ಕೋಲಾರ ಜಿಲ್ಲೆಯಲ್ಲಿಯೇ ಮೊದಲ ಪ್ರಯೋಗ: ಬದನೆಕಾಯಿ ಕಾಂಡದಲ್ಲಿ ಟೊಮೆಟೊ ಬೆಳೆ
1047 views
ಕೋಲಾರ ವಿಡಿಯೋಗಳಿಗೆ ಚಂದಾದಾರರಾಗಿಕೋಲಾರ: ಕೋಲಾರ ಮಾರುಕಟ್ಟೆ ಏಷ್ಯಾದ 2ನೇ ಅತಿ ದೊಡ್ಡ ತರಕಾರಿ ಮಾರುಕಟ್ಟೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೋಲಾರ ಜಿಲ್ಲೆಯ ರೈತರೂ ಸಹ ನಿರಂತರವಾಗಿ ಶ್ರಮಜೀವಿಗಳಂತೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿರುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ರೈತರೊಬ್ಬರು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬದನೆಕಾಯಿ ಕಾಂಡದಲ್ಲಿ ಟೊಮೆಟೊ ಬೆಳೆದು ಯಶಸ್ವಿಯಾಗಿದ್ದಾರೆ.
ಶ್ರೀನಿವಾಸಪುರ ತಾಲೂಕಿನ ಕೊತ್ತಪೇಟೆ ಗ್ರಾಮದ ರೈತ ನಾರಾಯಣಸ್ವಾಮಿ ಎಂಬುವರು ಬದನೆಕಾಯಿಯ ಕಾಂಡದಲ್ಲಿ ಟೊಮೆಟೊ ಬೆಳೆದು ಭರ್ಜರಿ ಇಳುವರಿ ಪಡೆದಿದ್ದಾರೆ. ಈಗ ಮಾರುಕಟ್ಟೆಯಲ್ಲಿಯೂ ಟೊಮೆಟೊಗೆ ಡಿಮ್ಯಾಂಡ್ ಹೆಚ್ಚಾಗಿದ್ದು ಉತ್ತಮ ಆದಾಯವನ್ನೂ ಗಳಿಸಿದ್ದಾರೆ. ಈ ಮೊದಲು ಹಲವು ಬಾರಿ ಟೊಮೆಟೊ, ಹೂಕೋಸು, ಜೋಳ ಸೇರಿದಂತೆ ಹಲವು ಬೆಳೆಗಳನ್ನು ರೈತ ನಾರಾಯಣಸ್ವಾಮಿ ಬೆಳೆದಿದ್ದಾರೆ. ಆದ್ರೆ ಈ ಹಿಂದೆ ರೋಗಗಳ ಕಾಟದಿಂದ ಟೊಮೆಟೊದಿಂದ ತುಂಬಾ ನಷ್ಟವನ್ನು ಅನುಭವಿಸಿದ್ದಾರೆ. ಕೊತ್ತಪೇಟೆ ಗ್ರಾಮವು ಆಂಧ್ರ ಗಡಿಯಲ್ಲಿರುವ ಕಾರಣ ಅಲ್ಲಿನ ರೈತರೊಬ್ಬರು ಅಂಟು ಟೊಮೆಟೊ ಬೆಳೆಯುವಂತೆ ಸಲಹೆ ನೀಡಿದ್ದಾರೆ. ಅದರಂತೆ ಸಮೀಪದ ಆಂಧ್ರಕ ಭೇಟಿ ನೀಡಿ ಅಲ್ಲಿ ಬೆಳೆಯನ್ನು ವೀಕ್ಷಿಸಿದ್ದಾರೆ. ಆದ್ರೆ ಕೋಲಾರ ಜಿಲ್ಲೆಯಲ್ಲಿ ಇದುವರೆಗೂ ಯಾರು ಈ ಪ್ರಯೋಗಕ್ಕೆ ಮುಂದಾಗದ ಕಾರಣ ಗೊಂದಲಕ್ಕೆ ಒಳಗಾಗಿದ್ದರು. ನಂತರ ರೈತರು, ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ಕೊನೆಗೂ ಧೈರ್ಯ ಮಾಡಿ ಟೊಮೆಟೊ ಗಿಡಗಳನ್ನು ನಾಟಿ ಮಾಡಿದ್ದಾರೆ.
ಕಪ್ಪು ಬದನೆಕಾಯಿ ಗಿಡದ ಕಾಂಡದಲ್ಲಿ ಸಾಹೋ ಜಾತಿಯ ಟೊಮೆಟೊವನ್ನು ಬೆಳೆಯಲಾಗಿದೆ. ಆಂಧ್ರದ ಕುಪ್ಪಂನ ಕೃಷಿ ವಿಜ್ಙಾನ ಕೇಂದ್ರದಿಂದ ಈ ತಳಿಯನ್ನು ತಂದಿದ್ದು ಒಂದು ಗಿಡಕ್ಕೆ ಅಲ್ಲಿಯೇ ಆರೂಕಾಲು ರೂಪಾಯಿ ಬಿದ್ದಿದೆ. ಸಾರಿಗೆ ವೆಚ್ಚವೆಲ್ಲಾ ಸೇರಿ ತೋಟಕ್ಕೆ ಬರುವಷ್ಟರಲ್ಲಿ ಒಂದು ಗಿಡಕ್ಕೆ 8 ರೂಪಾಯಿ ಖರ್ಚು ತಗುಲಿದೆ. ಒಂದು ಎಕರೆಗೆ 5 ಸಾವಿರ ಗಿಡಗಳಂತೆ 2 ಎಕರೆಗೆ ಒಟ್ಟು 10 ಸಾವಿರ ಗಿಡಗಳನ್ನು ಹಾಕಿದ್ದೇನೆ. ತಿಪ್ಪೆ ಗೊಬ್ಬರ, ಔಷಧಿ, ಕೂಲಿಯಾಳುಗಳು ಎಲ್ಲಾ ಸೇರಿದಂತೆ ಒಂದು ಎಕರೆಗೆ 3 ಲಕ್ಷ ಖರ್ಚು ಬಂದಿದ್ದು 2 ಎಕರೆಗೆ ಒಟ್ಟು ಆರು ಲಕ್ಷ ಬಂಡವಾಳ ಹಾಕಲಾಗಿದೆ.
