ಹಾವೇರಿ: ಹಾವನೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ, ತುಂಗಭದ್ರೆಯ ಒಡಲಲ್ಲಿ ವರ್ತಿ ನೀರಿಗೆ ಮೊರೆ
1061 views
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿತುಂಗಭದ್ರಾ ನದಿ ತಟದಲ್ಲಿರುವ ಹಾವೇರಿ ತಾಲೂಕು ಹಾವನೂರು ಗ್ರಾಮದಲ್ಲಿ ಸುಮಾರು 7 ಸಾವಿರ ಜನರು ವಾಸಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮದ ಪಕ್ಕದಲ್ಲಿ ಹಾದುಹೋಗಿರುವ ತುಂಗಭದ್ರೆಯ ಒಡಲು ಬರಿದಾಗಿದೆ. ಗ್ರಾಮದಲ್ಲಿರುವ ಸರ್ಕಾರದ ಶುದ್ದ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುವುದು ನಿಲ್ಲಿಸಿವೆ. ಮನೆ ಮುಂದಿನ ನಳದಲ್ಲಿ ನೀರು ಎರಡು ದಿನಕ್ಕೆ ಒಮ್ಮೆ ಅಥವಾ ಮೂರು ದಿನಕ್ಕೊಮ್ಮೆ ಬರುತ್ತದೆ. ನದಿಯಲ್ಲಿ ನೀರು ಹರಿಯುವಾಗ ಗ್ರಾಮ ಪಂಚಾಯಿತಿಯು ಸಂಸ್ಕರಿಸಿ ಬಿಡುವ ನೀರನ್ನು ಗ್ರಾಮಸ್ಥರು ಕುಡಿಯುತ್ತಾರೆ. ಆದರೆ ನದಿ ಬತ್ತಿದಾಗ ಈ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತೆ. ಪರಿಣಾಮ ಜನರು ತುಂಗಭದ್ರೆಯ ಬರಿದಾದ ಒಡಲಲ್ಲಿ ವರ್ತಿ ಗುಂಡಿಗಳನ್ನು ತಗೆದು ಅದರಿಂದ ನೀರು ಪಡೆಯುತ್ತಾರೆ.
ಮುಂಜಾನೆ ನಸುಕಿನಲ್ಲಿ ಆರಂಭವಾಗುವ ವರ್ತಿ ನೀರು ಪಡೆಯುವ ಕಾರ್ಯ ಸಂಜೆಯವರೆಗೆ ಮುಂದುವರೆಯುತ್ತದೆ. ಕೆಲವರು ಎರಡೆರಡು
ಕೊಡಗಳನ್ನು ತಂದರೆ ಇನ್ನು ಕೆಲವರು ಒಂದೊಂದು ಕೊಡ ತಂದು ನೀರು ತುಂಬುತ್ತಾರೆ. ನದಿಯಲ್ಲಿ ಮೊದಲೇ ನಿಗದಿ ಮಾಡಿದ ವರ್ತಿ ಗುಂಡಿಗಳ ಮುಂದೆ ಕೊಡಗಳನ್ನಿಟ್ಟು ನೀರು ಸೋಸಲು ಒಂದು ಬಟ್ಟೆ ಹಾಕುವ ಗ್ರಾಮಸ್ಥರು ಗುಂಡಿಯಲ್ಲಿನ ನೀರನ್ನು ಮೊಗೆಮೊಗೆದು ತುಂಬುತ್ತಾರೆ. ದ್ವಿಚಕ್ರವಾಹನ ಸೇರಿದಂತೆ ಭುಜದ ಮೇಲೆ ಹೊತ್ತುಕೊಂಡು ಜನರು ಮನೆಗೆ ನೀರು ತಗೆದುಕೊಂಡು ಹೋಗುತ್ತಾರೆ. ಗ್ರಾಮದ ಕೆಲ ಜನರು ಖಾಸಗಿ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ನೀರು ತಂದು ಕುಡಿಯುತ್ತಾರೆ. ಆದರೆ ಕೆಲವರು ಈ ನೀರು ಕುಡಿಯುವುದಿಲ್ಲಾ ಎನ್ನುತ್ತಾರೆ ಗ್ರಾಮಸ್ಥರು. ಇದರಿಂದ ಮಂಡಿನೋವು ಸೇರಿದಂತೆ ವಿವಿಧ ಆನಾರೋಗ್ಯ ಕಾಡುತ್ತದೆ ಎಂದು ಗ್ರಾಮಸ್ಥರು ದೂರುತ್ತಾರೆ. ಅಲ್ಲದೆ ಆ ನೀರಿನಿಂದ ಅಡುಗೆ ಮಾಡಿದರೆ ರುಚಿಯಾಗುವುದಿಲ್ಲಾ ಹಾಗೂ ಅಡುಗೆ ಬೇಗ ಕೆಡುವುದು ಆಗುತ್ತದೆ. ಹೀಗಾಗಿ ನಮಗೆ ವರ್ತಿ ನೀರೇ ಗತಿ ಎನ್ನುತ್ತಾರೆ ಗ್ರಾಮಸ್ಥರು.
