ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ; ಜನ ಕೈ ಹಿಡಿಯುವ ನಂಬಿಕೆ ಇದೆ; ದಿನೇಶ್ ಗುಂಡೂರಾವ್
1077 views
ಕಲಬುರಗಿ ವಿಡಿಯೋಗಳಿಗೆ ಚಂದಾದಾರರಾಗಿಕಲಬುರಗಿ: ಜನರಿಗೆ ಕೊಟ್ಟ ಮಾತುಗಳನ್ನು ಉಳಿಸಿಕೊಂಡು, ಎಲ್ಲ ಕೆಲಸ ಮಾಡುತ್ತಿದ್ದೇವೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಿದ್ದೇವೆ, ಜನ ನಮ್ಮ ಕೈ ಹಿಡಿತಾರೆ ಅನ್ನೋ ವಿಶ್ವಾಸ ಇದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಎಲ್ಲಾ ಭಾಗಕ್ಕೂ ವಿಶೇಷ ಗಮನ ಕೊಡುತ್ತಿದ್ದೇವೆ. ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ಬರಗಾಲ ಇದೆ, ರೈತರ ಸಮಸ್ಯೆ ಇದೆ, ನೀರಿನ ಸಮಸ್ಯೆ ಇದೆ ಕೇಂದ್ರ ಸರ್ಕಾರ ಒಂದು ಬಿಡುಗಾಸು ಕೂಡ ಬಿಡುಗಡೆ ಮಾಡಿಲ್ಲ. ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯ ಕರ್ನಾಟಕ, ಹೀಗಿದ್ದರೂ ನಮ್ಮ ಸಂಕಷ್ಟಕ್ಕೆ ಕೇಂದ್ರ ಬರುತ್ತಿಲ್ಲ ಎಷ್ಟರ ಮಟ್ಟಿಗೆ ನಮ್ಮ ಮೇಲೆ ಸೇಡು ತೀರಿಸಿಕೊಳ್ಳತ್ತಿದ್ದಿರಾ? ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
ಯಾಕೆ ನಮ್ಮ ರಾಜ್ಯಕ್ಕೆ ಅನುದಾನ ಕೊಡುತ್ತಿಲ್ಲ, ಹಲವಾರು ವಿಚಾರಗಳ ಬಗ್ಗೆ ಕೇಂದ್ರದ ಗಮನಕ್ಕೆ ತರಲಾಗಿದೆ. ಬಿಜೆಪಿ ಸಂಸದರು ಇಲ್ಲಿಯವರೆಗೂ ಏನೂ ಮಾಡಿಲ್ಲ. ನಾವು ಈ ಸಲ ಒಳ್ಳೆಯ ಕೆಲಸ ಮಾಡಿದ್ದೇವೆ. ಎಲ್ಲಾ ನೋಡಿದ್ರೆ ಈ ಸಲ 20ಕ್ಕೂ ಅಧಿಕ ಸೀಟ್ ಗೆಲ್ಲುವ ವಿಶ್ವಾಸ ಇದೆ. ನಾವು ಕೂಡ ಹಿಂದೆ ಜೆಡಿಎಸ್ ಜೊತೆ ಮೈತ್ರಿ ಮಾಡ್ಕೊಂಡಿದ್ವಿ. ಆವತ್ತು ನಮ್ಮ ರಿಜಲ್ಟ್ ಬಂದಿರಲಿಲ್ಲ, ಮೈತ್ರಿ ಆದಮೇಲೆ ಆ ರೀತಿಯ ರಿಜಲ್ಟ್ ಬಂತು. ಅದೆ ಪರಿಸ್ಥಿತಿ ಬಿಜೆಪಿಯವರಿಗೂ ಆಗುತ್ತದೆ, ನಮ್ಮ ಕೈ ಹಿಡಿತಾರೆ ಅನ್ನೋ ವಿಶ್ವಾಸ ಇದೆ ಎಂದರು.
