿದ್ದು ಇದೀಗ ಸಾರ್ಥಕವಾಗಿದೆ. ಕಲ್ಲಂಗಡಿ ಬೆಳೆಯಿಂದ ರೈತನಿಗೆ ದುಪ್ಪಟ್ಟು ಆದಾಯ ಸಿಕ್ಕಿದೆ, ಸಾವಯುವ ಕೃಷಿ ಪದ್ದತಿ ಉತ್ತಮ ಬೆಳೆ ಬೆಳೆದು ಎಲ್ಲ ರೈತರಿಗೂ ಮಾದರಿಯಾಗಿ ನಿಂತಿದ್ದಾರೆ,, ರೈತ ಶಿವಪ್ಪ ಅವರ ಕೃಷಿಕಾಯಕ ಹೀಗೆ ಮುಂದುವರಿಯಲಿ.
ಈ ಮೊದಲು ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯುತ್ತಿದ್ದರು, ಆದರೆ ಕಳೆದ ವರ್ಷದಿಂದ ಶಿವಪ್ಪ ಸಾಂಪ್ರದಾಯಕ ಬೆಳೆಗಳಿಗೆ ಪೂರ್ಣ ವಿರಾಮ ನೀಡಿ, ಕಲ್ಲಂಗಡಿ ಬೆಳೆಯತ್ತಿದ್ದಾರೆ. ಐಸ್ ಬಾಕ್ಸ್ ಹೆಸರಿನ ಕಪ್ಪು ಕಲ್ಲಂಗಡಿ ಹಣ್ಣು ಬೆಳೆದಿರುವ ಶಿವಪ್ಪನಿಗೆ ದುಪ್ಪಟ್ಟು ಆದಾಯ ಸಿಕ್ಕಿದೆ. ನಾಲ್ಕು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದ ಶಿವಪ್ಪ ಈವರೆಗೆ ಸುಮಾರು 50 ಟನ್ ಕಲ್ಲಂಗಡಿ ಮಾರಿದ್ದಾನೆ. ಒಂದು ಟನ್ ಕಲ್ಲಂಗಡಿಗೆ 15 ಸಾವಿರ ರೂಪಾಯಿ ನೀಡಿ ವರ್ತಕರೇ ಜಮೀನಿಗೆ ಬಂದು ಖರೀದಿ ಮಾಡಿದ್ದಾರೆ. ಕಲ್ಲಂಗಡಿ ಹಾಕುವಾಗ ಸುಮಾರು 1 ಲಕ್ಷ ಖರ್ಚು ಆಗಿತ್ತಂತೆ, ಇದೀಗ ಖರ್ಚೆಲ್ಲ ಕಳೆದು ನಿವ್ವಳ 3 ಲಕ್ಷ ರೂಪಾಯಿ ಆದಾಯ ಸಿಕ್ಕಿದೆ ಅಂತಾರೆ ರೈತ ಶಿವಪ್ಪ.
ಪ್ರಸ್ತುತ ವರ್ಷ ಕಲ್ಲಂಗಡಿ ಹಾಕಿದಾಗ ಹಿಂಗಾರು ಕೈಕೊಟ್ಟಿತ್ತು. ನಂತರ ಕೊಳವೆ ಬಾವಿ ಸಹಾಯದಿಂದ ಕಲ್ಲಂಗಡಿ ಬೆಳೆದಿದ್ದಾರೆ. ಇನ್ನೇನು ಹಣ್ಣು ಪೂರ್ಣ ಪ್ರಮಾಣದಲ್ಲಿ ಆಗುವ ವೇಳೆ ಕೊಳವೆ ಬಾವಿ ಸಹ ಕೈಕೊಟ್ಟಿತು. ಆದರೂ ಸಹ ಛಲ ಬಿಡದೆ ಅಕ್ಕಪಕ್ಕದ ರೈತರಿಂದ ನೀರು ಪಡೆದು ಕಲ್ಲಂಗಡಿ ಬೆಳೆದಿದ್ದಾರೆ. ಸರಿಯಾಗಿ ನೀರು ಇದ್ದಿದ್ದರೇ ಮಳೆಯಾಗಿದ್ದರೆ 4 ಎಕರೆಗೆ ಸುಮಾರು 100 ಟನ್ ಕಲ್ಲಂಗಡಿ ಬರುತ್ತಿತ್ತಂತೆ.
