ಶಿಗ್ಗಾಂವಿ: ಜಾನಪದ ವಿಶ್ವವಿದ್ಯಾನಿಲಯದ ನೇಮಕಾತಿಯಲ್ಲಿ ಅಕ್ರಮ ಆರೋಪ
1068 views
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಜಾನಪದ ವಿಶ್ವವಿದ್ಯಾನಿಲಯದ ವಿರುದ್ಧ ಆಕ್ರಮ ಆರೋಪ ಕೇಳಿಬಂದಿದೆ. ವಿಶ್ವದ ಎರಡನೆಯ ಜಾನಪದ ವಿವಿ ಖ್ಯಾತಿಯ ಗೊಟಗೋಡಿ ಜಾನಪದ ವಿವಿಯಲ್ಲಿ ನೇಮಕಾತಿ ಅಕ್ರಮ ನಡೆದಿದೆ ಎಂದು ಜಾನಪದ ವಿವಿ ಸರ್ವಾಂಗೀಣ ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಬಸವರಾಜ್ ಗೊಬ್ಬಿ ಆರೋಪಿಸಿದ್ದಾರೆ.
ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಜಾನಪದ ವಿವಿ ಸರ್ಕಾರದ ಆದೇಶ ಬರುವ ಏಳು ದಿನ ಮುಂಚೆಯೇ ಅಭ್ಯರ್ಥಿಗಳಿಗೆ ಹಾಲ್ ಟಿಕಿಟ್ ನೀಡಿದೆ ಎಂದು ಆರೋಪಿಸಿದರು. ಸರ್ಕಾರದ ಆದೇಶ 27-04-2023 ರಂದು ಬಂದರೆ, ಜಾನಪದ ವಿವಿ 20-04-2023 ರಂದು ಏಳು ದಿನ ಮುಂಚಿತವಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ನೀಡಿದ್ದಾರೆ ಎಂದು ಆರೋಪಿಸಿದರು. ಒಂದೊಂದು ಹುದ್ದೆಗೆ ನಲವತ್ತು ಲಕ್ಷದಿಂದ ಐವತ್ತು ಲಕ್ಷ ರೂಪಾಯಿ ಹಣ ಪಡೆದು ಜಾನಪದ ವಿವಿ ಕುಲಪತಿ ರೆಜಿಸ್ಟಾರ್, ಸಹಕುಲಪತಿಗಳು ಮಾಡಿದ್ದಾರೆ ಎಂದು ಬಸವರಾಜ್ ಆರೋಪಿಸಿದರು. ಅರ್ಜಿ ಹಾಕಿದ ಸಾಕಷ್ಟು ಅಭ್ಯರ್ಥಿಗಳು ಟ್ರಸ್ಟ್ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂದು ಬಸವರಾಜ್ ಹೇಳಿದರು.
ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಜಾನಪದ ವಿವಿ ಸರ್ಕಾರದ ಆದೇಶ ಬರುವ ಏಳು ದಿನ ಮುಂಚೆಯೇ ಅಭ್ಯರ್ಥಿಗಳಿಗೆ ಹಾಲ್ ಟಿಕಿಟ್ ನೀಡಿದೆ ಎಂದು ಆರೋಪಿಸಿದರು. ಸರ್ಕಾರದ ಆದೇಶ 27-04-2023 ರಂದು ಬಂದರೆ, ಜಾನಪದ ವಿವಿ 20-04-2023 ರಂದು ಏಳು ದಿನ ಮುಂಚಿತವಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ನೀಡಿದ್ದಾರೆ ಎಂದು ಆರೋಪಿಸಿದರು. ಒಂದೊಂದು ಹುದ್ದೆಗೆ ನಲವತ್ತು ಲಕ್ಷದಿಂದ ಐವತ್ತು ಲಕ್ಷ ರೂಪಾಯಿ ಹಣ ಪಡೆದು ಜಾನಪದ ವಿವಿ ಕುಲಪತಿ ರೆಜಿಸ್ಟಾರ್, ಸಹಕುಲಪತಿಗಳು ಮಾಡಿದ್ದಾರೆ ಎಂದು ಬಸವರಾಜ್ ಆರೋಪಿಸಿದರು. ಅರ್ಜಿ ಹಾಕಿದ ಸಾಕಷ್ಟು ಅಭ್ಯರ್ಥಿಗಳು ಟ್ರಸ್ಟ್ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂದು ಬಸವರಾಜ್ ಹೇಳಿದರು.