ನದಿಯಲ್ಲಿನ ವರ್ತಿ ಗುಂಡಿಗಳ ಮುಂದೆ ಸರತಿಯಲ್ಲಿ ಕುಳಿತುಕೊಳ್ಳುವ ಗ್ರಾಮಸ್ಥರು ನೀರು ತುಂಬಿಕೊಂಡು ಮನೆಗಳಿಗೆ ಹೋಗುತ್ತಾರೆ. ಪ್ರಸ್ತುತ ವರ್ಷ ಬರಗಾಲದಿಂದ ನದಿ ಬೇಗನೆ ಬತ್ತಿಹೋಗಿದೆ. ಗುಂಡಿಗಳಲ್ಲಿ ನಿಂತ ನೀರು ಕಲುಷಿತವಾಗಿದ್ದು, ಕೆಟ್ಟವಾಸನೆ ಬರುತ್ತೆ. ಜೊತೆಗೆ ಹುಳುಗಳಿಂದ ಕೂಡಿದ್ದು, ದನಗಳು ಸಹ ಕುಡಿಯಲು ಹಿಂದೇಟು ಹಾಕುತ್ತವೆ ಎನ್ನುತ್ತಾರೆ ಗ್ರಾಮಸ್ಥರು.
ವರ್ತಿ ಗುಂಡಿಯಲ್ಲಿನ ನೀರು ವಾಸನೆ ಬರುವದಿಲ್ಲಾ ಕುಡಿಯುಲು ರುಚಿಕರವಾಗಿರುತ್ತದೆ. ಎರಡು ಮೂರು ದಿನ ಇಟ್ಟರೂ ಸಹ ಕೆಡುವದಿಲ್ಲಾ ಎನ್ನುತ್ತಾರೆ. ಇತ್ತ ಸಮೀಪದ ಮೈಲಾರ ಜಾತ್ರೆ ಇರುವ ಕಾರಣ ತುಂಗಭದ್ರಾ ಡ್ಯಾಂನಿಂದ ನದಿಗೆ ನೀರು ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮೈಲಾರ ಜಾತ್ರೆಗೆ 10 ದಿನಗಳ ಬಾಕಿ ಇದ್ದು, ಇಷ್ಟೊತ್ತಿಗಾಗಲೇ ನದಿಗೆ ನೀರು ಬಿಟ್ಟಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲಾ. ಅಧಿಕಾರಿಗಳು ಜಾತ್ರೆಗಾಗಿ ನೀರು ಬಿಟ್ಟರೆ ನಮ್ಮಂತಹ ಹಲವು ಗ್ರಾಮಗಳ ಜನರಿಗೆ ಮತ್ತೆ ಕೆಲವು ದಿನ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ.
