ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ಕಿತ್ತೂರು ಚೆನ್ನಮ್ಮನ ವಂಶಸ್ಥರು ನಾವು ಪಂಚಮಸಾಲಿಗಳು: ಲಕ್ಷ್ಮಿ ಹೆಬ್ಬಾಳಕರ್
1071 views
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿ''ಮೂರ್ತಿಗಳ ಸ್ಥಾಪನೆ ಪ್ರತಿಷ್ಠೆಯಾಗಬಾರದು ಇನ್ನೊಂದು ಧರ್ಮದವರಿಗೆ ನೋವಾಗಬಾರದು'' ಎಂದು ಕೂಡಲಸಂಗಮ ಪಂಚಮಸಾಲಿಪೀಠದ ಬಸವಜಯ ಮೃತ್ತುಂಜಯ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಕಿತ್ತೂರು ರಾಣೆ ಚೆನ್ನಮ್ಮ ಮೂರ್ತಿ ಅನಾವರಣಗೊಳಿಸಿದರು.
ಇನ್ನೊಂದು ಧರ್ಮದವರಿಗೆ ನೋವಾಗದಂತೆ ದಾರ್ಶನಿಕರ ಮೂರ್ತಿ ಪ್ರತಿಷ್ಠಾಪನೆ ಮಾಡುವದಲ್ಲಿ ತಪ್ಪೇನಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣಕ್ಕಾಗಿ ಪ್ರತಿನಿತ್ಯ ಶಿವಾಜಿ ಪ್ರತಿಮೆ ಅವಮಾನ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಅವಮಾನ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಅವಮಾನ ಮಾಡಲಾಗುತ್ತಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
''ಮಹಿಳೆಯರು ಪತಿ ಕಡೆಯಿಂದ ಹಣ ಪಡೆದುಕೊಂಡು ತವರು ಮನೆಗೆ ಹೋಗುತ್ತಿದ್ದರು. ಕಿರಾಣಿ ತರಕಾರಿ ತರಲು ಪತಿಯಿಂದ ಹಣ ಕೇಳುತ್ತಿದ್ದರು. ವಿದ್ಯುತ್ ಬಿಲ್ ಕಟ್ಟಲು ಪತಿ ಕಡೆಯಿಂದ ಹಣ ಕೇಳುತ್ತಿದ್ದರು. ಅದಕ್ಕಾಗಿ ಗಂಡುಮಕ್ಕಳನ್ನ ಕಾಡಬಾರದು ಅಂತಾ ಈ ಯೋಜನೆ ಜಾರಿಗೆ ತಂದಿದ್ದೇವೆ'' ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
''ಈ ಚುನಾವಣೆಯಲ್ಲಿ ನನ್ನ ಬಗ್ಗೆ ಸಾಕಷ್ಟು ಅಪಪ್ರಚಾರ ಮಾಡಿದರು. ಅವಾಗ ನಾನು ಹೇಳಿದ್ದೇ ಜನ ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ ಅಂತ, ಅದೇ ರೀತಿ 58 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದೆ. ಜನರ ಜೊತೆ ಜನರ ಕಷ್ಟಗಳಲ್ಲಿ ಸಮಾಜಗಳ ಮಧ್ಯ ಭಾಂದವ್ಯ ಇಟ್ಟುಕೊಂಡರೆ ಯಾವುದೇ ಪಕ್ಷದಲ್ಲಿರಲಿ ಜನ ಗೆಲ್ಲಿಸುತ್ತಾರೆ ಎಂಬುದಕ್ಕೆ ನಾನೆ ಸಾಕ್ಷಿ. ಪಂಚಮಸಾಲಿಗಳು ಬಹಳ ಮುಗ್ದರು 2ಎಗೆ ಎಷ್ಟೆಲ್ಲಾ ಹೋರಾಟ ಮಾಡಿದ್ದೇವೆ. ಪಂಚಮಸಾಲಿಗಳಲ್ಲಿ ಶ್ರೀಮಂತರಿದ್ದಾರೆ. ಬಡವರಿದ್ದಾರೆ ಕೂಲಿಕೆಲಸ ಮಾಡವವರಿದ್ದಾರೆ'' ಎಂದರು.