ಜೆಡಿಎಸ್, ಬಿಜೆಪಿ ಮೈತ್ರಿಗೆ ಯಾವುದೇ ನೈತಿಕತೆ ಇಲ್ಲ. ಸೋಲಿನ ಭಯದಿಂದ ಮೈತ್ರಿ ಮಾಡಿಕೊಂಡಿದ್ದಾರೆ. ಅವರು ಮೈತ್ರಿ ಮಾಡಿಕೊಳ್ಳುತ್ತಾರೋ ಬಿಡುತ್ತಾರೋ ಗೊತ್ತಿಲ್ಲ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದರು. ಕಾಂಗ್ರೆಸ್ ನಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಟಿಕೆಟ್ ಅನ್ನೋ ರವಿಂದ್ರ ಹೇಳಿಕೆ ವಿಚಾರಕ್ಕೆ ಮಾತನಾಡಿ, ರವೀಂದ್ರ ಯಾರು ನಿಮಗೆ ಗೊತ್ತಿತ್ತಾ?, ಮೊದಲು, ಮಂಡ್ಯದಲ್ಲಿ ನಮ್ಮ ಅನೇಕ ಮುಖಂಡರು ಇದ್ದಾರೆ. ಅವರು ಯಾರು ಮಾತಾಡುತ್ತಿಲ್ಲ ಇವರಿಗೆ ಟಿಕೆಟ್ ಆಕಾಂಕ್ಷಿ ಆಗಿರಬಹುದು ಸಿಗಲ್ಲ ಅನ್ನೋದಕ್ಕೆ ಆ ರೀತಿ ಹೇಳಿರಬೇಕು. ಅಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ. ಯಾರು ಅಲ್ಲಿನ ಸ್ಥಳೀಯ ಮುಖಂಡರು ಹೇಳುತ್ತಾರೆ ಅವರಿಗೆ ಟಿಕೆಟ್ ನೀಡುತ್ತಾರೆ. ಯತ್ನಾಳ ಏನ ಏನ ಹೇಳಿದ್ದಾರೆ ಯಡಿಯುರಪ್ಪ ಬಗ್ಗೆ ರವೀಂದ್ರ ಅವರು ಮೂರು ನಾಲ್ಕು ವರ್ಷ ಆಯಿತು ಪಕ್ಷಕ್ಕೆ ಬಂದು ಏನೋ ಹೇಳಿಕೆ ಕೋಡುತ್ತಿದ್ದಾರೆ. ಇನ್ನೂ ಮಂಡ್ಯ ಟಿಕೆಟ್ ಅನೌನ್ಸ್ ಆಗಿದೆಯಾ. ಮಂಡ್ಯದಲ್ಲಿ 100 ಪ್ರತಿಶತ ಕಾಂಗ್ರೆಸ್ ಗೆಲ್ಲುತ್ತೆ. ಬಿಜೆಪಿ ಜೆಡಿಎಸ್ ನಿಂದ ಯಾರು ನಿಲ್ತಾರೆ ಗೊತ್ತಿಲ್ಲ, 100 ಪರ್ಸೆಂಟ್ ಕಾಂಗ್ರೆಸ್ ಗೆಲ್ಲುತ್ತೆ.
ಕಾಂಗ್ರೆಸ್ ಕ್ಯಾಂಡಿಡೇಟ್ ಲಿಸ್ಟ್ ಬಿಡುಗಡೆ ವಿಚಾರ, ಕಾಂಗ್ರೆಸ್ ಸರ್ಕಾರ ಕೋಡ್ ಆಫ್ ಕಂಡಕ್ಟ್ ಬರೋದ್ರಿಂದ ಸ್ವಲ್ಪ ಬಿಸಿ ಇದ್ದಾರೆ. ಇರೋದರಿಂದ ಅನೇಕ ಯೋಜನೆಗಳ ಜಾರಿಗೆ ತರುತ್ತಿದ್ದೇವೆ. ಇವತ್ತು ಅಥವಾ ನಾಳೆ ದೆಹಲಿಯಲ್ಲಿ ಸಭೆ ನಡೆಯಲಿದೆ. ಕೆಲ ದಿನಗಳಲ್ಲಿ ಲಿಸ್ಟ್ ಬಿಡುಗಡೆ ಆಗಲಿದೆ ಎಂದು ಹೇಳಿದರು.