ಮುಂಜಾನೆ ನಸುಕಿನಲ್ಲಿ ಆರಂಭವಾಗುವ ವರ್ತಿ ನೀರು ಪಡೆಯುವ ಕಾರ್ಯ ಸಂಜೆಯವರೆಗೆ ಮುಂದುವರೆಯುತ್ತದೆ. ಕೆಲವರು ಎರಡೆರಡು
ಕೊಡಗಳನ್ನು ತಂದರೆ ಇನ್ನು ಕೆಲವರು ಒಂದೊಂದು ಕೊಡ ತಂದು ನೀರು ತುಂಬುತ್ತಾರೆ. ನದಿಯಲ್ಲಿ ಮೊದಲೇ ನಿಗದಿ ಮಾಡಿದ ವರ್ತಿ ಗುಂಡಿಗಳ ಮುಂದೆ ಕೊಡಗಳನ್ನಿಟ್ಟು ನೀರು ಸೋಸಲು ಒಂದು ಬಟ್ಟೆ ಹಾಕುವ ಗ್ರಾಮಸ್ಥರು ಗುಂಡಿಯಲ್ಲಿನ ನೀರನ್ನು ಮೊಗೆಮೊಗೆದು ತುಂಬುತ್ತಾರೆ. ದ್ವಿಚಕ್ರವಾಹನ ಸೇರಿದಂತೆ ಭುಜದ ಮೇಲೆ ಹೊತ್ತುಕೊಂಡು ಜನರು ಮನೆಗೆ ನೀರು ತಗೆದುಕೊಂಡು ಹೋಗುತ್ತಾರೆ. ಗ್ರಾಮದ ಕೆಲ ಜನರು ಖಾಸಗಿ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ನೀರು ತಂದು ಕುಡಿಯುತ್ತಾರೆ. ಆದರೆ ಕೆಲವರು ಈ ನೀರು ಕುಡಿಯುವುದಿಲ್ಲಾ ಎನ್ನುತ್ತಾರೆ ಗ್ರಾಮಸ್ಥರು. ಇದರಿಂದ ಮಂಡಿನೋವು ಸೇರಿದಂತೆ ವಿವಿಧ ಆನಾರೋಗ್ಯ ಕಾಡುತ್ತದೆ ಎಂದು ಗ್ರಾಮಸ್ಥರು ದೂರುತ್ತಾರೆ. ಅಲ್ಲದೆ ಆ ನೀರಿನಿಂದ ಅಡುಗೆ ಮಾಡಿದರೆ ರುಚಿಯಾಗುವುದಿಲ್ಲಾ ಹಾಗೂ ಅಡುಗೆ ಬೇಗ ಕೆಡುವುದು ಆಗುತ್ತದೆ. ಹೀಗಾಗಿ ನಮಗೆ ವರ್ತಿ ನೀರೇ ಗತಿ ಎನ್ನುತ್ತಾರೆ ಗ್ರಾಮಸ್ಥರು.
ನದಿಯಲ್ಲಿನ ವರ್ತಿ ಗುಂಡಿಗಳ ಮುಂದೆ ಸರತಿಯಲ್ಲಿ ಕುಳಿತುಕೊಳ್ಳುವ ಗ್ರಾಮಸ್ಥರು ನೀರು ತುಂಬಿಕೊಂಡು ಮನೆಗಳಿಗೆ ಹೋಗುತ್ತಾರೆ. ಪ್ರಸ್ತುತ ವರ್ಷ ಬರಗಾಲದಿಂದ ನದಿ ಬೇಗನೆ ಬತ್ತಿಹೋಗಿದೆ. ಗುಂಡಿಗಳಲ್ಲಿ ನಿಂತ ನೀರು ಕಲುಷಿತವಾಗಿದ್ದು, ಕೆಟ್ಟವಾಸನೆ ಬರುತ್ತೆ. ಜೊತೆಗೆ ಹುಳುಗಳಿಂದ ಕೂಡಿದ್ದು, ದನಗಳು ಸಹ ಕುಡಿಯಲು ಹಿಂದೇಟು ಹಾಕುತ್ತವೆ ಎನ್ನುತ್ತಾರೆ ಗ್ರಾಮಸ್ಥರು.
ವರ್ತಿ ಗುಂಡಿಯಲ್ಲಿನ ನೀರು ವಾಸನೆ ಬರುವದಿಲ್ಲಾ ಕುಡಿಯುಲು ರುಚಿಕರವಾಗಿರುತ್ತದೆ. ಎರಡು ಮೂರು ದಿನ ಇಟ್ಟರೂ ಸಹ ಕೆಡುವದಿಲ್ಲಾ ಎನ್ನುತ್ತಾರೆ. ಇತ್ತ ಸಮೀಪದ ಮೈಲಾರ ಜಾತ್ರೆ ಇರುವ ಕಾರಣ ತುಂಗಭದ್ರಾ ಡ್ಯಾಂನಿಂದ ನದಿಗೆ ನೀರು ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮೈಲಾರ ಜಾತ್ರೆಗೆ 10 ದಿನಗಳ ಬಾಕಿ ಇದ್ದು, ಇಷ್ಟೊತ್ತಿಗಾಗಲೇ ನದಿಗೆ ನೀರು ಬಿಟ್ಟಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲಾ. ಅಧಿಕಾರಿಗಳು ಜಾತ್ರೆಗಾಗಿ ನೀರು ಬಿಟ್ಟರೆ ನಮ್ಮಂತಹ ಹಲವು ಗ್ರಾಮಗಳ ಜನರಿಗೆ ಮತ್ತೆ ಕೆಲವು ದಿನ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ.