ಅಂಧರ ಮಹಿಳಾ ಕ್ರಿಕೆಟ್ನಲ್ಲಿ ಹಾವೇರಿಯ ಗಂಗವ್ವಳಿಗೆ ಚಿನ್ನದ ಪದಕ! ಸರ್ಕಾರದಿಂದ ಪ್ರೋತ್ಸಾಹವೇ ಇಲ್ಲ!
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿ
ಹಾವೇರಿ : ಹೀಗೆ ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡು ಓಡಾಡ್ತಿರುವ ಈಕೆಯ ಹೆಸರು ಗಂಗವ್ವ.. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿಶುವಿನಾಳ ಗ್ರಾಮದ ಅಂಧ ಯುವತಿ.. ಈಕೆ ಎಲ್ಲರೂ ಹುಬ್ಬೇರಿಸುವಂತೆ ಅಂಧರ ಕ್ರಿಕೆಟ್ನಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾಳೆ. ಗ್ರೇಟ್ ಬ್ರಿಟನ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಅಂತಾರಾಷ್ಟ್ರೀಯ ಅಂಧರ ಕ್ರಿಕೆಟ್ನಲ್ಲಿ ಚಿನ್ನದ ಪದಕ ಪಡೆದಿದ್ದಾಳೆ.
ಅಂಧತ್ವವನ್ನು ಸವಾಲಾಗಿ ಸ್ವೀಕರಿಸಿದ ಗಂಗವ್ವ ಅಂಧರ ಮಹಿಳಾ ಇಂಡಿಯನ್ ಕ್ರಿಕೆಟ್ ಟೀಂನ ಭರವಸೆಯ ಆಟಗಾರ್ತಿಯಾಗಿದ್ದಾಳೆ. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ IBSA world game 2023ರಲ್ಲಿ ಭಾರತ ಅಂಧರ ಮಹಿಳಾ ಕ್ರಿಕೆಟ್ ತಂಡ ಚಿನ್ನದ ಪದಕ ಪಡೆದಿದೆ. ಭಾರತ, ಆಸ್ಟ್ರೇಲಿಯಾ, ಗ್ರೇಟ್ ಬ್ರೀಟನ್ ದೇಶಗಳು ಭಾಗವಹಿಸಿದ್ದ ಟೂರ್ನಿಯ ಲೀಗ್ ಮ್ಯಾಚ್ನಲ್ಲಿ ಶತಕ ಸಿಡಿಸಿ ಟೀಂ ಇಂಡಿಯಾಕ್ಕೆ ಗಂಗವ್ವ ಜಯ ತಂದು ಕೊಟ್ಟಿದ್ದಳು.
ಈ ಮಹಿಳಾ ಅಂಧರ ಕ್ರಿಕೆಟ್ ಟೀಂನಲ್ಲಿ ಕರ್ನಾಟಕದ ಮೂವರು ಮಹಿಳಾ ಆಟಗಾರ್ತಿಯರಿರುವುದು ಹೆಮ್ಮೆಯ ವಿಚಾರ. ಹಾವೇರಿ ಜಿಲ್ಲೆ ಗಂಗವ್ವ ಸೇರಿ ಚಿತ್ರದುರ್ಗದ ವರ್ಷಾ, ತುಮಕೂರಿನ ದೀಪಿಕಾ ಟಿಸಿ ಕೂಡ ತಂಡದಲ್ಲಿದ್ದರು. ಆದರೆ, ದೇಶದ ಪರ ಆಡಿ ಚಿನ್ನ ಗೆದ್ದುಕೊಂಡು ಬಂದಿದ್ದರು ಅಂಧರಿಗೆ ರಾಜ್ಯ ಸರ್ಕಾರ ಸೂಕ್ತ ಪ್ರೋತ್ಸಾಹ ನೀಡುತ್ತಿಲ್ಲ ಎನ್ನುವುದು ಗಂಗವ್ವನ ಬೇಸರ.
ಬೆಂಗಳೂರಿನ ಸಮರ್ಥನಂ ಸಂಸ್ಥೆಯಲ್ಲಿ ಕ್ರಿಕೆಟ್ ತರಬೇತಿ ಪಡೆದು ಬ್ರೆಡ್ ಇಂಡಿಯಾ ವೊಮೆನ್ ಕ್ರಿಕೆಟ್ ಟೀಮ್ನಲ್ಲಿ ವೈಸ್ ಕ್ಯಾಪ್ಟನ್ ಆಗಿ ಗಂಗವ್ವ ಕ್ರಿಕೆಟ್ ಆಡಿದ್ದಾಳೆ. ಇಂತಹ ಕ್ರಿಕೆಟ್ ಆಟಗಾರ್ತಿ ಶಿಶುನಾಳ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾಳೆ. ಗಂಗಮ್ಮ ಗ್ರಾಮದ ಮಕ್ಕಳೊಂದಿಗೆ ರಸ್ತೆಯಲ್ಲೇ ಪ್ರತಿದಿನ ಪ್ರ್ಯಾಕ್ಟೀಸ್ ಮಾಡುತ್ತಿದ್ದಾಳೆ.