ಇನ್ನೂ ಜಮೀನಿನಲ್ಲಿ ಕೊಳವೆ ಬತ್ತಿ ಹೋದಾಗ ಇವರ ಸಹಾಯಕ್ಕೆ ಬಂದಿದ್ದು ಸಾವಯುವ ಕೃಷಿತಜ್ಞ ಗಂಗಯ್ಯ ಕುಲಕರ್ಣಿ. ಹೌದು.. ಗಂಗಯ್ಯ ಕುಲಕರ್ಣಿ ಸಾವಯುವ ಕೃಷಿ ಸಹಾಯಕನಾಗಿದ್ದು ಸಾವಯುವ ಬೆಳೆಗಳಿಗೆ ಹೆಚ್ಚು ಆಧ್ಯತೆ ನೀಡುತ್ತಾ ಬಂದಿದ್ದಾರೆ. ಬರಗಾಲದಲ್ಲಿ ನೀರು ಇಲ್ಲದ ವೇಳೆ ಕಲ್ಲಂಗಡಿ ಬೆಳೆ ರಕ್ಷಿಸುವ ಉಪಾಯ ತಿಳಿಸಿದ ಗಂಗಯ್ಯ. ರೈತ ಶಿವಪ್ಪನಿಗೆ ನೆರವಾಗಿದ್ದಾರೆ. ಶಿವಪ್ಪನಿಗೆ ಶುದ್ದ ಜೈವಿಕ ಉತ್ಪನ್ನಗಳ ಬಳಕೆಗೆ ಗಂಗಯ್ಯ ಶಿಪಾರಸ್ಸು ಮಾಡಿದ್ದಾರೆ. ತೇವಾಂಶ ಹಿಡಿದಿಡುವ ಜೈವಿಕ ಉತ್ಪನ್ನಗಳ ಬಳಕೆಯಿಂದ ಶಿವಪ್ಪನಿಗೆ ಈ ರೀತಿಯ ಇಳುವರಿ ಬಂದಿದೆ. ನೀರು ಇಲ್ಲದಾಗ ಇನ್ನೇನು ಕಲ್ಲಂಗಡಿ ಒಣಗಿಹೋಗುತ್ತೆ ಎಂದಾಗ ಶಿವಪ್ಪನ ಕೈಹಿಡಿದಿದ್ದು ಸಾವಯುವ ಗೊಬ್ಬರ
ಎನ್ನುತ್ತಾರೆ ಕೃಷಿತಜ್ಞ ಗಂಗಯ್ಯ ಕುಲಕರ್ಣಿ.
ಇಂತಹ ಬರಗಾಲದಲ್ಲೂ ಕಷ್ಟಪಟ್ಟು ಶಿವಪ್ಪ ಕಲ್ಲಂಗಡಿ ಬೆಳೆದಿದ್ದು ಇದೀಗ ಸಾರ್ಥಕವಾಗಿದೆ. ಕಲ್ಲಂಗಡಿ ಬೆಳೆಯಿಂದ ರೈತನಿಗೆ ದುಪ್ಪಟ್ಟು ಆದಾಯ ಸಿಕ್ಕಿದೆ, ಸಾವಯುವ ಕೃಷಿ ಪದ್ದತಿ ಉತ್ತಮ ಬೆಳೆ ಬೆಳೆದು ಎಲ್ಲ ರೈತರಿಗೂ ಮಾದರಿಯಾಗಿ ನಿಂತಿದ್ದಾರೆ,, ರೈತ ಶಿವಪ್ಪ ಅವರ ಕೃಷಿಕಾಯಕ ಹೀಗೆ ಮುಂದುವರಿಯಲಿ.