ಬರದೊಂದಿಗೆ ದರ ಕುಸಿತ: ಕಣ್ಣೀರು ಹಾಕುತ್ತ ಬೆಳೆ ನಾಶ ಮಾಡಿದ ಹಾವೇರಿ ರೈತ..!
1056 views
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿಹಾವೇರಿ: ಕೇವಲ ಮುಂಗಾರು ಅಷ್ಟೇ ಅಲ್ಲದೆ ಹಿಂಗಾರು ಸಹ ಕೈಕೊಟ್ಟಿದ್ದು ಮಳೆರಾಯನ ಮುನಿಸಿನಿಂದ ಹಾವೇರಿ ಜಿಲ್ಲೆಯ ರೈತ ಹೈರಾಣಾಗಿದ್ದಾನೆ. ಈ ಮಧ್ಯೆ ಕೆಲ ರೈತರು ಕೊಳವೆಬಾವಿ ನೀರನ್ನೇ ನಂಬಿ ಜೀವನೋಪಾಯಕ್ಕಾಗಿ ಬೆಳೆದ ಬದನೆ ಮತ್ತಿತರ ತರಕಾರಿ ಬೆಳೆಗೆ ಸಹ ಸರಿಯಾದ ಬೆಲೆ ಸಿಗದ್ದರಿಂದ ಕೈಯ್ಯಾರೆ ನಾಶ ಮಾಡುವ ಪರಿಸ್ಥಿತಿ ಒದಗಿದೆ.
ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಶಿವಪ್ಪ ಕಷ್ಟಕಾಲದಲ್ಲಿರಲಿ ಎಂದು ಬದನೆಕಾಯಿ ಬೆಳೆಯಲು ಮುಂದಾಗಿದ್ದ. ಉತ್ತಮ ಬೀಜ ತಂದು ಒಂದು ಎಕರೆ ಜಮೀನಿನಲ್ಲಿ ಬದನೆಕಾಯಿ ಹಚ್ಚಿದ್ದ. ಬದನೆಕಾಯಿ ಹಚ್ಚಿ ನಾಲ್ಕು ತಿಂಗಳಲ್ಲಿ ಉತ್ತಮವಾಗಿ ಬೆಳೆ ಬಂದಿತ್ತು. ಫಸಲು ಸಹ ನಿರೀಕ್ಷೆಗಿಂತ ಅಧಿಕ ಬಂದಿದೆ. ಆದರೆ ಬದನೆಕಾಯಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಶಿವಪ್ಪ ಒಂದು ಎಕರೆಯಲ್ಲಿ ಸುಮಾರು 50 ಸಾವಿರ ರೂಪಾಯಿ ಖರ್ಚು ಮಾಡಿದ ಬೆಳೆ ಫಸಲು ಬಿಟ್ಟರು ಬದನೆಕಾಯಿಗೆ ಬೆಲೆ ಇಲ್ಲದ ಕಾರಣ ರೈತ ಹತಾಶೆನಾಗಿದ್ದಾನೆ.
ದಿನನಿತ್ಯ ಕೂಲಿಕಾರ್ಮಿಕರಿಂದ ಬದನೆಕಾಯಿ ಕಟಾವ್ ಮಾಡಿಸಿ ಬ್ಲಾಕ್ ನಲ್ಲಿ ಮಾರುಕಟ್ಟೆಗೆ ಬಂದರೆ ಬದನೆಕಾಯಿ ಕೇಳುವವರೇ ಇಲ್ಲದಂತಾಗಿದೆ. ಹರಾಜಿನಲ್ಲಿ ಬಾಕ್ಸಗೆ ಇಪ್ಪತ್ತು ರೂಪಾಯಿ ಮೂವತ್ತು ರೂಪಾಯಿ ಕೇಳುತ್ತಿದ್ದಾರೆ. ಈ ರೀತಿ ಮಾಡಿದರೆ ಕೂಲಿಕಾರ್ಮಿಕ ಕೂಲಿ ವಾಹನ ಖರ್ಚು ಸಹ ಮೈಮೇಲೆ ಬರುತ್ತೆ ಎನ್ನುತ್ತಾರೆ ಶಿವಪ್ಪ.
