ಸಾಲ ಮಾಡಿ ತುಪ್ಪ ತಿಂದ್ರೆ, ಸಾಲ ತಿರಿಸೋದು ಯಾರು? ಸಿಎಂ ಸಿದ್ದರಾಮಯ್ಯ ಸರಕಾರಕ್ಕೆ ಪಿ ರಾಜೀವ್ ಪ್ರಶ್ನೆ
1141 views
ಕಲಬುರಗಿ ವಿಡಿಯೋಗಳಿಗೆ ಚಂದಾದಾರರಾಗಿಕಲಬುರಗಿ: ಸಾಲ ಮಾಡಿ ತುಪ್ಪ ತಿಂದ್ರೆ, ಸಾಲ ತಿರಿಸೋದು ಯಾರು? ಎಂದು ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಜಿ ಶಾಸಕ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ವ್ಯಂಗ್ಯವಾಡಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜೀವ್, ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತಿದ್ದಾರೆ. ಇವರ ಸರಕಾರದಲ್ಲಿ ಅಧಿಕಾರಿಗಳಿಗೆ ತಿಂಗಳ ಮೊದಲ ದಿನವೇ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನು ಪೂರ್ಣಗೊಳಿಸಲು ಇವರಿಂದ ಸಾಧ್ಯವಾಗುತ್ತಿಲ್ಲ ಎಂದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳು ಬಿಜೆಪಿಯ ಪಾಲಾಗೊದು ಪಕ್ಕಾ. ಕಾಂಗ್ರೆಸ್ನವರ ಆಟ ಮುಂದೆ ನಡೆಯೊದಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.
ಈ ವೇಳ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅರಾಜಕತೆಯನ್ನು ಪ್ರತಿಪಾದಿಸುತ್ತಿದೆ. ಭಾರತ ಇಬ್ಬಾಗ ಆಗೋಕೆ ಕಾರಣವೆ ಕಾಂಗ್ರೆಸ್. ಅದೇ ನೀತಿ ಇಂದಿಗೂ ಮುಂದುವರಿದಿದೆ. 'ಕೈ ಮುಗಿದು ಒಳಗೆ ಬಾ' ಇದು ಕುವೆಂಪು ನೀಡಿದ ಸಂದೇಶ. ಮಾತು ಮಾತಿಗೂ ಕುವೆಂಪು ಅವರನ್ನು ಬಳಿಸಿಕೊಳ್ಳುವ ಕಾಂಗ್ರೆಸ್, ಅವರ ವಿಚಾರಧಾರೆಗೆ ಅವಮಾನ ಮಾಡಿದೆ. ಸರ್ಕಾರ ತಕ್ಷಣ ತಮ್ಮ ಆದೇಶ ಹಿಂಪಡೆಯಬೇಕು. ಇಲ್ಲವಾದರೆ ಪೋಷಕರು, ರಾಜ್ಯದ ಜನ ಛಿ ಥೂ ಎನ್ನುತ್ತಾರೆ ಎಂದರು.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜೀವ್, ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತಿದ್ದಾರೆ. ಇವರ ಸರಕಾರದಲ್ಲಿ ಅಧಿಕಾರಿಗಳಿಗೆ ತಿಂಗಳ ಮೊದಲ ದಿನವೇ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನು ಪೂರ್ಣಗೊಳಿಸಲು ಇವರಿಂದ ಸಾಧ್ಯವಾಗುತ್ತಿಲ್ಲ ಎಂದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳು ಬಿಜೆಪಿಯ ಪಾಲಾಗೊದು ಪಕ್ಕಾ. ಕಾಂಗ್ರೆಸ್ನವರ ಆಟ ಮುಂದೆ ನಡೆಯೊದಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.
ಈ ವೇಳ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅರಾಜಕತೆಯನ್ನು ಪ್ರತಿಪಾದಿಸುತ್ತಿದೆ. ಭಾರತ ಇಬ್ಬಾಗ ಆಗೋಕೆ ಕಾರಣವೆ ಕಾಂಗ್ರೆಸ್. ಅದೇ ನೀತಿ ಇಂದಿಗೂ ಮುಂದುವರಿದಿದೆ. 'ಕೈ ಮುಗಿದು ಒಳಗೆ ಬಾ' ಇದು ಕುವೆಂಪು ನೀಡಿದ ಸಂದೇಶ. ಮಾತು ಮಾತಿಗೂ ಕುವೆಂಪು ಅವರನ್ನು ಬಳಿಸಿಕೊಳ್ಳುವ ಕಾಂಗ್ರೆಸ್, ಅವರ ವಿಚಾರಧಾರೆಗೆ ಅವಮಾನ ಮಾಡಿದೆ. ಸರ್ಕಾರ ತಕ್ಷಣ ತಮ್ಮ ಆದೇಶ ಹಿಂಪಡೆಯಬೇಕು. ಇಲ್ಲವಾದರೆ ಪೋಷಕರು, ರಾಜ್ಯದ ಜನ ಛಿ ಥೂ ಎನ್ನುತ್ತಾರೆ ಎಂದರು.