ವಿಧಾನ ಸೌಧದಲ್ಲಿ ಪಾಕಿಸ್ತಾನ ಹೇಳಿಕೆ ವಿಚಾರದಲ್ಲಿ ನಾಸಿರ್ ಹುಸೇನ್ರ ರಾಜೀನಾಮೆ ನೀಡಬೇಕು ಅನ್ನೋ ವಿಚಾರ, ಯಾರು ತಪ್ಪು ಮಾಡಿದ್ರು ಶಿಕ್ಷೆ ಆಗಬೇಕು. ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದಾರೆ. ಯಾವುದೇ ಘಟನೆ ಇರಲಿ ಇಂತಹ ವಿಚಾರದಲ್ಲಿ ಕ್ಷಮಾಪಣೆ ಇರಲ್ಲ ಖಂಡಿತ ಕ್ರಮ ಕೈಗೊಳ್ಳುತ್ತೇವೆ, ಬಿಜೆಪಿಯರಿಂದ ನಾವು ಸರ್ಟಿಫಿಕೇಟ್ ಪಡೆದುಕೊಳ್ಳವೇಕಿಲ್ಲ. ನಾವು ಎಲ್ಲಾ ದೇಶ ಪ್ರೇಮಿಗಳು. ಬಿಜೆಪಿಯವರು ದೇಶ ಪ್ರೇಮಿಗಳು ಯಾಕೆ ಬಿಜೆಪಿಯವರು ಈ ತರ ಪಟ್ಟಕಟ್ಟಲಿಕ್ಕೆ ಹೊರಟಿದ್ದಾರೆ ಎಂದರು.
ಬಿಜೆಪಿಯವರಿದ್ದಾಗ ಅನೇಕ ಕಡೆ ಇಂತಹ ಘಟನೆಗಳು ಆಗಿವೆ. ಪುಲ್ವಾಮಾ ದಾಳಿ ಆಯಿತು, ಯಾರು ಪ್ರಧಾನಿ ಇದ್ರು. ಆಗ ಯಾರು ಹೊಣೆಗಾರರನ್ನ ಮಾಡಿದ್ರು ಇದರ ಹಿಂದೆ ಯಾರು ಇದ್ದಾರೆ ಅಂತ ಪತ್ತೆ ಹಚ್ಚಬೇಕು. ಕಲಬುರ್ಗಿ, ಗೌರಿ ಲಂಕೇಶ್ ಮರ್ಡರ್ ಆಯಿತು ಅದೆ ತರ ಈ ಘಟನೆಗಳಲ್ಲಿ ಯಾರ ಮಾಡಿದ್ರು ಇವರೆಲ್ಲ ಉಗ್ರವಾದಿಗಳೇ ಎಂದು ಕಿಡಿಕಾರಿದರು.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಎಲ್ಲಾ ಭಾಗಕ್ಕೂ ವಿಶೇಷ ಗಮನ ಕೊಡುತ್ತಿದ್ದೇವೆ. ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ಬರಗಾಲ ಇದೆ, ರೈತರ ಸಮಸ್ಯೆ ಇದೆ, ನೀರಿನ ಸಮಸ್ಯೆ ಇದೆ ಕೇಂದ್ರ ಸರ್ಕಾರ ಒಂದು ಬಿಡುಗಾಸು ಕೂಡ ಬಿಡುಗಡೆ ಮಾಡಿಲ್ಲ. ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯ ಕರ್ನಾಟಕ, ಹೀಗಿದ್ದರೂ ನಮ್ಮ ಸಂಕಷ್ಟಕ್ಕೆ ಕೇಂದ್ರ ಬರುತ್ತಿಲ್ಲ ಎಷ್ಟರ ಮಟ್ಟಿಗೆ ನಮ್ಮ ಮೇಲೆ ಸೇಡು ತೀರಿಸಿಕೊಳ್ಳತ್ತಿದ್ದಿರಾ? ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
