ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ 100 ಪರ್ಸೆಂಟ್ ನನಗೆ, ಸಿಹಿ ಸುದ್ದಿ ಸಿಗುತ್ತೆ: ಕೆಈ ಕಾಂತೇಶ್
1224 views
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿ''ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆ ಟಿಕೆಟ್ ನನಗೆ ಸಿಗುವುದು ನೂರಕ್ಕೆ ನೂರುಪಟ್ಟು ಖಚಿತ'' ಎಂದು ಬಿಜೆಪಿ ನಾಯಕ ಈಶ್ವರಪ್ಪ ಅವರ ಮಗ ಕೆಈ ಕಾಂತೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾವೇರಿಯ ಸಿಂಧಗಿ ಮಠದಲ್ಲಿ ಕೆಈ ಕಾಂತೇಶ್ ಅವರು ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು. ''ವಿಶೇಷ ಪೂಜೆ ಅನ್ನೋಕ್ಕಿಂತ ಅನೇಕ ವರ್ಷಗಳಿಂದ ಮಠಕ್ಕೆ ಬರೋದು ರೂಢಿ. ನಿನ್ನೆ ಬರಬೇಕಿತ್ತು, ಇಂದು ಗುರುಗಳ ಆಶೀರ್ವಾದ ಪಡೆದುಕೊಂಡೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂಬ ಅಭಿಲಾಶೆಯಿಂದ ಪೂಜೆ ಮಾಡಿದ್ದೇವೆ'' ಎಂದು ಹೇಳಿದರು.
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯ ಬಗ್ಗೆ ಮಾತನಾಡಿದ ಅವರು, ''ನಮ್ಮಲ್ಲಿ ಗೊಂದಲ ಇಲ್ಲ. ಟಿಕೆಟ್ ಕೇಳೋದು ಎಲ್ಲರ ಹಕ್ಕು, ಯಾರಿಗೆ ಟಿಕೆಟ್ ಕೊಡಬೇಕು ಅನ್ನೋದು ಹೈಕಮಾಂಡ್ ನಿರ್ಧರಿಸುತ್ತದೆ. ಅವರ ಪರವಾಗಿ ನಿಂತು ಎಲ್ಲರೂ ಕೆಲಸ ಮಾಡೋದು ಪದ್ದತಿ. ನಾನು ಟಿಕೆಟ್ ನಿರೀಕ್ಷೆಯಲ್ಲಿದ್ದು, ನನಗೆ ಟಿಕೆಟ್ ಸಿಗೋದು 100 ಪರ್ಸೆಂಟ್ ಗ್ಯಾರಂಟಿ. ನನಗೆ ಸಂಪೂರ್ಣ ವಿಶ್ವಾಸ ಇದೆ. ಯಾವುದೇ ಕಾರಣಕ್ಕೂ ನನಗೆ ಅನ್ಯಾಯ ಆಗಲ್ಲ. ಈಶ್ವರಪ್ಪ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಅಮಿತ್ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ'' ಎಂದು ತಿಳಿಸಿದರು.
''ದಿಲ್ಲಿಯಲ್ಲಿ ಬಿಜೆಪಿ ಚುನಾವಣಾ ನಿರ್ಣಯ ಸಮಿತಿಯ ಸಭೆ ಮುಕ್ತಾಯವಾದ ನಂತರದಲ್ಲಿ ಸಿಹಿ ಸುದ್ದಿ ಸಿಗುವುದು ಖಚಿತ. ಬೆಂಬಲಿಗರು ತಾಳ್ಮೆಯಿಂದ ಇರಬೇಕು. ಲೋಕಸಭೆಗೆ ನಾನೇ ಅಭ್ಯರ್ಥಿ ಆಗುತ್ತೇನೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾವೇರಿಯ ಸಿಂಧಗಿ ಮಠದಲ್ಲಿ ಕೆಈ ಕಾಂತೇಶ್ ಅವರು ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು. ''ವಿಶೇಷ ಪೂಜೆ ಅನ್ನೋಕ್ಕಿಂತ ಅನೇಕ ವರ್ಷಗಳಿಂದ ಮಠಕ್ಕೆ ಬರೋದು ರೂಢಿ. ನಿನ್ನೆ ಬರಬೇಕಿತ್ತು, ಇಂದು ಗುರುಗಳ ಆಶೀರ್ವಾದ ಪಡೆದುಕೊಂಡೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂಬ ಅಭಿಲಾಶೆಯಿಂದ ಪೂಜೆ ಮಾಡಿದ್ದೇವೆ'' ಎಂದು ಹೇಳಿದರು.
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯ ಬಗ್ಗೆ ಮಾತನಾಡಿದ ಅವರು, ''ನಮ್ಮಲ್ಲಿ ಗೊಂದಲ ಇಲ್ಲ. ಟಿಕೆಟ್ ಕೇಳೋದು ಎಲ್ಲರ ಹಕ್ಕು, ಯಾರಿಗೆ ಟಿಕೆಟ್ ಕೊಡಬೇಕು ಅನ್ನೋದು ಹೈಕಮಾಂಡ್ ನಿರ್ಧರಿಸುತ್ತದೆ. ಅವರ ಪರವಾಗಿ ನಿಂತು ಎಲ್ಲರೂ ಕೆಲಸ ಮಾಡೋದು ಪದ್ದತಿ. ನಾನು ಟಿಕೆಟ್ ನಿರೀಕ್ಷೆಯಲ್ಲಿದ್ದು, ನನಗೆ ಟಿಕೆಟ್ ಸಿಗೋದು 100 ಪರ್ಸೆಂಟ್ ಗ್ಯಾರಂಟಿ. ನನಗೆ ಸಂಪೂರ್ಣ ವಿಶ್ವಾಸ ಇದೆ. ಯಾವುದೇ ಕಾರಣಕ್ಕೂ ನನಗೆ ಅನ್ಯಾಯ ಆಗಲ್ಲ. ಈಶ್ವರಪ್ಪ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಅಮಿತ್ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ'' ಎಂದು ತಿಳಿಸಿದರು.
''ದಿಲ್ಲಿಯಲ್ಲಿ ಬಿಜೆಪಿ ಚುನಾವಣಾ ನಿರ್ಣಯ ಸಮಿತಿಯ ಸಭೆ ಮುಕ್ತಾಯವಾದ ನಂತರದಲ್ಲಿ ಸಿಹಿ ಸುದ್ದಿ ಸಿಗುವುದು ಖಚಿತ. ಬೆಂಬಲಿಗರು ತಾಳ್ಮೆಯಿಂದ ಇರಬೇಕು. ಲೋಕಸಭೆಗೆ ನಾನೇ ಅಭ್ಯರ್ಥಿ ಆಗುತ್ತೇನೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.