ಹಾವೇರಿ: ಬೆಳೆ ವಿಮೆ ಟೆಂಡರ್ ಹಾಕಲು ಮುಂದೆ ಬಾರದ ವಿಮಾ ಕಂಪನಿಗಳು, ರೈತರಿಗೆ ಸಂಕಷ್ಟ
1127 views
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿಹಾವೇರಿ: ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪಡೆಯುವ ಜಿಲ್ಲೆ ಹಾವೇರಿ. ಇಲ್ಲಿ ಕಳೆದ ವರ್ಷ ಸುಮಾರು 440 ಕೋಟಿ ರೂಪಾಯಿ ಬೆಳೆವಿಮೆ ಪಡೆದಿದೆ. ಪ್ರತಿವರ್ಷ ಇಲ್ಲಿಯ ರೈತರು ಬೆಳೆಗಳಿಗೆ ವಿಮೆ ಮಾಡಿಸುತ್ತಾರೆ. ಸರಿಯಾಗಿ ಮಳೆಬಾರದೆ ಬೆಳೆ ಬಾರದ ವರ್ಷಗಳಲ್ಲಿ ಬೆಳೆವಿಮೆಯಿಂದ ಸ್ವಲ್ಪಮಟ್ಟಿನ ಸಹಾಯವಾಗುತ್ತೆ. ಮುಂಗಾರು ಆರಂಭವಾಗುತ್ತಿದ್ದಂತೆ ಬೆಳೆವಿಮಾ ಕಂಪನಿಗಳು ಟೆಂಡರ್ ಹಾಕುವ ಮೂಲಕ ಬೆಳೆವಿಮೆಗೆ ಅವಕಾಶ ಮಾಡಿಕೊಡುತ್ತವೆ. ಆದರೆ, ಪ್ರಸಕ್ತ ವರ್ಷ ಹವಾಮಾನ ಆಧಾರಿತ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಯಾವುದೇ ಇನ್ಶ್ಯೂರೆನ್ಸ್ ಕಂಪನಿಗಳು ಮುಂದೆ ಬಂದಿಲ್ಲ.
ಈಗಾಗಲೇ ಮುಂಗಾರು ಮಳೆ ವಿಳಂಬದಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮಾ ಕಂಪನಿಗಳು ಟೆಂಡರ್ ಹಾಕಲು ಮುಂದೆ ಬರದಿರುವುದು ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ. ಹಾನಗಲ್ ತಾಲೂಕಿನಲ್ಲಿ ಬೆಳೆದ ಅಡಿಕೆ, ಮಾವು, ಶುಂಠಿ ಸೇರಿ ಮೆಣಸಿನಕಾಯಿ ಬೆಳೆಗಳಿಗೆ ಹವಮಾನ ಆಧಾರಿತ ಬೆಳೆವಿಮೆ ಟೆಂಡರ್ ಹಾಕಲು ವಿಮಾ ಕಂಪನಿಗಳು ಮುಂದೆ ಬಂದಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದೆ ಇರುವುದು ವಿಮಾ ಕಂಪನಿಗಳು ಹಿಂದೆ ಸರಿಯಲು ಕಾರಣ ಎಂದು ರೈತರು ಆರೋಪಿಸಿದ್ದಾರೆ. ಹೆಚ್ಚು ರೈತರಿಗೆ ವಿಮೆ ಹಣ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಕಂಪನಿಗಳು ಟೆಂಡರ್ ಹಾಕಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಮಾಜಿ ಸಚಿವ ದಿವಂಗತ ಸಿ.ಎಂ.ಉದಾಸಿ ಅವರು ಬೆಳೆ ವಿಮೆ ಕುರಿತಂತೆ ರೈತರಲ್ಲಿ ಜಾಗೃತಿ ಮೂಡಿಸಿದ್ದರು. ಅದರಂತೆ ಇಲ್ಲಿಯ ರೈತರು ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪಡೆಯುತ್ತಿದ್ದಾರೆ. ಹಾನಗಲ್ ತಾಲೂಕು ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪಡೆಯುವ ತಾಲೂಕಾಗಿದೆ. ಇಲ್ಲಿ ಮಾವು, ಅಡಿಕೆ ಹಾಗೂ ಶುಂಠಿ ಬೆಳೆಯನ್ನ ಹೆಚ್ಚು ಬೆಳೆಯುತ್ತಾರೆ.
ಈಗಾಗಲೇ ಮುಂಗಾರು ಮಳೆ ವಿಳಂಬದಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮಾ ಕಂಪನಿಗಳು ಟೆಂಡರ್ ಹಾಕಲು ಮುಂದೆ ಬರದಿರುವುದು ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ. ಹಾನಗಲ್ ತಾಲೂಕಿನಲ್ಲಿ ಬೆಳೆದ ಅಡಿಕೆ, ಮಾವು, ಶುಂಠಿ ಸೇರಿ ಮೆಣಸಿನಕಾಯಿ ಬೆಳೆಗಳಿಗೆ ಹವಮಾನ ಆಧಾರಿತ ಬೆಳೆವಿಮೆ ಟೆಂಡರ್ ಹಾಕಲು ವಿಮಾ ಕಂಪನಿಗಳು ಮುಂದೆ ಬಂದಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದೆ ಇರುವುದು ವಿಮಾ ಕಂಪನಿಗಳು ಹಿಂದೆ ಸರಿಯಲು ಕಾರಣ ಎಂದು ರೈತರು ಆರೋಪಿಸಿದ್ದಾರೆ. ಹೆಚ್ಚು ರೈತರಿಗೆ ವಿಮೆ ಹಣ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಕಂಪನಿಗಳು ಟೆಂಡರ್ ಹಾಕಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಮಾಜಿ ಸಚಿವ ದಿವಂಗತ ಸಿ.ಎಂ.ಉದಾಸಿ ಅವರು ಬೆಳೆ ವಿಮೆ ಕುರಿತಂತೆ ರೈತರಲ್ಲಿ ಜಾಗೃತಿ ಮೂಡಿಸಿದ್ದರು. ಅದರಂತೆ ಇಲ್ಲಿಯ ರೈತರು ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪಡೆಯುತ್ತಿದ್ದಾರೆ. ಹಾನಗಲ್ ತಾಲೂಕು ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪಡೆಯುವ ತಾಲೂಕಾಗಿದೆ. ಇಲ್ಲಿ ಮಾವು, ಅಡಿಕೆ ಹಾಗೂ ಶುಂಠಿ ಬೆಳೆಯನ್ನ ಹೆಚ್ಚು ಬೆಳೆಯುತ್ತಾರೆ.