ಯಾಕೆ ನಮ್ಮ ರಾಜ್ಯಕ್ಕೆ ಅನುದಾನ ಕೊಡುತ್ತಿಲ್ಲ, ಹಲವಾರು ವಿಚಾರಗಳ ಬಗ್ಗೆ ಕೇಂದ್ರದ ಗಮನಕ್ಕೆ ತರಲಾಗಿದೆ. ಬಿಜೆಪಿ ಸಂಸದರು ಇಲ್ಲಿಯವರೆಗೂ ಏನೂ ಮಾಡಿಲ್ಲ. ನಾವು ಈ ಸಲ ಒಳ್ಳೆಯ ಕೆಲಸ ಮಾಡಿದ್ದೇವೆ. ಎಲ್ಲಾ ನೋಡಿದ್ರೆ ಈ ಸಲ 20ಕ್ಕೂ ಅಧಿಕ ಸೀಟ್ ಗೆಲ್ಲುವ ವಿಶ್ವಾಸ ಇದೆ. ನಾವು ಕೂಡ ಹಿಂದೆ ಜೆಡಿಎಸ್ ಜೊತೆ ಮೈತ್ರಿ ಮಾಡ್ಕೊಂಡಿದ್ವಿ. ಆವತ್ತು ನಮ್ಮ ರಿಜಲ್ಟ್ ಬಂದಿರಲಿಲ್ಲ, ಮೈತ್ರಿ ಆದಮೇಲೆ ಆ ರೀತಿಯ ರಿಜಲ್ಟ್ ಬಂತು. ಅದೆ ಪರಿಸ್ಥಿತಿ ಬಿಜೆಪಿಯವರಿಗೂ ಆಗುತ್ತದೆ, ನಮ್ಮ ಕೈ ಹಿಡಿತಾರೆ ಅನ್ನೋ ವಿಶ್ವಾಸ ಇದೆ ಎಂದರು.
ಜೆಡಿಎಸ್, ಬಿಜೆಪಿ ಮೈತ್ರಿಗೆ ಯಾವುದೇ ನೈತಿಕತೆ ಇಲ್ಲ. ಸೋಲಿನ ಭಯದಿಂದ ಮೈತ್ರಿ ಮಾಡಿಕೊಂಡಿದ್ದಾರೆ. ಅವರು ಮೈತ್ರಿ ಮಾಡಿಕೊಳ್ಳುತ್ತಾರೋ ಬಿಡುತ್ತಾರೋ ಗೊತ್ತಿಲ್ಲ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದರು. ಕಾಂಗ್ರೆಸ್ ನಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಟಿಕೆಟ್ ಅನ್ನೋ ರವಿಂದ್ರ ಹೇಳಿಕೆ ವಿಚಾರಕ್ಕೆ ಮಾತನಾಡಿ, ರವೀಂದ್ರ ಯಾರು ನಿಮಗೆ ಗೊತ್ತಿತ್ತಾ?, ಮೊದಲು, ಮಂಡ್ಯದಲ್ಲಿ ನಮ್ಮ ಅನೇಕ ಮುಖಂಡರು ಇದ್ದಾರೆ. ಅವರು ಯಾರು ಮಾತಾಡುತ್ತಿಲ್ಲ ಇವರಿಗೆ ಟಿಕೆಟ್ ಆಕಾಂಕ್ಷಿ ಆಗಿರಬಹುದು ಸಿಗಲ್ಲ ಅನ್ನೋದಕ್ಕೆ ಆ ರೀತಿ ಹೇಳಿರಬೇಕು. ಅಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ. ಯಾರು ಅಲ್ಲಿನ ಸ್ಥಳೀಯ ಮುಖಂಡರು ಹೇಳುತ್ತಾರೆ ಅವರಿಗೆ ಟಿಕೆಟ್ ನೀಡುತ್ತಾರೆ. ಯತ್ನಾಳ ಏನ ಏನ ಹೇಳಿದ್ದಾರೆ ಯಡಿಯುರಪ್ಪ ಬಗ್ಗೆ ರವೀಂದ್ರ ಅವರು ಮೂರು ನಾಲ್ಕು ವರ್ಷ ಆಯಿತು ಪಕ್ಷಕ್ಕೆ ಬಂದು ಏನೋ ಹೇಳಿಕೆ ಕೋಡುತ್ತಿದ್ದಾರೆ. ಇನ್ನೂ ಮಂಡ್ಯ ಟಿಕೆಟ್ ಅನೌನ್ಸ್ ಆಗಿದೆಯಾ. ಮಂಡ್ಯದಲ್ಲಿ 100 ಪ್ರತಿಶತ ಕಾಂಗ್ರೆಸ್ ಗೆಲ್ಲುತ್ತೆ. ಬಿಜೆಪಿ ಜೆಡಿಎಸ್ ನಿಂದ ಯಾರು ನಿಲ್ತಾರೆ ಗೊತ್ತಿಲ್ಲ, 100 ಪರ್ಸೆಂಟ್ ಕಾಂಗ್ರೆಸ್ ಗೆಲ್ಲುತ್ತೆ.
