'ಮರಿ ಕಲ್ಯಾಣ' ಹಾವೇರಿ, ಸಿಂದಗಿ ಮಠದಲ್ಲಿ ವಟುಗಳಿಂದ ಭಕ್ತರಿಗೆ ದಾಸೋಹ
1083 views
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿಹಾವೇರಿ: ವೀರಶೈವ ಪರಂಪರೆಯಲ್ಲಿ ಸ್ವಾಮೀಜಿಗಳನ್ನು ಮನೆಗೆ ಕರೆದು ಪ್ರಸಾದ ನೀಡುವುದು ಸಾಮಾನ್ಯ. ಆದರೆ ಸ್ವಾಮೀಜಿಗಳೇ ಭಕ್ತರನ್ನು ಮಠಕ್ಕೆ ಕರೆದು ಪ್ರಸಾದ ನೀಡುವುದು ವಿರಳ. ಆದರೆ ಈ ರೀತಿಯ ಪರಂಪರೆಯೊಂದು ಹಾವೇರಿಯ ಸಿಂದಗಿ ಮಠದಲ್ಲಿದೆ. ಸಿಂದಗಿಮಠದ ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳ ಸ್ಮರಣೋತ್ಸವದ ದಿನಗಳ ನಂತರ ಮಠದಲ್ಲಿ 'ಊರೂಟ' ಎಂಬ ಪದ್ದತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನ ಮಠದ ವಟುಗಳು ಮನೆಗೆ ಮನೆಗೆ ತೆರಳಿ ಭಕ್ತರನ್ನು ಊರೂಟಕ್ಕೆ ಬರುವಂತೆ ಅಹ್ವಾನಿಸುತ್ತಾರೆ. ಈ ಸಮಯದಲ್ಲಿ ಸಿಂದಗಿ ಶಾಂತವಿರೇಶ್ವರರ ಗದ್ದುಗೆಯನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತೆ. ವಿದ್ಯುತ್ ದೀಪಗಳಲ್ಲಿ ಮಠವನ್ನು ಅಲಂಕಾರ ಮಾಡಲಾಗಿರುತ್ತದೆ. ಭಕ್ತರು ಸಿಂದಗಿ ಶಾಂತವಿರೇಶ್ವರರ ಗದ್ದುಗೆ ದರ್ಶನ ನಂತರ ಪ್ರಸಾದ ಸ್ವೀಕರಿಸುತ್ತಾರೆ.
ಮಠಕ್ಕೆ ಐವತ್ತು ಸಾವಿರಕ್ಕೂ ಅಧಿಕ ಭಕ್ತರು ಬಂದು ಪ್ರಸಾದ ಸೇವಿಸಿಸುತ್ತಾರೆ. ಮಠಕ್ಕೆ ಬರುವ ಭಕ್ತರನ್ನು ಮಠದ ವಟುಗಳೇ ಸ್ವಾಗತಿಸುತ್ತಾರೆ. ಮಠದ ವಟುಗಳು ತಯಾರಿಸಿದ ಭೋಜನವನ್ನು ಭಕ್ತರಿಗೆ ವಟುಗಳೇ ಬಡಿಸುತ್ತಾರೆ. ಮಠದಲ್ಲಿ ಈ ಹಿಂದೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಹ ಬರುತ್ತಾರೆ. ಎಲ್ಲ ವಟುಗಳು ಸೇರಿ ಈ ದಿನ ಮಠಕ್ಕೆ ಬರುವ ಭಕ್ತರಲ್ಲಿ ದೇವರನ್ನು ಕಾಣುತ್ತಾರೆ. ಮಠಕ್ಕೆ ಪ್ರಸಾದಕ್ಕೆ ಬರುವ ಭಕ್ತರ ತಟ್ಟೆಯನ್ನು ಸಹ ವಟುಗಳೇ ತೊಳೆಯುತ್ತಾರೆ. ಈ ಪರಂಪರೆಯನ್ನು ಸಿಂದಗಿಮಠ ಲಿಂಗೈಕ್ಯ ಶಾಂತವೀರೇಶ್ವರಶ್ರೀಗಳು ಆಚರಣೆಗೆ ತಂದಿದ್ದರಂತೆ. ಅವರು ಲಿಂಗೈಕ್ಯರಾದ ನಂತರ ಮಠದಲ್ಲಿ ವಟುಗಳು ಆ ಪದ್ದತಿಯನ್ನ ಆಚರಿಸಿಕೊಂಡು ಬರುತ್ತಿದ್ದಾರೆ. ಅದೇ ಪರಂಪರೆಯನ್ನು ಅವರ ನಂತರ ಸಹ ಮಠದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಮಠದಲ್ಲಿ ಈ ದಿನ ಉತ್ತರಕರ್ನಾಟಕದ ಕಡಕ್ ರೊಟ್ಟಿ, ಕರಿಂಡಿ ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಭಕ್ತರಿಗೆ ಉಣಬಡಿಸಲಾಗುತ್ತದೆ.
