ಸರ್ಕಾರಿ ಶಾಲಾ ಮಕ್ಕಳ ಕನಸು ನನಸು ಮಾಡಿದ ಶಿಕ್ಷಕ ; ವಿಮಾನದಲ್ಲಿ ಮಕ್ಕಳ ಪ್ರವಾಸ..!
ಕಲಬುರಗಿ ವಿಡಿಯೋಗಳಿಗೆ ಚಂದಾದಾರರಾಗಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಶಿಕ್ಷಕರು ಪ್ರವಾಸಕ್ಕೆಂದು ಬಸ್ ಗಳಲ್ಲಿ ಕರೆದುಕೊಂಡು ಹೋಗುವುದು ಸಾಮಾನ್ಯ, ಆದರೆ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಮಕ್ಕಳಿಂದ ಸ್ವಲ್ಪ ಹಣ ಸಂಗ್ರಹಿಸಿ, ತಮ್ಮ ಕೈಯಿಂದ ಹೆಚ್ಚಿನ ಹಣವನ್ನು ಹಾಕಿ, ತಮ್ಮ ಸರಕಾರಿ ಶಾಲೆಯ ಮಕ್ಕಳನ್ನು ವಿಮಾನದಲ್ಲಿ ಮುಂಬೈ, ದೆಹಲಿ ಪ್ರವಾಸ ಮಾಡಿಸಿದ್ದಾರೆ.
ಹೌದು.. ಹೀಗೆ ವಿಮಾನ ನಿಲ್ದಾಣದ ಟ್ರಾಲಿಗಳಲ್ಲಿ ತಮ್ಮ ಬ್ಯಾಗ್ಗಳನ್ನು ಇಟ್ಟುಕೊಂಡು ಕುತೂಹಲದಿಂದ ವಿಮಾನ ನಿಲ್ದಾಣದಲ್ಲಿ ಹೋಗುತ್ತಿರುವ ಮಕ್ಕಳು ಸರಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳು. ಈ ಶಾಲೆ ಇರುವುದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿ ಗ್ರಾಮದಲ್ಲಿ, ಇದು ಕನ್ನಡ ಮಾಧ್ಯಮ ಶಾಲೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕರ್ನಾಟಕದ ಗಡಿ ಗ್ರಾಮವಾಗಿದೆ. ಈ ಶಾಲೆಗೆ ಕಳೆದ ಒಂದೂವರೆ ವರ್ಷದ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರಾಗಿ ಬಂದಿರುವ ಮಹಾಂತೇಶ್ವರ ಕಟ್ಟಿಮನಿ ಅವರು, ಕಳೆದ ವರ್ಷ ಶಾಲೆಯ ಮಕ್ಕಳನ್ನು ರೈಲು ಮೂಲಕ ಮುಂಬೈ ಹಾಗೂ ಮುಂಬೈನಿಂದ ವಿಮಾನದ ಮೂಲಕ ಬೆಂಗಳೂರು ಪ್ರವಾಸ ಮಾಡಿಸಿದ್ದರು, ಈ ಬಾರಿಯೂ ರೈಲು ಮೂಲಕ ಮುಂಬೈ, ನಂತರ ಮುಂಬೈನಿಂದ ದೆಹಲಿಗೆ ಮಕ್ಕಳನ್ನು ವಿಮಾನ ಪ್ರವಾಸ ಮಾಡಿಸಿ ದೆಹಲಿ, ಸಂಸತ ಭವನ, ರಾಷ್ಟ್ರಪತಿ ಭವನ ಹಾಗೂ ಕೆಂಪುಕೋಟೆ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ತೋರಿಸಿಕೊಂಡು ಬಂದಿದ್ದಾರೆ.
ಈ ಶಾಲೆಯ ಮುಖ್ಯ ಗುರುಗಳಾದ ಮಹಾಂತೇಶ್ವರ ಕಟ್ಟಿಮನಿ ಅವರು, ಈ ಹಿಂದೆ ಕಾರ್ಯನಿರ್ವಹಿಸಿದ ಮೂರು ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೂ ವಿಮಾನದಲ್ಲಿ ಕರೆದುಕೊಂಡು ಹೋಗಿ ಪ್ರವಾಸ ಮಾಡಿಸಿದ್ದಾರೆ. ಅದೆ ರೀತಿ ಕಳೆದ ಒಂದೂವರೆ ವರ್ಷದ ಹಿಂದೆ ಅವರು ಮೈಂದರ್ಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೂ ಎರಡು ಬಾರಿ ವಿಮಾನ ಪ್ರವಾಸ ಮಾಡಿಸಿದ್ದಾರೆ. ಅಲ್ಪಸ್ವಲ್ಪ ಹಣವನ್ನು ಮಕ್ಕಳಿಂದ ಸಂಗ್ರಹಿಸಿ, ಉಳಿದ ಹಣವನ್ನು ತಮ್ಮ ಕೈಯಿಂದ ಖರ್ಚು ಮಾಡುವ ಮೂಲಕ ಬಡ ಮಕ್ಕಳ ವಿಮಾನ ಏರುವ ಕನಸನ್ನು ನನಸು ಮಾಡಿದ್ದಾರೆ.
ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳು ವಿಮಾನವೇರಿ ಪ್ರವಾಸ ಮಾಡುವುದು ನಿಜಕ್ಕೂ ಕನಸಿನ ಮಾತು, ಆದರೆ ಈ ಮಾತನ್ನು ಸಳ್ಳು ಮಾಡಿ ಶಾಲೆಯ ಪ್ರತಿಭಾನ್ವಿತ ಬಡ ಮಕ್ಕಳಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿ ಪ್ರವಾಸ ಮಾಡಿಸಿರುವ ಶಾಲೆಯ ಮುಖ್ಯೋಪಾಧ್ಯಾಯರಾದ ಮಹಾಂತೇಶ್ವರ ಕಟ್ಟಿಮನಿ ಅವರ ಕಾರ್ಯವನ್ನು ನಿಜಕ್ಕೂ ಮೆಚ್ಚಲೇಬೇಕು. ತಮ್ಮ ಮಕ್ಕಳು ವಿಮಾನದಲ್ಲಿ ಹೋಗಿ ಬಂದಿದ್ದಕ್ಕೆ ಪೋಷಕರು ಕೂಡ ಖುಷಿಯಾಗಿದ್ದಾರೆ.
ಹೌದು.. ಹೀಗೆ ವಿಮಾನ ನಿಲ್ದಾಣದ ಟ್ರಾಲಿಗಳಲ್ಲಿ ತಮ್ಮ ಬ್ಯಾಗ್ಗಳನ್ನು ಇಟ್ಟುಕೊಂಡು ಕುತೂಹಲದಿಂದ ವಿಮಾನ ನಿಲ್ದಾಣದಲ್ಲಿ ಹೋಗುತ್ತಿರುವ ಮಕ್ಕಳು ಸರಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳು. ಈ ಶಾಲೆ ಇರುವುದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿ ಗ್ರಾಮದಲ್ಲಿ, ಇದು ಕನ್ನಡ ಮಾಧ್ಯಮ ಶಾಲೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕರ್ನಾಟಕದ ಗಡಿ ಗ್ರಾಮವಾಗಿದೆ. ಈ ಶಾಲೆಗೆ ಕಳೆದ ಒಂದೂವರೆ ವರ್ಷದ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರಾಗಿ ಬಂದಿರುವ ಮಹಾಂತೇಶ್ವರ ಕಟ್ಟಿಮನಿ ಅವರು, ಕಳೆದ ವರ್ಷ ಶಾಲೆಯ ಮಕ್ಕಳನ್ನು ರೈಲು ಮೂಲಕ ಮುಂಬೈ ಹಾಗೂ ಮುಂಬೈನಿಂದ ವಿಮಾನದ ಮೂಲಕ ಬೆಂಗಳೂರು ಪ್ರವಾಸ ಮಾಡಿಸಿದ್ದರು, ಈ ಬಾರಿಯೂ ರೈಲು ಮೂಲಕ ಮುಂಬೈ, ನಂತರ ಮುಂಬೈನಿಂದ ದೆಹಲಿಗೆ ಮಕ್ಕಳನ್ನು ವಿಮಾನ ಪ್ರವಾಸ ಮಾಡಿಸಿ ದೆಹಲಿ, ಸಂಸತ ಭವನ, ರಾಷ್ಟ್ರಪತಿ ಭವನ ಹಾಗೂ ಕೆಂಪುಕೋಟೆ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ತೋರಿಸಿಕೊಂಡು ಬಂದಿದ್ದಾರೆ.
ಈ ಶಾಲೆಯ ಮುಖ್ಯ ಗುರುಗಳಾದ ಮಹಾಂತೇಶ್ವರ ಕಟ್ಟಿಮನಿ ಅವರು, ಈ ಹಿಂದೆ ಕಾರ್ಯನಿರ್ವಹಿಸಿದ ಮೂರು ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೂ ವಿಮಾನದಲ್ಲಿ ಕರೆದುಕೊಂಡು ಹೋಗಿ ಪ್ರವಾಸ ಮಾಡಿಸಿದ್ದಾರೆ. ಅದೆ ರೀತಿ ಕಳೆದ ಒಂದೂವರೆ ವರ್ಷದ ಹಿಂದೆ ಅವರು ಮೈಂದರ್ಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೂ ಎರಡು ಬಾರಿ ವಿಮಾನ ಪ್ರವಾಸ ಮಾಡಿಸಿದ್ದಾರೆ. ಅಲ್ಪಸ್ವಲ್ಪ ಹಣವನ್ನು ಮಕ್ಕಳಿಂದ ಸಂಗ್ರಹಿಸಿ, ಉಳಿದ ಹಣವನ್ನು ತಮ್ಮ ಕೈಯಿಂದ ಖರ್ಚು ಮಾಡುವ ಮೂಲಕ ಬಡ ಮಕ್ಕಳ ವಿಮಾನ ಏರುವ ಕನಸನ್ನು ನನಸು ಮಾಡಿದ್ದಾರೆ.
ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳು ವಿಮಾನವೇರಿ ಪ್ರವಾಸ ಮಾಡುವುದು ನಿಜಕ್ಕೂ ಕನಸಿನ ಮಾತು, ಆದರೆ ಈ ಮಾತನ್ನು ಸಳ್ಳು ಮಾಡಿ ಶಾಲೆಯ ಪ್ರತಿಭಾನ್ವಿತ ಬಡ ಮಕ್ಕಳಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿ ಪ್ರವಾಸ ಮಾಡಿಸಿರುವ ಶಾಲೆಯ ಮುಖ್ಯೋಪಾಧ್ಯಾಯರಾದ ಮಹಾಂತೇಶ್ವರ ಕಟ್ಟಿಮನಿ ಅವರ ಕಾರ್ಯವನ್ನು ನಿಜಕ್ಕೂ ಮೆಚ್ಚಲೇಬೇಕು. ತಮ್ಮ ಮಕ್ಕಳು ವಿಮಾನದಲ್ಲಿ ಹೋಗಿ ಬಂದಿದ್ದಕ್ಕೆ ಪೋಷಕರು ಕೂಡ ಖುಷಿಯಾಗಿದ್ದಾರೆ.