ಎಲ್ಲ ಕಾಂಗ್ರೆಸ್ಸಿಗರೂ ದೇಶದ್ರೋಹಿಗಳಲ್ಲ, ಸ್ವಾತಂತ್ರ್ಯ ಹೋರಾಟಗಾರರಿಗೆ ಕಾಂಗ್ರೆಸ್ ಹೆಸರಲ್ಲಿ ಅವಮಾನ: ಈಶ್ವರಪ್ಪ
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿ
ಬಿಜೆಪಿ ಶಾಸಕರು ಮನೆಗೆ 'ಸಾವರ್ಕರ್ ಸದನ; ಅಂತಾ ಬೋರ್ಡ ಹಾಕಿಕೊಳ್ಳುತ್ತೇವೆ. ಕಾಂಗ್ರೆಸ್ ಶಾಸಕರು ನಿಮ್ಮ ಮನೆಗೆ 'ಟಿಪ್ಪು ಸದನ' ಅಂತಾ ಹಾಕಿಕೊಳ್ಳುವ ತಾಕತ್ತು ಇದೀಯಾ? ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು. ಹಾವೇರಿಯಲ್ಲಿ ವೀರ ಸಾವರ್ಕರ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವಿಧಾನಸೌಧದಲ್ಲಿರುವ ವೀರ ಸಾವರ್ಕರ್ ಪೋಟೋ ತೆಗೆಯುವ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಶಾಸಕರಿಗೆ ಈಶ್ವರಪ್ಪ ಬಹಿರಂಗ ಸವಾಲಾಕಿದರು. ಇದಕ್ಕೆ ನಿಮ್ಮ ಮನಸ್ಸು ಕೂಡಾ ಒಪ್ಪಲ್ಲ. ಕಾಂಗ್ರೆಸ್ಸಿಗರೆಲ್ಲಾ ದೇಶದ್ರೋಹಿಗಳಲ್ಲಾ. ಹಿಂದುತ್ವದ ಬಗ್ಗೆ ಮಾತಾಡಿದರೆ ಕೋಮುವಾದಿ ಅಂತೀರಾ. ಸಾಧು ಸಂತರು ಹೊರಟರೆ ಜಾತಿ ವಾದಿಗಳು ಅಂತಾರೆ ಎಂದು ಈಶ್ವರಪ್ಪ ಆರೋಪಿಸಿದರು.
'' ಪಾಕಿಸ್ತಾನದವರು ನರೇಂದ್ರ ಮೋದಿಯವರಂಥ ಪ್ರಧಾನಿ ಬೇಕು ಅಂತಾರೆ. ಅಲ್ಲಿ ಅವರಿಗೆ ತಿನ್ನಲು ಅನ್ನವಿಲ್ಲಾ, ಕುಡಿಯಲು ನೀರಿಲ್ಲಾ. ಆದರೆ, ಪಾಕಿಸ್ತಾನ ಕ್ರಿಕೆಟ್ ಗೆದ್ದರೆ, ಇಲ್ಲಿಯವರು ಪಟಾಕಿ ಹೊಡೆಯುತ್ತಾರೆ. ಇಲ್ಲಿ ಅನ್ನ ತಿಂದು, ಪಾಕಿಸ್ತಾನ್ ಜಿಂದಾಬಾದ್ ಅಂತೀರಿ. ನೀವು ಒಂದು ಸಲ ಹಿಂದೂಸ್ತಾನ್ ಜಿಂದಾಬಾದ್ ಅನ್ನೋ ಕಾಲ ಬರುತ್ತೆ ಅದರಲ್ಲಿ ಅನುಮಾನವಿಲ್ಲಾ'' ಎಂದು ಈಶ್ವರಪ್ಪ ಹೇಳಿದರು.
''ಕರ್ನಾಟಕದ ಒಬ್ಬ ವ್ಯಕ್ತಿ ಸಾವರ್ಕರ್ ಭಾವಚಿತ್ರದ ತಗೆಯುವ ಬಗ್ಗೆ ಮಾತನಾಡುತ್ತಾರೆ. ಅವರಿಗೇನು ಗೊತ್ತು ವೀರ ಸಾವರ್ಕರ್. ಒಬ್ಬ ಸಾವರ್ಕರ್ ಬಗ್ಗೆ ಮತ್ತೊಬ್ಬ ವೀರನಿಗೆ ಮಾತ್ರ ನಾಡುವ ಅರ್ಹತೆ ಇದೆ. ಬ್ರಿಟಿಷ್ ವಿರುದ್ಧ ಹೋರಾಡಿದ ಒಬ್ಬ ವ್ಯಕ್ತಿ ಅಂದ್ರೆ ಅದು ವೀರ ಸಾವರ್ಕರ್. ಇಡೀ ದೇಶ ಬ್ರಿಟಿಷ್ ಮುಂದೆ ತಲೆ ಬಾಗಿತ್ತು. ಅಂದು ಧೈರ್ಯ ತಂದಿದ್ದು ವೀರ ಸಾವರ್ಕರ್ '' ಎಂದು ಸತ್ಯಕಿ ಸಾವರ್ಕರ್ ಹೇಳಿದರು.
