ಸರ್, ನಮ್ಮ ಪರಿಸ್ಥಿತಿ ಅರ್ಥಮಾಡಿಕೊಳ್ಳಿ ಎಂದು ಕಾಲಿಗೆ ಬಿದ್ದ ಶಿಕ್ಷಕ!
1002 views
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿಖಾಸಗಿ ಶಿಕ್ಷಣ ಸಂಸ್ಥೆಗಳು ನೇಮಕ ಮಾಡಿಕೊಂಡ ಶಿಕ್ಷಕರ ಹುದ್ದೆಗಳನ್ನು ಲೋಪದೋಷ ಹುಡುಕದೇ ಅನುಮೋದಿಸುವಂತೆ ಆಗ್ರಹಿಸಿ, ಧಾರವಾಡದಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ತಮ್ಮ ಹುದ್ದೆಗಳನ್ನು ಅನುಮೋದಿಸುವಂತೆ ಶಿಕ್ಷನೋರ್ವ ಜಿಲ್ಲಾ ಅಪರ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ್ ಕಾಲಿಗೆ ಬಿದ್ದು ಕಣ್ಣೀರು ಹಾಕಿರುವ ಘಟನೆಯೂ ನಡೆದಿದೆ.ಪ್ರತಿಭಟನೆ ವೇಳೆ ಹಾವೇರಿ ಜಿಲ್ಲೆ ಹಿರೇಕೆರೂರನಿಂದ ಬಂದಿದ್ದ ಶಿಕ್ಷಕ, ತಮ್ಮ ಅಳಲನ್ನು ತೋಡಿಕೊಳ್ಳುತ್ತಾ, ಅಪರ ಆಯುಕ್ತರ ಕಾಲಿಗೆ ಬಿದ್ದರು. ಅದರಂತೆ ಕಾರವಾರದಿಂದ ಬಂದಿದ್ದ ಶಿಕ್ಷಕಿ ಕೂಡ ದಯವಿಟ್ಟು ನಮ್ಮ ಸಮಸ್ಯೆ ಆಲಿಸಿ ಪರಿಹಾರ ನೀಡಿ ಎಂದು ಕಣ್ಣೀರಿಟ್ಟರು.