ಕಲಬುರಗಿ: ಟನ್ ಕಬ್ಬಿಗೆ 3000 ರೂ. ನಿಗದಿಗೆ ರೈತರ ಪಟ್ಟು, ಇನ್ನೂ ಬೆಲೆ ನಿಗದಿ ಮಾಡದ ಸಕ್ಕರೆ ಕಾರ್ಖಾನೆಗಳು
ಕಲಬುರಗಿ ವಿಡಿಯೋಗಳಿಗೆ ಚಂದಾದಾರರಾಗಿ
ಕಲಬುರಗಿ: ಕಬ್ಬು ಕಟಾವು, ಸಾಗಾಟ ಹೊರತುಪಡಿಸಿ ಟನ್ ಕಬ್ಬಿಗೆ ಮೂರು ಸಾವಿರ ರೂಪಾಯಿ ಬೆಲೆ ನೀಡಲೇಬೇಕು ಅಂತಾ ಕಬ್ಬು ಬೆಳೆಗಾರರು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ರಾಜ್ಯದ ಕಾರ್ಖಾನೆಗಳು ಟನ್ ಕಬ್ಬಿಗೆ ಮೂರು ಸಾವಿರ ದರ ನೀಡದಿದ್ದರೆ, ಅನ್ಯ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೀಡೋದಾಗಿ ಎಚ್ಚರಿಕೆ ನೀಡಿದ್ದಾರೆ.
ಹಗಲು ರಾತ್ರಿ ಎನ್ನದೆ ನೀರು ಗೊಬ್ಬರ ಕಟ್ಟಿ ವರ್ಷಪೂರ್ತಿ ಕಷ್ಟಪಟ್ಟು ರೈತರು ಕಬ್ಬು ಬೆಳೆದರೂ ಸೂಕ್ತ ಬೆಲೆ ಸಿಗದಿಯಾಗದೆ ಕಬ್ಬು ಬೆಳೆಗಾರರಿಗೆ ಪ್ರತಿವರ್ಷ ಅನ್ಯಾಯ ಆಗುತ್ತಲೆ ಇದೆ. ಸರ್ಕಾರ ಎಫ್ ಆರ್ ಪಿ ದರ ನೀಡಿದರೂ ಸಹ ಸಹ ಒಂದೊಂದು ಕಾರ್ಖಾನೆಗಳು ಒಂದೊಂದು ಬೆಲೆ ನೀಡುತ್ತಿವೆ. ದರ ಕಡಿಮೆ ನೀಡುವ ಜೊತೆಗೆ ಸಮಯಕ್ಕೆ ಸರಿಯಾಗಿ ಹಣ ನೀಡದೆ ಕೆಲ ಕಾರ್ಖಾನೆಗಳು ಸತಾಯಿಸುತ್ತಿವೆ. ಪ್ರತಿವರ್ಷ ಸಕ್ಕರೆ ಕಾರ್ಖಾನೆಗಳ ಮೋಸದಾಟ ಕಂಡಿರುವ ರೈತರು ಇದೀಗ ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಭಾಗದ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ ಮೂರು ಸಾವಿರ ನಿವ್ವಳ ನಮಗೆ ನೀಡದೆ ಹೋದರೆ ಮೂಲಾಜಿಲ್ಲದೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೀಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಈ ವರ್ಷ ರೈತರ ಕಬ್ಬು ನುರಿಸಲು ಸಕ್ಕರೆ ಕಾರ್ಖಾನೆಗಳು ಇನ್ನೇನು ಹದಿನೈದು ದಿನಗಳಲ್ಲಿ ಆರಂಭ ಆಗಬೇಕು. ಆದರೂ ಕೇಂದ್ರ ಸರ್ಕಾರ ಇನ್ನೂ ಕಬ್ಬಿಗೆ ಎಫ್ ಆರ್ ಪಿ ದರ ನೀಗದಿ ಮಾಡಿಲ್ಲ. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಸಮನ್ವಯ ಸಾಧಿಸಲು, ದರ ನಿಗದಿ ಮಾಡಲು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರುನ್ನುಮ್ ಇತ್ತೀಚೆಗೆ ಕರೆದಿರೋ ಸಭೆ ಕೂಡ ವಿಫಲವಾಗಿದೆ. ರೈತರು ಟನ್ ಕಬ್ಬಿಗೆ ಕಟಾವು, ಸಾಗಾಟ ಹೊರತುಪಡಿಸಿ ಮೂರು ಬೆಲೆಗೆ ಸಭೆಯಲ್ಲಿ ಬೇಡಿಕೆ ಇಟ್ಟಿದ್ದರು. ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ಮಾತ್ರ ಬೆಲೆ ನೀಡೋ ಬಗ್ಗೆ ಚಕಾರ ಎತ್ತಲಿಲ್ಲ. ಅಲ್ಲದೆ ಜಿಲ್ಲಾಧಿಕಾರಿ ಕೂಡ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಯಾವುದೇ ರೀತಿಯ ಸೂಚನೆ ನೀಡಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಹಗಲು ರಾತ್ರಿ ಎನ್ನದೆ ನೀರು ಗೊಬ್ಬರ ಕಟ್ಟಿ ವರ್ಷಪೂರ್ತಿ ಕಷ್ಟಪಟ್ಟು ರೈತರು ಕಬ್ಬು ಬೆಳೆದರೂ ಸೂಕ್ತ ಬೆಲೆ ಸಿಗದಿಯಾಗದೆ ಕಬ್ಬು ಬೆಳೆಗಾರರಿಗೆ ಪ್ರತಿವರ್ಷ ಅನ್ಯಾಯ ಆಗುತ್ತಲೆ ಇದೆ. ಸರ್ಕಾರ ಎಫ್ ಆರ್ ಪಿ ದರ ನೀಡಿದರೂ ಸಹ ಸಹ ಒಂದೊಂದು ಕಾರ್ಖಾನೆಗಳು ಒಂದೊಂದು ಬೆಲೆ ನೀಡುತ್ತಿವೆ. ದರ ಕಡಿಮೆ ನೀಡುವ ಜೊತೆಗೆ ಸಮಯಕ್ಕೆ ಸರಿಯಾಗಿ ಹಣ ನೀಡದೆ ಕೆಲ ಕಾರ್ಖಾನೆಗಳು ಸತಾಯಿಸುತ್ತಿವೆ. ಪ್ರತಿವರ್ಷ ಸಕ್ಕರೆ ಕಾರ್ಖಾನೆಗಳ ಮೋಸದಾಟ ಕಂಡಿರುವ ರೈತರು ಇದೀಗ ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಭಾಗದ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ ಮೂರು ಸಾವಿರ ನಿವ್ವಳ ನಮಗೆ ನೀಡದೆ ಹೋದರೆ ಮೂಲಾಜಿಲ್ಲದೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೀಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಈ ವರ್ಷ ರೈತರ ಕಬ್ಬು ನುರಿಸಲು ಸಕ್ಕರೆ ಕಾರ್ಖಾನೆಗಳು ಇನ್ನೇನು ಹದಿನೈದು ದಿನಗಳಲ್ಲಿ ಆರಂಭ ಆಗಬೇಕು. ಆದರೂ ಕೇಂದ್ರ ಸರ್ಕಾರ ಇನ್ನೂ ಕಬ್ಬಿಗೆ ಎಫ್ ಆರ್ ಪಿ ದರ ನೀಗದಿ ಮಾಡಿಲ್ಲ. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಸಮನ್ವಯ ಸಾಧಿಸಲು, ದರ ನಿಗದಿ ಮಾಡಲು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರುನ್ನುಮ್ ಇತ್ತೀಚೆಗೆ ಕರೆದಿರೋ ಸಭೆ ಕೂಡ ವಿಫಲವಾಗಿದೆ. ರೈತರು ಟನ್ ಕಬ್ಬಿಗೆ ಕಟಾವು, ಸಾಗಾಟ ಹೊರತುಪಡಿಸಿ ಮೂರು ಬೆಲೆಗೆ ಸಭೆಯಲ್ಲಿ ಬೇಡಿಕೆ ಇಟ್ಟಿದ್ದರು. ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ಮಾತ್ರ ಬೆಲೆ ನೀಡೋ ಬಗ್ಗೆ ಚಕಾರ ಎತ್ತಲಿಲ್ಲ. ಅಲ್ಲದೆ ಜಿಲ್ಲಾಧಿಕಾರಿ ಕೂಡ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಯಾವುದೇ ರೀತಿಯ ಸೂಚನೆ ನೀಡಿಲ್ಲ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.