ಶೀಘ್ರವೇ ಸಚಿವ ಸಂಪುಟ ವಿಸ್ತರಣೆ; ಕಲ್ಯಾಣ ಕರ್ನಾಟಕಕ್ಕೆ ನಾಲ್ಕೈದು ಸಚಿವ ಸ್ಥಾನ ಸಿಗಲಿದೆ: ಮಲ್ಲಿಕಾರ್ಜುನ ಖರ್ಗೆ
1050 views
ಕಲಬುರಗಿ ವಿಡಿಯೋಗಳಿಗೆ ಚಂದಾದಾರರಾಗಿಕಲಬುರಗಿ: ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಭಾಗಕ್ಕೆ ತಲಾ ನಾಲ್ಕೈದು ಮಂತ್ರಿ ಸ್ಥಾನ ಸಿಗಲಿವೆ ಅಂತ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಗೆಲುವು ಕರ್ನಾಟಕ ಜನತೆಯ ಗೆಲುವು, ಈ ಭ್ರಷ್ಟ ಸರ್ಕಾರ ತೆಗೆದು ಹಾಕಲು ಜನ ನಿರ್ಧಾರ ಕೈಗೊಂಡಿದ್ದರು. ಅದರ ಫಲ ನಮಗೆ ಬಹುಮತ ಸಿಕ್ಕಿದೆ. ಚುನಾವಣೆ ವೇಳೆ ರಾಜ್ಯದ ಜನತೆಗೆ ನೀಡಿರುವ ಭರವಸೆ ಈಡೇರಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ. ಪ್ರಣಾಳಿಕೆಯ ಗ್ಯಾರಂಟಿ ಘೋಷಣೆಗಾಗಿ ಸಿಎಂ ಡಿಸಿಎಂ ಹುದ್ದೆ ಜೊತೆಗೆ ಕನಿಷ್ಠ ಸಂಖ್ಯೆಯ ಮಂತ್ರಿಗಳ ಸ್ಥಾನ ಅಗತ್ಯವಿತ್ತು. ಹೀಗಾಗಿ ಕೇಲವರು ಪ್ರಮಾಣ ವಚನ ಸ್ವಿಕರಿಸಿದ್ದಾರೆ.
ಇನ್ನು ಕರ್ನಾಟಕ ಫಲಿತಾಂಶ ಬರುವ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀಳುವ ವಿಷಯವಾಗಿ ಮಾತನಾಡಿದ ಖರ್ಗೆ, ರಾಜ್ಯದ ಜನರ ಈ ತೀರ್ಮಾನ ನೋಡಿದ್ರೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲೂ ನಮಗೆ ಬಹುಮತ ಬರುತ್ತೆ. ಅದರಂತೆ ದೇಶಾದ್ಯಂತ ಬಹುಮತ ಪಡೆಯುವ ದಿಕ್ಕಿನಲ್ಲಿ ಪ್ರಯತ್ನ ನಡೆಯುತ್ತಿದೆ. ಇವತ್ತು ದೆಹಲಿಯ ನನ್ನ ನಿವಾಸದಲ್ಲಿ ಪ್ರತಿಪಕ್ಷಗಳ ಸಮಾನ ಮನಸ್ಕರರ ಸಭೆ ಕರೆದಿದ್ದೇನೆ. ಇಂದು ಶುಭ ಸೂಚನೆ ಸಿಗಲಿದೆ. ನಮಗೆ ಯಶಸ್ಸು ಸಿಗುತ್ತೆ ಎನ್ನುವ ನಂಬಿಕೆ ಇದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಗೆಲುವು ಕರ್ನಾಟಕ ಜನತೆಯ ಗೆಲುವು, ಈ ಭ್ರಷ್ಟ ಸರ್ಕಾರ ತೆಗೆದು ಹಾಕಲು ಜನ ನಿರ್ಧಾರ ಕೈಗೊಂಡಿದ್ದರು. ಅದರ ಫಲ ನಮಗೆ ಬಹುಮತ ಸಿಕ್ಕಿದೆ. ಚುನಾವಣೆ ವೇಳೆ ರಾಜ್ಯದ ಜನತೆಗೆ ನೀಡಿರುವ ಭರವಸೆ ಈಡೇರಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ. ಪ್ರಣಾಳಿಕೆಯ ಗ್ಯಾರಂಟಿ ಘೋಷಣೆಗಾಗಿ ಸಿಎಂ ಡಿಸಿಎಂ ಹುದ್ದೆ ಜೊತೆಗೆ ಕನಿಷ್ಠ ಸಂಖ್ಯೆಯ ಮಂತ್ರಿಗಳ ಸ್ಥಾನ ಅಗತ್ಯವಿತ್ತು. ಹೀಗಾಗಿ ಕೇಲವರು ಪ್ರಮಾಣ ವಚನ ಸ್ವಿಕರಿಸಿದ್ದಾರೆ.
ಇನ್ನು ಕರ್ನಾಟಕ ಫಲಿತಾಂಶ ಬರುವ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀಳುವ ವಿಷಯವಾಗಿ ಮಾತನಾಡಿದ ಖರ್ಗೆ, ರಾಜ್ಯದ ಜನರ ಈ ತೀರ್ಮಾನ ನೋಡಿದ್ರೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲೂ ನಮಗೆ ಬಹುಮತ ಬರುತ್ತೆ. ಅದರಂತೆ ದೇಶಾದ್ಯಂತ ಬಹುಮತ ಪಡೆಯುವ ದಿಕ್ಕಿನಲ್ಲಿ ಪ್ರಯತ್ನ ನಡೆಯುತ್ತಿದೆ. ಇವತ್ತು ದೆಹಲಿಯ ನನ್ನ ನಿವಾಸದಲ್ಲಿ ಪ್ರತಿಪಕ್ಷಗಳ ಸಮಾನ ಮನಸ್ಕರರ ಸಭೆ ಕರೆದಿದ್ದೇನೆ. ಇಂದು ಶುಭ ಸೂಚನೆ ಸಿಗಲಿದೆ. ನಮಗೆ ಯಶಸ್ಸು ಸಿಗುತ್ತೆ ಎನ್ನುವ ನಂಬಿಕೆ ಇದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.