ಕಾಂಗ್ರೆಸ್ ಕ್ಯಾಂಡಿಡೇಟ್ ಲಿಸ್ಟ್ ಬಿಡುಗಡೆ ವಿಚಾರ, ಕಾಂಗ್ರೆಸ್ ಸರ್ಕಾರ ಕೋಡ್ ಆಫ್ ಕಂಡಕ್ಟ್ ಬರೋದ್ರಿಂದ ಸ್ವಲ್ಪ ಬಿಸಿ ಇದ್ದಾರೆ. ಇರೋದರಿಂದ ಅನೇಕ ಯೋಜನೆಗಳ ಜಾರಿಗೆ ತರುತ್ತಿದ್ದೇವೆ. ಇವತ್ತು ಅಥವಾ ನಾಳೆ ದೆಹಲಿಯಲ್ಲಿ ಸಭೆ ನಡೆಯಲಿದೆ. ಕೆಲ ದಿನಗಳಲ್ಲಿ ಲಿಸ್ಟ್ ಬಿಡುಗಡೆ ಆಗಲಿದೆ ಎಂದು ಹೇಳಿದರು.
ವಿಧಾನ ಸೌಧದಲ್ಲಿ ಪಾಕಿಸ್ತಾನ ಹೇಳಿಕೆ ವಿಚಾರದಲ್ಲಿ ನಾಸಿರ್ ಹುಸೇನ್ರ ರಾಜೀನಾಮೆ ನೀಡಬೇಕು ಅನ್ನೋ ವಿಚಾರ, ಯಾರು ತಪ್ಪು ಮಾಡಿದ್ರು ಶಿಕ್ಷೆ ಆಗಬೇಕು. ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದಾರೆ. ಯಾವುದೇ ಘಟನೆ ಇರಲಿ ಇಂತಹ ವಿಚಾರದಲ್ಲಿ ಕ್ಷಮಾಪಣೆ ಇರಲ್ಲ ಖಂಡಿತ ಕ್ರಮ ಕೈಗೊಳ್ಳುತ್ತೇವೆ, ಬಿಜೆಪಿಯರಿಂದ ನಾವು ಸರ್ಟಿಫಿಕೇಟ್ ಪಡೆದುಕೊಳ್ಳವೇಕಿಲ್ಲ. ನಾವು ಎಲ್ಲಾ ದೇಶ ಪ್ರೇಮಿಗಳು. ಬಿಜೆಪಿಯವರು ದೇಶ ಪ್ರೇಮಿಗಳು ಯಾಕೆ ಬಿಜೆಪಿಯವರು ಈ ತರ ಪಟ್ಟಕಟ್ಟಲಿಕ್ಕೆ ಹೊರಟಿದ್ದಾರೆ ಎಂದರು.
ಬಿಜೆಪಿಯವರಿದ್ದಾಗ ಅನೇಕ ಕಡೆ ಇಂತಹ ಘಟನೆಗಳು ಆಗಿವೆ. ಪುಲ್ವಾಮಾ ದಾಳಿ ಆಯಿತು, ಯಾರು ಪ್ರಧಾನಿ ಇದ್ರು. ಆಗ ಯಾರು ಹೊಣೆಗಾರರನ್ನ ಮಾಡಿದ್ರು ಇದರ ಹಿಂದೆ ಯಾರು ಇದ್ದಾರೆ ಅಂತ ಪತ್ತೆ ಹಚ್ಚಬೇಕು. ಕಲಬುರ್ಗಿ, ಗೌರಿ ಲಂಕೇಶ್ ಮರ್ಡರ್ ಆಯಿತು ಅದೆ ತರ ಈ ಘಟನೆಗಳಲ್ಲಿ ಯಾರ ಮಾಡಿದ್ರು ಇವರೆಲ್ಲ ಉಗ್ರವಾದಿಗಳೇ ಎಂದು ಕಿಡಿಕಾರಿದರು.