ದಿನನಿತ್ಯ ನೋಡಿ ನೋಡಿ ಇದೀಗ ಅವರು ಎಕರೆ ಜಮೀನಿನಲ್ಲಿ ಸೊಂಪಾಗಿ ಬೆಳೆದು ಉತ್ತಮವಾಗಿ ಬೆಳೆದ ಬದನಕಾಯಿ ಬೆಳೆಯನ್ನು ನಾಶಪಡಿಸಿದ್ದಾರೆ. ಟ್ರ್ಯಾಕ್ಟರ್ ರೋಟರ್ ಹಚ್ಚಿ ಅದಕ್ಕೂ ಸಹ ಕೂಲಿ ನೀಡಿ ಬದನೆಕಾಯಿ ಬೆಳೆಯನ್ನು ಹರಗಿದ್ದಾರೆ.
ಮುಂಗಾರು ಕೈಕೊಟ್ಟಿತು. ಹಿಂಗಾರೂ ಮಳೆ ಸಹ ಕೈಕೊಟ್ಟಿತು. ರೈತರಿಗೆ ಸಮರ್ಪಕ ವಿದ್ಯುತ್ ಸಹ ಇರಲಿಲ್ಲ. ಇಂತಹ ಕಷ್ಟಕಾಲದಲ್ಲಿ ಹಗಲು ರಾತ್ರಿ ಬೆಳೆಗೆ ನೀರು ಹಾಯಿಸಿ ಬೆಳೆಸಿದ ಬದನೆ ಹಾಳು ಮಾಡಲು ಮನಸ್ಸು ಬರುತ್ತಿಲ್ಲ ಆದರೆ ಅನಿವಾರ್ಯ. ಕೊನೆಯ ಪಕ್ಷ ಇದರಿಂದ ಭೂಮಿತಾಯಿಗೆ ಗೊಬ್ಬರವಾದರೂ ಆದರೆ ಸಾಕು ಎನ್ನುತ್ತಿದ್ದಾರೆ ಶಿವಪ್ಪ.
ಐವತ್ತು ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದು ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದೆವು. ಆದಾಯ ಇರಲಿ, ಕೊನೆಯ ಪಕ್ಷ ಅದಕ್ಕೆ ಮಾಡಿದ ಖರ್ಚು ಸಹ ಬರಲಿಲ್ಲಾ ಎನ್ನುತ್ತಾರೆ ರೈತ ಶಿವಪ್ಪ. ಇದು ಕೇವಲ ಇವರೊಬ್ಬರದ್ದೇ ಸಮಸ್ಯೆಯಲ್ಲ. ಸುತ್ತಮುತ್ತ ಬದನೆಕಾಯಿ ಬೆಳೆದ ಬಹುತೇಕ ರೈತರದ್ದು ಇದೇ ಕಥೆ ಎನ್ನುತ್ತಾರೆ ಶಿವಪ್ಪ. ಒಂದು ಕಡೆ ಪ್ರಕೃತಿ ಮುನಿಸಿಕೊಂಡಿದೆ.
ಮಳೆ ನಂಬಿ ಬೆಳೆದ ಬೆಳೆಗಳು ಬರಲಿಲ್ಲಾ. ಇನ್ನೊಂದು ಕಡೆ ಮಳೆ ಕೈಕೊಟ್ಟರೂ ಜೀವನಾಂಶಕ್ಕೆ ಇರಲಿ ಎಂದು ಬೆಳೆದ ಬದನೆಕಾಯಿ ಉತ್ತಮ ಇಳುವರಿ ಬಂದಿದೆ. ಆದರೆ ಅದನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋದರೇ ಕೇಳುವವರಿಲ್ಲ. ಕೆಜಿಗೆ ಕನಿಷ್ಠ ಪಕ್ಷ ಒಂದು ರೂಪಾಯಿ ಸಹ ಸಿಗುತ್ತಿಲ್ಲ. ಜಮೀನಿನಿಂದ ಸಾರಿಗೆ ವೆಚ್ಚ ಸೇರಿ ವರ್ತಕರು ಕಮೀಷನ್ ಹಮಾಲರ ಕೂಲಿಗೆ ಕೈಯಿಂದ ಹಣ ಕೊಟ್ಟು ಬರುವ ಸ್ಥಿತಿ ಇದೆ ಈ ರೀತಿಯಾದರೆ ಹೇಗೆ ಬದುಕುಬೇಕು ಎನ್ನುತ್ತಿದ್ದಾನೆ ಶಿವಪ್ಪ. ಇನ್ನು ಶಿವಪ್ಪನ ಪರಿಸ್ಥಿತಿ ನೋಡಿ ಉಳಿದ ರೈತರು ಮರುಗಿದ್ದಾರೆ.
ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಶಿವಪ್ಪ ಕಷ್ಟಕಾಲದಲ್ಲಿರಲಿ ಎಂದು ಬದನೆಕಾಯಿ ಬೆಳೆಯಲು ಮುಂದಾಗಿದ್ದ. ಉತ್ತಮ ಬೀಜ ತಂದು ಒಂದು ಎಕರೆ ಜಮೀನಿನಲ್ಲಿ ಬದನೆಕಾಯಿ ಹಚ್ಚಿದ್ದ. ಬದನೆಕಾಯಿ ಹಚ್ಚಿ ನಾಲ್ಕು ತಿಂಗಳಲ್ಲಿ ಉತ್ತಮವಾಗಿ ಬೆಳೆ ಬಂದಿತ್ತು. ಫಸಲು ಸಹ ನಿರೀಕ್ಷೆಗಿಂತ ಅಧಿಕ ಬಂದಿದೆ. ಆದರೆ ಬದನೆಕಾಯಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಶಿವಪ್ಪ ಒಂದು ಎಕರೆಯಲ್ಲಿ ಸುಮಾರು 50 ಸಾವಿರ ರೂಪಾಯಿ ಖರ್ಚು ಮಾಡಿದ ಬೆಳೆ ಫಸಲು ಬಿಟ್ಟರು ಬದನೆಕಾಯಿಗೆ ಬೆಲೆ ಇಲ್ಲದ ಕಾರಣ ರೈತ ಹತಾಶೆನಾಗಿದ್ದಾನೆ.
ದಿನನಿತ್ಯ ಕೂಲಿಕಾರ್ಮಿಕರಿಂದ ಬದನೆಕಾಯಿ ಕಟಾವ್ ಮಾಡಿಸಿ ಬ್ಲಾಕ್ ನಲ್ಲಿ ಮಾರುಕಟ್ಟೆಗೆ ಬಂದರೆ ಬದನೆಕಾಯಿ ಕೇಳುವವರೇ ಇಲ್ಲದಂತಾಗಿದೆ. ಹರಾಜಿನಲ್ಲಿ ಬಾಕ್ಸಗೆ ಇಪ್ಪತ್ತು ರೂಪಾಯಿ ಮೂವತ್ತು ರೂಪಾಯಿ ಕೇಳುತ್ತಿದ್ದಾರೆ. ಈ ರೀತಿ ಮಾಡಿದರೆ ಕೂಲಿಕಾರ್ಮಿಕ ಕೂಲಿ ವಾಹನ ಖರ್ಚು ಸಹ ಮೈಮೇಲೆ ಬರುತ್ತೆ ಎನ್ನುತ್ತಾರೆ ಶಿವಪ್ಪ.
ದಿನನಿತ್ಯ ನೋಡಿ ನೋಡಿ ಇದೀಗ ಅವರು ಎಕರೆ ಜಮೀನಿನಲ್ಲಿ ಸೊಂಪಾಗಿ ಬೆಳೆದು ಉತ್ತಮವಾಗಿ ಬೆಳೆದ ಬದನಕಾಯಿ ಬೆಳೆಯನ್ನು ನಾಶಪಡಿಸಿದ್ದಾರೆ. ಟ್ರ್ಯಾಕ್ಟರ್ ರೋಟರ್ ಹಚ್ಚಿ ಅದಕ್ಕೂ ಸಹ ಕೂಲಿ ನೀಡಿ ಬದನೆಕಾಯಿ ಬೆಳೆಯನ್ನು ಹರಗಿದ್ದಾರೆ.
