ಕಲಬುರಗಿ: ಬಿಡುಗಡೆಯಾಗಿಲ್ಲ ಕೂಲಿ ಹಣ, ಉದ್ಯೋಗ ಖಾತ್ರಿ ಕಾರ್ಮಿಕರ ಆಕ್ರೋಶ
1060 views
ಕಲಬುರಗಿ ವಿಡಿಯೋಗಳಿಗೆ ಚಂದಾದಾರರಾಗಿಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಸಂಕಷ್ಟ ತಂದಂತಾಗಿದೆ. ಚುನಾವಣೆ ಹಿನ್ನೆಲೆ ಉದ್ಯೋಗ ಖಾತ್ರಿಯ ಕೂಲಿ ಕಾರ್ಮಿಕರಿಗೆ ಕಳೆದ ಒಂದೂವರೇ ತಿಂಗಳಿಂದ ಕೂಲಿ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಕೂಲಿ ಹಣ ಸೀಗದೆ ನಾನಾ ಸಮಸ್ಯೆ ಎದುರಿಸುತ್ತಿರೋ ಕಲಬುರಗಿ ಜಿಲ್ಲೆಯ ಕೂಲಿಕಾರರು ಹಣ ಬಿಡುಗಡೆ ಮಾಡಿ ಅಂತಾ ಹೋರಾಟಕ್ಕಿಳಿದಿದ್ದಾರೆ.
ಒಂದೂವರೇ ತಿಂಗಳ ಕೂಲಿ ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಕೂಲಿಕಾರರು ಆಗ್ರಹಿಸಿದ್ದಾರೆ. ಬಿರು ಬೇಸಿಗೆ ಹಿನ್ನೆಲೆ ದಿನಕ್ಕೆ ಒಂದು ಸಲ ಮಾತ್ರ NMMS ಮಾಡಬೇಕು. ಕಡು ಬಿಸಿಲಿರುವ ಕಾರಣ ಕೂಲಿ ಕೆಲಸ ಪ್ರಮಾಣ ಕಡಿಮೆ ಮಾಡಬೇಕು. ಕೆಲಸ ಮಾಡುವ ಸ್ಥಳದಲ್ಲಿ ನೆರಳು ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಅಲ್ಲದೆ ಕೆಲಸ ಮಾಡುವ ಸಾಮಗ್ರಿಗಳ ಶುದ್ದಿಕರಣಕ್ಕಾಗಿ ವಾರಕ್ಕೊಂದು ಸಲ ಹಣ ನೀಡಬೇಕು. ಈ ಹಿಂದೆ ಕಡಿತಗೊಂಡ ಜಾಬ್ ಕಾರ್ಡ್ ಗಳನ್ನು ಪುನಃ ಹೊಸದಾಗಿ ಮಾಡಿಕೊಡಬೇಕು. ನಕಲಿ ಕೂಲಿಕಾರರ ಹೆಸರಿನಲ್ಲಿ ಹಣ ಗುಳುಂ ಮಾಡ್ತಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮ ಪಂಚಾಯತ್ ಕೇಂದ್ರ ಸ್ಥಾನದಲ್ಲಿ ಇರದ ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಉದ್ಯೋಗ ಖಾತ್ರಿ ಕೂಲಿಕಾರರು ಇಲಾಖೆಯ ಅಧಿಕಾರಿಗಳಿಗೆ, ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾಹಿತಿ ನೀಡಿದರು.
ಒಂದೂವರೇ ತಿಂಗಳ ಕೂಲಿ ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಕೂಲಿಕಾರರು ಆಗ್ರಹಿಸಿದ್ದಾರೆ. ಬಿರು ಬೇಸಿಗೆ ಹಿನ್ನೆಲೆ ದಿನಕ್ಕೆ ಒಂದು ಸಲ ಮಾತ್ರ NMMS ಮಾಡಬೇಕು. ಕಡು ಬಿಸಿಲಿರುವ ಕಾರಣ ಕೂಲಿ ಕೆಲಸ ಪ್ರಮಾಣ ಕಡಿಮೆ ಮಾಡಬೇಕು. ಕೆಲಸ ಮಾಡುವ ಸ್ಥಳದಲ್ಲಿ ನೆರಳು ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಅಲ್ಲದೆ ಕೆಲಸ ಮಾಡುವ ಸಾಮಗ್ರಿಗಳ ಶುದ್ದಿಕರಣಕ್ಕಾಗಿ ವಾರಕ್ಕೊಂದು ಸಲ ಹಣ ನೀಡಬೇಕು. ಈ ಹಿಂದೆ ಕಡಿತಗೊಂಡ ಜಾಬ್ ಕಾರ್ಡ್ ಗಳನ್ನು ಪುನಃ ಹೊಸದಾಗಿ ಮಾಡಿಕೊಡಬೇಕು. ನಕಲಿ ಕೂಲಿಕಾರರ ಹೆಸರಿನಲ್ಲಿ ಹಣ ಗುಳುಂ ಮಾಡ್ತಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮ ಪಂಚಾಯತ್ ಕೇಂದ್ರ ಸ್ಥಾನದಲ್ಲಿ ಇರದ ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಉದ್ಯೋಗ ಖಾತ್ರಿ ಕೂಲಿಕಾರರು ಇಲಾಖೆಯ ಅಧಿಕಾರಿಗಳಿಗೆ, ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾಹಿತಿ ನೀಡಿದರು.