ವಿಧಾನಸೌಧದಲ್ಲಿರುವ ವೀರ ಸಾವರ್ಕರ್ ಪೋಟೋ ತೆಗೆಯುವ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಶಾಸಕರಿಗೆ ಈಶ್ವರಪ್ಪ ಬಹಿರಂಗ ಸವಾಲಾಕಿದರು. ಇದಕ್ಕೆ ನಿಮ್ಮ ಮನಸ್ಸು ಕೂಡಾ ಒಪ್ಪಲ್ಲ. ಕಾಂಗ್ರೆಸ್ಸಿಗರೆಲ್ಲಾ ದೇಶದ್ರೋಹಿಗಳಲ್ಲಾ. ಹಿಂದುತ್ವದ ಬಗ್ಗೆ ಮಾತಾಡಿದರೆ ಕೋಮುವಾದಿ ಅಂತೀರಾ. ಸಾಧು ಸಂತರು ಹೊರಟರೆ ಜಾತಿ ವಾದಿಗಳು ಅಂತಾರೆ ಎಂದು ಈಶ್ವರಪ್ಪ ಆರೋಪಿಸಿದರು.
'' ಪಾಕಿಸ್ತಾನದವರು ನರೇಂದ್ರ ಮೋದಿಯವರಂಥ ಪ್ರಧಾನಿ ಬೇಕು ಅಂತಾರೆ. ಅಲ್ಲಿ ಅವರಿಗೆ ತಿನ್ನಲು ಅನ್ನವಿಲ್ಲಾ, ಕುಡಿಯಲು ನೀರಿಲ್ಲಾ. ಆದರೆ, ಪಾಕಿಸ್ತಾನ ಕ್ರಿಕೆಟ್ ಗೆದ್ದರೆ, ಇಲ್ಲಿಯವರು ಪಟಾಕಿ ಹೊಡೆಯುತ್ತಾರೆ. ಇಲ್ಲಿ ಅನ್ನ ತಿಂದು, ಪಾಕಿಸ್ತಾನ್ ಜಿಂದಾಬಾದ್ ಅಂತೀರಿ. ನೀವು ಒಂದು ಸಲ ಹಿಂದೂಸ್ತಾನ್ ಜಿಂದಾಬಾದ್ ಅನ್ನೋ ಕಾಲ ಬರುತ್ತೆ ಅದರಲ್ಲಿ ಅನುಮಾನವಿಲ್ಲಾ'' ಎಂದು ಈಶ್ವರಪ್ಪ ಹೇಳಿದರು.
''ಕರ್ನಾಟಕದ ಒಬ್ಬ ವ್ಯಕ್ತಿ ಸಾವರ್ಕರ್ ಭಾವಚಿತ್ರದ ತಗೆಯುವ ಬಗ್ಗೆ ಮಾತನಾಡುತ್ತಾರೆ. ಅವರಿಗೇನು ಗೊತ್ತು ವೀರ ಸಾವರ್ಕರ್. ಒಬ್ಬ ಸಾವರ್ಕರ್ ಬಗ್ಗೆ ಮತ್ತೊಬ್ಬ ವೀರನಿಗೆ ಮಾತ್ರ ನಾಡುವ ಅರ್ಹತೆ ಇದೆ. ಬ್ರಿಟಿಷ್ ವಿರುದ್ಧ ಹೋರಾಡಿದ ಒಬ್ಬ ವ್ಯಕ್ತಿ ಅಂದ್ರೆ ಅದು ವೀರ ಸಾವರ್ಕರ್. ಇಡೀ ದೇಶ ಬ್ರಿಟಿಷ್ ಮುಂದೆ ತಲೆ ಬಾಗಿತ್ತು. ಅಂದು ಧೈರ್ಯ ತಂದಿದ್ದು ವೀರ ಸಾವರ್ಕರ್ '' ಎಂದು ಸತ್ಯಕಿ ಸಾವರ್ಕರ್ ಹೇಳಿದರು.