ಮಠದಲ್ಲಿ ಕಜ್ಜಾಯ ಪರಂಪರೆ ಸಹ ಇದೆ. ಊರೂಟ ಇರುವಾಗ ಕೆಲ ಗ್ರಾಮಗಳ ಭಕ್ತರು ಕಡಕ್ರೊಟ್ಟಿ ಸೇರಿದಂತೆ ಸಿಹಿಪದಾರ್ಥಗಳನ್ನು ಮಠಕ್ಕೆ ನೀಡುತ್ತಾರೆ. ಒಂದೇ ದಿನ ಐವತ್ತು ಸಾವಿರ ಜನರಿಗೆ ಎಲ್ಲಿಯೂ ಯಾವುದೇ ರೀತಿಯ ತೊಂದರೆಯಾಗದಂತೆ ಮಠದ ವಟುಗಳು ನೋಡಿಕೊಳ್ಳುತ್ತಾರೆ. ಪ್ರಸ್ತುತ ವರ್ಷ ಸಹಸ್ರಾರುಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ವಟುಗಳು ಉಣಬಡಿಸುವ ಪ್ರಸಾದ ಸ್ವೀಕರಿಸಿದರು. ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಊರೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಹಾವೇರಿಗೆ ಮರಿ ಕಲ್ಯಾಣ ಅಥವಾ ಎರಡನೇಯ ಕಲ್ಯಾಣ ಎಂಬ ಖ್ಯಾತಿ ಪಡೆದಿದೆ. ಕಲ್ಯಾಣದಲ್ಲಿರುವ ಮಠಗಳಿಗಿಂತ ಕೇವಲ ಒಂದು ಮಠ ಕಡಿಮೆ ಇರುವ ಕಾರಣ ಹಾವೇರಿಗೆ ಮರಿಕಲ್ಯಾಣ ಅಥವಾ ಎರಡನೇಯ ಕಲ್ಯಾಣ ಎಂಬ ಹೆಸರು ಬಂದಿದೆ.
ಮಠಕ್ಕೆ ಐವತ್ತು ಸಾವಿರಕ್ಕೂ ಅಧಿಕ ಭಕ್ತರು ಬಂದು ಪ್ರಸಾದ ಸೇವಿಸಿಸುತ್ತಾರೆ. ಮಠಕ್ಕೆ ಬರುವ ಭಕ್ತರನ್ನು ಮಠದ ವಟುಗಳೇ ಸ್ವಾಗತಿಸುತ್ತಾರೆ. ಮಠದ ವಟುಗಳು ತಯಾರಿಸಿದ ಭೋಜನವನ್ನು ಭಕ್ತರಿಗೆ ವಟುಗಳೇ ಬಡಿಸುತ್ತಾರೆ. ಮಠದಲ್ಲಿ ಈ ಹಿಂದೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಹ ಬರುತ್ತಾರೆ. ಎಲ್ಲ ವಟುಗಳು ಸೇರಿ ಈ ದಿನ ಮಠಕ್ಕೆ ಬರುವ ಭಕ್ತರಲ್ಲಿ ದೇವರನ್ನು ಕಾಣುತ್ತಾರೆ. ಮಠಕ್ಕೆ ಪ್ರಸಾದಕ್ಕೆ ಬರುವ ಭಕ್ತರ ತಟ್ಟೆಯನ್ನು ಸಹ ವಟುಗಳೇ ತೊಳೆಯುತ್ತಾರೆ. ಈ ಪರಂಪರೆಯನ್ನು ಸಿಂದಗಿಮಠ ಲಿಂಗೈಕ್ಯ ಶಾಂತವೀರೇಶ್ವರಶ್ರೀಗಳು ಆಚರಣೆಗೆ ತಂದಿದ್ದರಂತೆ. ಅವರು ಲಿಂಗೈಕ್ಯರಾದ ನಂತರ ಮಠದಲ್ಲಿ ವಟುಗಳು ಆ ಪದ್ದತಿಯನ್ನ ಆಚರಿಸಿಕೊಂಡು ಬರುತ್ತಿದ್ದಾರೆ. ಅದೇ ಪರಂಪರೆಯನ್ನು ಅವರ ನಂತರ ಸಹ ಮಠದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಮಠದಲ್ಲಿ ಈ ದಿನ ಉತ್ತರಕರ್ನಾಟಕದ ಕಡಕ್ ರೊಟ್ಟಿ, ಕರಿಂಡಿ ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಭಕ್ತರಿಗೆ ಉಣಬಡಿಸಲಾಗುತ್ತದೆ.
ಮಠದಲ್ಲಿ ಕಜ್ಜಾಯ ಪರಂಪರೆ ಸಹ ಇದೆ. ಊರೂಟ ಇರುವಾಗ ಕೆಲ ಗ್ರಾಮಗಳ ಭಕ್ತರು ಕಡಕ್ರೊಟ್ಟಿ ಸೇರಿದಂತೆ ಸಿಹಿಪದಾರ್ಥಗಳನ್ನು ಮಠಕ್ಕೆ ನೀಡುತ್ತಾರೆ. ಒಂದೇ ದಿನ ಐವತ್ತು ಸಾವಿರ ಜನರಿಗೆ ಎಲ್ಲಿಯೂ ಯಾವುದೇ ರೀತಿಯ ತೊಂದರೆಯಾಗದಂತೆ ಮಠದ ವಟುಗಳು ನೋಡಿಕೊಳ್ಳುತ್ತಾರೆ. ಪ್ರಸ್ತುತ ವರ್ಷ ಸಹಸ್ರಾರುಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ವಟುಗಳು ಉಣಬಡಿಸುವ ಪ್ರಸಾದ ಸ್ವೀಕರಿಸಿದರು. ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಊರೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಹಾವೇರಿಗೆ ಮರಿ ಕಲ್ಯಾಣ ಅಥವಾ ಎರಡನೇಯ ಕಲ್ಯಾಣ ಎಂಬ ಖ್ಯಾತಿ ಪಡೆದಿದೆ. ಕಲ್ಯಾಣದಲ್ಲಿರುವ ಮಠಗಳಿಗಿಂತ ಕೇವಲ ಒಂದು ಮಠ ಕಡಿಮೆ ಇರುವ ಕಾರಣ ಹಾವೇರಿಗೆ ಮರಿಕಲ್ಯಾಣ ಅಥವಾ ಎರಡನೇಯ ಕಲ್ಯಾಣ ಎಂಬ ಹೆಸರು ಬಂದಿದೆ.