ಚುನಾವಣೆ ಪ್ರಣಾಳಿಕೆಯಲ್ಲಿ ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ಭರವಸೆ ನೀಡಿದ್ದೇವೆ ಅದನ್ನ ಈಡೇರಿಸಲು ಕಟಿಬದ್ದವಾಗಿವೆ. ಸ್ವಾತಂತ್ರ ಸಂಗ್ರಾಮದ ಕಹಳೆ ಊದಿದ ಮೊದಲ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ನಾನು ರಾಣಿ ಚೆನ್ನಮ್ಮ ವಂಶದವಳು. ಕೆಲವರು ಮಾಧ್ಯಮದವರ ಮೂಲಕ ನಾನು ಹೇಗೆ ಚೆನ್ನಮ್ಮ ವಂಶಸ್ಥಳು ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಸರಿಯಾದ ಟೈಮ್ಗೆ ಉತ್ತರ ನೀಡುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಇನ್ನೊಂದು ಧರ್ಮದವರಿಗೆ ನೋವಾಗದಂತೆ ದಾರ್ಶನಿಕರ ಮೂರ್ತಿ ಪ್ರತಿಷ್ಠಾಪನೆ ಮಾಡುವದಲ್ಲಿ ತಪ್ಪೇನಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣಕ್ಕಾಗಿ ಪ್ರತಿನಿತ್ಯ ಶಿವಾಜಿ ಪ್ರತಿಮೆ ಅವಮಾನ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಅವಮಾನ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಅವಮಾನ ಮಾಡಲಾಗುತ್ತಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
''ಮಹಿಳೆಯರು ಪತಿ ಕಡೆಯಿಂದ ಹಣ ಪಡೆದುಕೊಂಡು ತವರು ಮನೆಗೆ ಹೋಗುತ್ತಿದ್ದರು. ಕಿರಾಣಿ ತರಕಾರಿ ತರಲು ಪತಿಯಿಂದ ಹಣ ಕೇಳುತ್ತಿದ್ದರು. ವಿದ್ಯುತ್ ಬಿಲ್ ಕಟ್ಟಲು ಪತಿ ಕಡೆಯಿಂದ ಹಣ ಕೇಳುತ್ತಿದ್ದರು. ಅದಕ್ಕಾಗಿ ಗಂಡುಮಕ್ಕಳನ್ನ ಕಾಡಬಾರದು ಅಂತಾ ಈ ಯೋಜನೆ ಜಾರಿಗೆ ತಂದಿದ್ದೇವೆ'' ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
''ಈ ಚುನಾವಣೆಯಲ್ಲಿ ನನ್ನ ಬಗ್ಗೆ ಸಾಕಷ್ಟು ಅಪಪ್ರಚಾರ ಮಾಡಿದರು. ಅವಾಗ ನಾನು ಹೇಳಿದ್ದೇ ಜನ ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ ಅಂತ, ಅದೇ ರೀತಿ 58 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದೆ. ಜನರ ಜೊತೆ ಜನರ ಕಷ್ಟಗಳಲ್ಲಿ ಸಮಾಜಗಳ ಮಧ್ಯ ಭಾಂದವ್ಯ ಇಟ್ಟುಕೊಂಡರೆ ಯಾವುದೇ ಪಕ್ಷದಲ್ಲಿರಲಿ ಜನ ಗೆಲ್ಲಿಸುತ್ತಾರೆ ಎಂಬುದಕ್ಕೆ ನಾನೆ ಸಾಕ್ಷಿ. ಪಂಚಮಸಾಲಿಗಳು ಬಹಳ ಮುಗ್ದರು 2ಎಗೆ ಎಷ್ಟೆಲ್ಲಾ ಹೋರಾಟ ಮಾಡಿದ್ದೇವೆ. ಪಂಚಮಸಾಲಿಗಳಲ್ಲಿ ಶ್ರೀಮಂತರಿದ್ದಾರೆ. ಬಡವರಿದ್ದಾರೆ ಕೂಲಿಕೆಲಸ ಮಾಡವವರಿದ್ದಾರೆ'' ಎಂದರು.
ಚುನಾವಣೆ ಪ್ರಣಾಳಿಕೆಯಲ್ಲಿ ಪಂಚಮಸಾಲಿಗೆ 2ಎ ಮೀಸಲಾತಿ ನೀಡುವ ಭರವಸೆ ನೀಡಿದ್ದೇವೆ ಅದನ್ನ ಈಡೇರಿಸಲು ಕಟಿಬದ್ದವಾಗಿವೆ. ಸ್ವಾತಂತ್ರ ಸಂಗ್ರಾಮದ ಕಹಳೆ ಊದಿದ ಮೊದಲ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ನಾನು ರಾಣಿ ಚೆನ್ನಮ್ಮ ವಂಶದವಳು. ಕೆಲವರು ಮಾಧ್ಯಮದವರ ಮೂಲಕ ನಾನು ಹೇಗೆ ಚೆನ್ನಮ್ಮ ವಂಶಸ್ಥಳು ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಸರಿಯಾದ ಟೈಮ್ಗೆ ಉತ್ತರ ನೀಡುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.