ಶ್ರೀನಿವಾಸಪುರ ತಾಲೂಕಿನ ಕೊತ್ತಪೇಟೆ ಗ್ರಾಮದ ರೈತ ನಾರಾಯಣಸ್ವಾಮಿ ಎಂಬುವರು ಬದನೆಕಾಯಿಯ ಕಾಂಡದಲ್ಲಿ ಟೊಮೆಟೊ ಬೆಳೆದು ಭರ್ಜರಿ ಇಳುವರಿ ಪಡೆದಿದ್ದಾರೆ. ಈಗ ಮಾರುಕಟ್ಟೆಯಲ್ಲಿಯೂ ಟೊಮೆಟೊಗೆ ಡಿಮ್ಯಾಂಡ್ ಹೆಚ್ಚಾಗಿದ್ದು ಉತ್ತಮ ಆದಾಯವನ್ನೂ ಗಳಿಸಿದ್ದಾರೆ. ಈ ಮೊದಲು ಹಲವು ಬಾರಿ ಟೊಮೆಟೊ, ಹೂಕೋಸು, ಜೋಳ ಸೇರಿದಂತೆ ಹಲವು ಬೆಳೆಗಳನ್ನು ರೈತ ನಾರಾಯಣಸ್ವಾಮಿ ಬೆಳೆದಿದ್ದಾರೆ. ಆದ್ರೆ ಈ ಹಿಂದೆ ರೋಗಗಳ ಕಾಟದಿಂದ ಟೊಮೆಟೊದಿಂದ ತುಂಬಾ ನಷ್ಟವನ್ನು ಅನುಭವಿಸಿದ್ದಾರೆ. ಕೊತ್ತಪೇಟೆ ಗ್ರಾಮವು ಆಂಧ್ರ ಗಡಿಯಲ್ಲಿರುವ ಕಾರಣ ಅಲ್ಲಿನ ರೈತರೊಬ್ಬರು ಅಂಟು ಟೊಮೆಟೊ ಬೆಳೆಯುವಂತೆ ಸಲಹೆ ನೀಡಿದ್ದಾರೆ. ಅದರಂತೆ ಸಮೀಪದ ಆಂಧ್ರಕ ಭೇಟಿ ನೀಡಿ ಅಲ್ಲಿ ಬೆಳೆಯನ್ನು ವೀಕ್ಷಿಸಿದ್ದಾರೆ. ಆದ್ರೆ ಕೋಲಾರ ಜಿಲ್ಲೆಯಲ್ಲಿ ಇದುವರೆಗೂ ಯಾರು ಈ ಪ್ರಯೋಗಕ್ಕೆ ಮುಂದಾಗದ ಕಾರಣ ಗೊಂದಲಕ್ಕೆ ಒಳಗಾಗಿದ್ದರು. ನಂತರ ರೈತರು, ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ಕೊನೆಗೂ ಧೈರ್ಯ ಮಾಡಿ ಟೊಮೆಟೊ ಗಿಡಗಳನ್ನು ನಾಟಿ ಮಾಡಿದ್ದಾರೆ.
ಕಪ್ಪು ಬದನೆಕಾಯಿ ಗಿಡದ ಕಾಂಡದಲ್ಲಿ ಸಾಹೋ ಜಾತಿಯ ಟೊಮೆಟೊವನ್ನು ಬೆಳೆಯಲಾಗಿದೆ. ಆಂಧ್ರದ ಕುಪ್ಪಂನ ಕೃಷಿ ವಿಜ್ಙಾನ ಕೇಂದ್ರದಿಂದ ಈ ತಳಿಯನ್ನು ತಂದಿದ್ದು ಒಂದು ಗಿಡಕ್ಕೆ ಅಲ್ಲಿಯೇ ಆರೂಕಾಲು ರೂಪಾಯಿ ಬಿದ್ದಿದೆ. ಸಾರಿಗೆ ವೆಚ್ಚವೆಲ್ಲಾ ಸೇರಿ ತೋಟಕ್ಕೆ ಬರುವಷ್ಟರಲ್ಲಿ ಒಂದು ಗಿಡಕ್ಕೆ 8 ರೂಪಾಯಿ ಖರ್ಚು ತಗುಲಿದೆ. ಒಂದು ಎಕರೆಗೆ 5 ಸಾವಿರ ಗಿಡಗಳಂತೆ 2 ಎಕರೆಗೆ ಒಟ್ಟು 10 ಸಾವಿರ ಗಿಡಗಳನ್ನು ಹಾಕಿದ್ದೇನೆ. ತಿಪ್ಪೆ ಗೊಬ್ಬರ, ಔಷಧಿ, ಕೂಲಿಯಾಳುಗಳು ಎಲ್ಲಾ ಸೇರಿದಂತೆ ಒಂದು ಎಕರೆಗೆ 3 ಲಕ್ಷ ಖರ್ಚು ಬಂದಿದ್ದು 2 ಎಕರೆಗೆ ಒಟ್ಟು ಆರು ಲಕ್ಷ ಬಂಡವಾಳ ಹಾಕಲಾಗಿದೆ.