ಸವಣೂರು: ಮತ್ತೆ ಚಿಗುರಿದ 2000 ವರ್ಷಗಳಷ್ಟು ಹಳೆಯ ದೊಡ್ಡ ಹುಣಸೆ ಮರ, ಸಂತಸ ತಂದ ಹಸಿರು
1232 views
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿಸುಮಾರು ಎರಡು ಸಾವಿರ ವರ್ಷಗಳಷ್ಟು ಪುರಾತನವಾದುದು ಎನ್ನಲಾಗುವ ದೊಡ್ಡಹುಣಸೆಮರವು ಈಗ ಮತ್ತೆ ಚಿಗುರೊಡೆಯುತ್ತಿದೆ. ಜುಲೈನಲ್ಲಿ ಸುರಿದ ಭಾರಿ ಮಳೆ-ಗಾಳಿ ಹಾಗೂ ಫಂಗಸ್ನಿಂದಾಗಿ ಬೃಹತ್ ಗಾತ್ರದ ಮರವು ಧರೆಗುರುಳಿತ್ತು. ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿರುವ ಮೂರು ದೊಡ್ಡಹುಣಸೆಮರಗಳು ವಿಶ್ವಪ್ರಸಿದ್ದಿ ಪಡೆದಿವೆ.
ಕಲ್ಮಠದ ಆವರದಲ್ಲಿರುವ ದೊಡ್ಡಹುಣಸೆಮರಗಳು ಸುಮಾರು 2000 ವರ್ಷಗಳ ಹಿಂದೆ ನೆಡಲಾಗಿತ್ತು ಎನ್ನಲಾಗಿದೆ. ದೊಡ್ಡಹುಣಸೇಮರ ಧರೆಗುರುಳಿದ್ದ ಸುದ್ದಿಯು ಕಲ್ಮಠದ ಸ್ವಾಮೀಜಿಗಳು, ಸವಣೂರು ಜನರು, ಪರಿಸರ ಪ್ರೇಮಿಗಳಿಗೆ ಆತಂಕ ತಂದಿತ್ತು. ಪುರಾತನ ಮರದ ರಕ್ಷಣೆಗೆ ರಾಜ್ಯದ ವಿವಿಧಡೆಯಿಂದ ಪರಿಸರ ಪ್ರೇಮಿಗಳು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೈಜೋಡಿಸಿದ್ದರು. ಕಲ್ಮಠದ ಚೆನ್ನಬಸವಶ್ರೀಗಳ ಮುಂದಾಳತ್ವದಲ್ಲಿ ಮರವನ್ನ ಮರುನೆಡಲು ಯೋಜನೆ ರೂಪಿಸಲಾಗಿತ್ತು. ಧಾರವಾಡ ಕೃಷಿ ವಿವಿಧ ವಿಜ್ಞಾನಿಗಳ ಸಮ್ಮುಖದಲ್ಲಿ ಬೆಂಗಳೂರಿನಿಂದ ಸುಮಾರು 450 ಟನ್ ತೂಕ ಸಾಮರ್ಥ್ಯದ ಕ್ರೇನ್ ತರಿಸಿ ಮರವನ್ನು ನೆಡುವ ಕಾರ್ಯಾಚರಣಿ ನಡೆಸಲಾಗಿತ್ತು. ಮರದ ಬುಡದಲ್ಲಿನ ಫಂಗಸ್ ತಗೆದು, ವಿವಿಧ ಕೊಂಬೆಗಳನ್ನು ಕಟ್ ಮಾಡಿ, ಔಷಧಿಗಳ ಲೇಪನ ಮಾಡಿ ಮರವನ್ನ ಜುಲೈ 13 ರಂದು ಮರು ನೆಡಲಾಗಿತ್ತು.
ಮರ ಮರುನೆಡಲು ಶ್ರಮಿಸಿದ ಶ್ರಮ ಜೀವಿಗಳಿಗೆಲ್ಲಾ ಶ್ರೀಗಳು ಅಭಿನಂದನೆ ಸಲ್ಲಿಸಿದ್ದಾರೆ. ಮರ ಚಿಗುರುಲಾರಂಭಿಸಿರುವ ವಿಚಾರ ತಿಳಿಯುತ್ತಿದ್ದಂತೆ ಶಾಲಾ ಮಕ್ಕಳು, ಉಪನ್ಯಾಸಕರು, ಶಿಕ್ಷಕರು ಮಠಕ್ಕೆ ಭೇಟಿ ನೀಡಿ ಮರವನ್ನು ವೀಕ್ಷಿಸುತ್ತಿದ್ದಾರೆ. ಮೂರು ತಿಂಗಳು ಕಾಲ ಮರದ ಆರೈಕೆ ಮಾಡಲಾಗಿದ್ದು, ಅದರ ಪರಿಣಾಮ ಈಗ ಮರ ಚಿಗುರಲು ಆರಂಭಿಸಿದೆ. ಇದು ಮನಸ್ಸಿಗೆ ಸಾಕಷ್ಟು ಸಂತಸ ತಂದಿದೆ. ನಾವು ಪಟ್ಟ ಶ್ರಮಕ್ಕೆ ತಕ್ಕಪ್ರತಿಫಲ ಸಿಕ್ಕಂತಾಗಿದೆ ಎಂದು ಕಲ್ಮಠದ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕೃಷ್ಣ ಪರಮಾತ್ಮ ವಿರಾಟನಗರಕ್ಕೆ ಹೋಗುವ ಮುನ್ನ ಈ ಗಿಡ ನೆಟ್ಟಿದ್ದರು ಎನ್ನುವ ಪ್ರತೀತಿ ಇದೆ. ಈ ಮರಗಳು ದಕ್ಷಿಣ ಆಫ್ರಿಕಾ ಮೂಲದ್ದಾಗಿವೆ. ಈ ಮರಗಳು ಔಷಧೀಯ ಗುಣ ಹೊಂದಿವೆ. ಅಲ್ಲದೆ ಭಕ್ತರ ಇಷ್ಟಾರ್ಥಗಳನ್ನು ಈ ಮರಗಳು ಈಡೇರಿಸುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.
ಕಲ್ಮಠದ ಆವರದಲ್ಲಿರುವ ದೊಡ್ಡಹುಣಸೆಮರಗಳು ಸುಮಾರು 2000 ವರ್ಷಗಳ ಹಿಂದೆ ನೆಡಲಾಗಿತ್ತು ಎನ್ನಲಾಗಿದೆ. ದೊಡ್ಡಹುಣಸೇಮರ ಧರೆಗುರುಳಿದ್ದ ಸುದ್ದಿಯು ಕಲ್ಮಠದ ಸ್ವಾಮೀಜಿಗಳು, ಸವಣೂರು ಜನರು, ಪರಿಸರ ಪ್ರೇಮಿಗಳಿಗೆ ಆತಂಕ ತಂದಿತ್ತು. ಪುರಾತನ ಮರದ ರಕ್ಷಣೆಗೆ ರಾಜ್ಯದ ವಿವಿಧಡೆಯಿಂದ ಪರಿಸರ ಪ್ರೇಮಿಗಳು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೈಜೋಡಿಸಿದ್ದರು. ಕಲ್ಮಠದ ಚೆನ್ನಬಸವಶ್ರೀಗಳ ಮುಂದಾಳತ್ವದಲ್ಲಿ ಮರವನ್ನ ಮರುನೆಡಲು ಯೋಜನೆ ರೂಪಿಸಲಾಗಿತ್ತು. ಧಾರವಾಡ ಕೃಷಿ ವಿವಿಧ ವಿಜ್ಞಾನಿಗಳ ಸಮ್ಮುಖದಲ್ಲಿ ಬೆಂಗಳೂರಿನಿಂದ ಸುಮಾರು 450 ಟನ್ ತೂಕ ಸಾಮರ್ಥ್ಯದ ಕ್ರೇನ್ ತರಿಸಿ ಮರವನ್ನು ನೆಡುವ ಕಾರ್ಯಾಚರಣಿ ನಡೆಸಲಾಗಿತ್ತು. ಮರದ ಬುಡದಲ್ಲಿನ ಫಂಗಸ್ ತಗೆದು, ವಿವಿಧ ಕೊಂಬೆಗಳನ್ನು ಕಟ್ ಮಾಡಿ, ಔಷಧಿಗಳ ಲೇಪನ ಮಾಡಿ ಮರವನ್ನ ಜುಲೈ 13 ರಂದು ಮರು ನೆಡಲಾಗಿತ್ತು.
ಮರ ಮರುನೆಡಲು ಶ್ರಮಿಸಿದ ಶ್ರಮ ಜೀವಿಗಳಿಗೆಲ್ಲಾ ಶ್ರೀಗಳು ಅಭಿನಂದನೆ ಸಲ್ಲಿಸಿದ್ದಾರೆ. ಮರ ಚಿಗುರುಲಾರಂಭಿಸಿರುವ ವಿಚಾರ ತಿಳಿಯುತ್ತಿದ್ದಂತೆ ಶಾಲಾ ಮಕ್ಕಳು, ಉಪನ್ಯಾಸಕರು, ಶಿಕ್ಷಕರು ಮಠಕ್ಕೆ ಭೇಟಿ ನೀಡಿ ಮರವನ್ನು ವೀಕ್ಷಿಸುತ್ತಿದ್ದಾರೆ. ಮೂರು ತಿಂಗಳು ಕಾಲ ಮರದ ಆರೈಕೆ ಮಾಡಲಾಗಿದ್ದು, ಅದರ ಪರಿಣಾಮ ಈಗ ಮರ ಚಿಗುರಲು ಆರಂಭಿಸಿದೆ. ಇದು ಮನಸ್ಸಿಗೆ ಸಾಕಷ್ಟು ಸಂತಸ ತಂದಿದೆ. ನಾವು ಪಟ್ಟ ಶ್ರಮಕ್ಕೆ ತಕ್ಕಪ್ರತಿಫಲ ಸಿಕ್ಕಂತಾಗಿದೆ ಎಂದು ಕಲ್ಮಠದ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕೃಷ್ಣ ಪರಮಾತ್ಮ ವಿರಾಟನಗರಕ್ಕೆ ಹೋಗುವ ಮುನ್ನ ಈ ಗಿಡ ನೆಟ್ಟಿದ್ದರು ಎನ್ನುವ ಪ್ರತೀತಿ ಇದೆ. ಈ ಮರಗಳು ದಕ್ಷಿಣ ಆಫ್ರಿಕಾ ಮೂಲದ್ದಾಗಿವೆ. ಈ ಮರಗಳು ಔಷಧೀಯ ಗುಣ ಹೊಂದಿವೆ. ಅಲ್ಲದೆ ಭಕ್ತರ ಇಷ್ಟಾರ್ಥಗಳನ್ನು ಈ ಮರಗಳು ಈಡೇರಿಸುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.