ಅಂಧರ ಟೀಂನಲ್ಲಿದ್ದ ಬೇರೆ ರಾಜ್ಯಗಳ ಯುವತಿಯರಿಗೆ ಅಲ್ಲಿಯ ರಾಜ್ಯ ಸರ್ಕಾರಗಳು ಬಹುಮಾನ ಘೋಷಿಸಿವೆ. ಓಡಿಸ್ಸಾ ಸರ್ಕಾರ ಮಹಿಳಾ ಅಂಧರ ಕ್ರಿಕೆಟ್ನಲ್ಲಿ ಭಾಗವಹಿಸಿದ್ದ ನಾಲ್ಕು ಆಟಗಾರ್ತಿಯರಿಗೆ ತಲಾ 20 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಿದ್ದಲದ್ದೆ ಸನ್ಮಾನ ಕೂಡ ಮಾಡಿದೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಈ ಆಟಗಾರರ ಕಡೆ ನೋಡುತ್ತಿಲ್ಲ ಎನ್ನುವುದು ಬೇಸರದ ಸಂಗತಿ..
ಅಂಧತ್ವವನ್ನು ಸವಾಲಾಗಿ ಸ್ವೀಕರಿಸಿದ ಗಂಗವ್ವ ಅಂಧರ ಮಹಿಳಾ ಇಂಡಿಯನ್ ಕ್ರಿಕೆಟ್ ಟೀಂನ ಭರವಸೆಯ ಆಟಗಾರ್ತಿಯಾಗಿದ್ದಾಳೆ. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ IBSA world game 2023ರಲ್ಲಿ ಭಾರತ ಅಂಧರ ಮಹಿಳಾ ಕ್ರಿಕೆಟ್ ತಂಡ ಚಿನ್ನದ ಪದಕ ಪಡೆದಿದೆ. ಭಾರತ, ಆಸ್ಟ್ರೇಲಿಯಾ, ಗ್ರೇಟ್ ಬ್ರೀಟನ್ ದೇಶಗಳು ಭಾಗವಹಿಸಿದ್ದ ಟೂರ್ನಿಯ ಲೀಗ್ ಮ್ಯಾಚ್ನಲ್ಲಿ ಶತಕ ಸಿಡಿಸಿ ಟೀಂ ಇಂಡಿಯಾಕ್ಕೆ ಗಂಗವ್ವ ಜಯ ತಂದು ಕೊಟ್ಟಿದ್ದಳು.
ಈ ಮಹಿಳಾ ಅಂಧರ ಕ್ರಿಕೆಟ್ ಟೀಂನಲ್ಲಿ ಕರ್ನಾಟಕದ ಮೂವರು ಮಹಿಳಾ ಆಟಗಾರ್ತಿಯರಿರುವುದು ಹೆಮ್ಮೆಯ ವಿಚಾರ. ಹಾವೇರಿ ಜಿಲ್ಲೆ ಗಂಗವ್ವ ಸೇರಿ ಚಿತ್ರದುರ್ಗದ ವರ್ಷಾ, ತುಮಕೂರಿನ ದೀಪಿಕಾ ಟಿಸಿ ಕೂಡ ತಂಡದಲ್ಲಿದ್ದರು. ಆದರೆ, ದೇಶದ ಪರ ಆಡಿ ಚಿನ್ನ ಗೆದ್ದುಕೊಂಡು ಬಂದಿದ್ದರು ಅಂಧರಿಗೆ ರಾಜ್ಯ ಸರ್ಕಾರ ಸೂಕ್ತ ಪ್ರೋತ್ಸಾಹ ನೀಡುತ್ತಿಲ್ಲ ಎನ್ನುವುದು ಗಂಗವ್ವನ ಬೇಸರ.
ಬೆಂಗಳೂರಿನ ಸಮರ್ಥನಂ ಸಂಸ್ಥೆಯಲ್ಲಿ ಕ್ರಿಕೆಟ್ ತರಬೇತಿ ಪಡೆದು ಬ್ರೆಡ್ ಇಂಡಿಯಾ ವೊಮೆನ್ ಕ್ರಿಕೆಟ್ ಟೀಮ್ನಲ್ಲಿ ವೈಸ್ ಕ್ಯಾಪ್ಟನ್ ಆಗಿ ಗಂಗವ್ವ ಕ್ರಿಕೆಟ್ ಆಡಿದ್ದಾಳೆ. ಇಂತಹ ಕ್ರಿಕೆಟ್ ಆಟಗಾರ್ತಿ ಶಿಶುನಾಳ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾಳೆ. ಗಂಗಮ್ಮ ಗ್ರಾಮದ ಮಕ್ಕಳೊಂದಿಗೆ ರಸ್ತೆಯಲ್ಲೇ ಪ್ರತಿದಿನ ಪ್ರ್ಯಾಕ್ಟೀಸ್ ಮಾಡುತ್ತಿದ್ದಾಳೆ.
ಅಂಧರ ಟೀಂನಲ್ಲಿದ್ದ ಬೇರೆ ರಾಜ್ಯಗಳ ಯುವತಿಯರಿಗೆ ಅಲ್ಲಿಯ ರಾಜ್ಯ ಸರ್ಕಾರಗಳು ಬಹುಮಾನ ಘೋಷಿಸಿವೆ. ಓಡಿಸ್ಸಾ ಸರ್ಕಾರ ಮಹಿಳಾ ಅಂಧರ ಕ್ರಿಕೆಟ್ನಲ್ಲಿ ಭಾಗವಹಿಸಿದ್ದ ನಾಲ್ಕು ಆಟಗಾರ್ತಿಯರಿಗೆ ತಲಾ 20 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಿದ್ದಲದ್ದೆ ಸನ್ಮಾನ ಕೂಡ ಮಾಡಿದೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಈ ಆಟಗಾರರ ಕಡೆ ನೋಡುತ್ತಿಲ್ಲ ಎನ್ನುವುದು ಬೇಸರದ ಸಂಗತಿ..