ಮುಂಗಾರು ಕೈಕೊಟ್ಟಿತು. ಹಿಂಗಾರೂ ಮಳೆ ಸಹ ಕೈಕೊಟ್ಟಿತು. ರೈತರಿಗೆ ಸಮರ್ಪಕ ವಿದ್ಯುತ್ ಸಹ ಇರಲಿಲ್ಲ. ಇಂತಹ ಕಷ್ಟಕಾಲದಲ್ಲಿ ಹಗಲು ರಾತ್ರಿ ಬೆಳೆಗೆ ನೀರು ಹಾಯಿಸಿ ಬೆಳೆಸಿದ ಬದನೆ ಹಾಳು ಮಾಡಲು ಮನಸ್ಸು ಬರುತ್ತಿಲ್ಲ ಆದರೆ ಅನಿವಾರ್ಯ. ಕೊನೆಯ ಪಕ್ಷ ಇದರಿಂದ ಭೂಮಿತಾಯಿಗೆ ಗೊಬ್ಬರವಾದರೂ ಆದರೆ ಸಾಕು ಎನ್ನುತ್ತಿದ್ದಾರೆ ಶಿವಪ್ಪ.
ಐವತ್ತು ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದು ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದೆವು. ಆದಾಯ ಇರಲಿ, ಕೊನೆಯ ಪಕ್ಷ ಅದಕ್ಕೆ ಮಾಡಿದ ಖರ್ಚು ಸಹ ಬರಲಿಲ್ಲಾ ಎನ್ನುತ್ತಾರೆ ರೈತ ಶಿವಪ್ಪ. ಇದು ಕೇವಲ ಇವರೊಬ್ಬರದ್ದೇ ಸಮಸ್ಯೆಯಲ್ಲ. ಸುತ್ತಮುತ್ತ ಬದನೆಕಾಯಿ ಬೆಳೆದ ಬಹುತೇಕ ರೈತರದ್ದು ಇದೇ ಕಥೆ ಎನ್ನುತ್ತಾರೆ ಶಿವಪ್ಪ. ಒಂದು ಕಡೆ ಪ್ರಕೃತಿ ಮುನಿಸಿಕೊಂಡಿದೆ.
ಮಳೆ ನಂಬಿ ಬೆಳೆದ ಬೆಳೆಗಳು ಬರಲಿಲ್ಲಾ. ಇನ್ನೊಂದು ಕಡೆ ಮಳೆ ಕೈಕೊಟ್ಟರೂ ಜೀವನಾಂಶಕ್ಕೆ ಇರಲಿ ಎಂದು ಬೆಳೆದ ಬದನೆಕಾಯಿ ಉತ್ತಮ ಇಳುವರಿ ಬಂದಿದೆ. ಆದರೆ ಅದನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋದರೇ ಕೇಳುವವರಿಲ್ಲ. ಕೆಜಿಗೆ ಕನಿಷ್ಠ ಪಕ್ಷ ಒಂದು ರೂಪಾಯಿ ಸಹ ಸಿಗುತ್ತಿಲ್ಲ. ಜಮೀನಿನಿಂದ ಸಾರಿಗೆ ವೆಚ್ಚ ಸೇರಿ ವರ್ತಕರು ಕಮೀಷನ್ ಹಮಾಲರ ಕೂಲಿಗೆ ಕೈಯಿಂದ ಹಣ ಕೊಟ್ಟು ಬರುವ ಸ್ಥಿತಿ ಇದೆ ಈ ರೀತಿಯಾದರೆ ಹೇಗೆ ಬದುಕುಬೇಕು ಎನ್ನುತ್ತಿದ್ದಾನೆ ಶಿವಪ್ಪ. ಇನ್ನು ಶಿವಪ್ಪನ ಪರಿಸ್ಥಿತಿ ನೋಡಿ ಉಳಿದ ರೈತರು ಮರುಗಿದ್ದಾರೆ.