ಸಿದ್ದರಾಮಯ್ಯ ಸರ್ಕಾರ ಪಾಪರ್ ಸರ್ಕಾರ ; ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ
1072 views
ಕೋಲಾರ ವಿಡಿಯೋಗಳಿಗೆ ಚಂದಾದಾರರಾಗಿಕೋಲಾರ: ರಾಜ್ಯದಲ್ಲಿ ಬರಗಾಲ ವ್ಯಾಪಿಸಿ ಆರೇಳು ತಿಂಗಳು ಕಳೆದರೂ ಸಹ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಿಲ್ಲ, ಈವರೆಗೆ 800 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಕೋಲಾರದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದರು.
ಅಲ್ಪಸಂಖ್ಯಾತರ ಅಭಿವೃದ್ಧಿಗೆ 1000 ಕೋಟಿ ಹಣ ಬಿಡುಗಡೆ ಮಾಡಿದೆ. ಆದರೆ ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕಿಸಿದರು. ಬಿಜೆಪಿ ಸರ್ಕಾರದಲ್ಲಿ ಕೋಲಾರ ಜಿಲ್ಲೆಗೆ 54 ಕೋಟಿ ರೂ. ಬಿಡುಗಡೆ ಮಾಡಿತ್ತು. 2022ರ ಡಿಸೆಂಬರ್ನಲ್ಲಿ ಬರ ಘೋಷಣೆಯಾದಾಗ ಬಿಜೆಪಿ ಸರ್ಕಾರವು 3 ಸಾವಿರ ಕೋಟಿ ರೂ ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬ ರೈತರಿಗೆ 20 ರಿಂದ 30 ಸಾವಿರ ರೂ ಸೇರಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಕೋಲಾರ ಜಿಲ್ಲೆಗೆ ಕೇವಲ 3 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಲು ನಾಚಿಕೆಯಾಗಬೇಕು ಎಂದರು.
ರಾಜ್ಯದಲ್ಲಿನ 39 ನಿಗಮ ಮಂಡಳಿ ರಚನೆಗೆ 150 ಕೋಟಿ ರೂ ವೆಚ್ಚ ಮಾಡಲು ಹಣವಿದೆ. ಆದರೆ ರೈತರ ಪರಿಹಾರಕ್ಕೆ, ಅಭಿವೃದ್ದಿಗಳಿಗೆ ಹಣ ಇರುವುದಿಲ್ಲವೇ? ಕಾಂಗ್ರೆಸ್ ಆಡಳಿತದಲ್ಲಿ ದಿವಾಳಿ ಆಗಿದೆಯೇ? ಸರ್ಕಾರವು ಸೋಮಾರಿತನದ ಪರಮಾವಧಿಯಾಗಿದೆ. ಕಳೆದ 7 ತಿಂಗಳಿಂದ ಗ್ಯಾರಂಟಿ ಜಪದಲ್ಲಿ ಸಾರ್ವಜನಿಕರ ಮೂಲಭೂತ ಸಮಸ್ಯೆಗಳ ಅಭಿವೃದ್ದಿ ಕಡೆಗಣಿಸಿದೆ, ಒಂದು ರಸ್ತೆಯಿಲ್ಲ, ಒಂದು ಡ್ಯಾಮ್ ಇಲ್ಲ ಎಂದು ದೂರಿದರು.
ಮದ್ಯದ ಬಾಟಲ್ ಕ್ವಾಟರ್ಗೆ 40 ರೂ ಬಿಯರ್ ಒಂದು ಬಾಟಲ್ಗೆ 30 ರೂ ಏರಿಕೆ ಮಾಡಿದೆ. ತಿಂಗಳಿಗೆ ಗಂಡನಿಗೆ 3 ಸಾವಿರ ರೂ ಹೊರೆ ಹಾಕಿ ಪತ್ನಿಗೆ 2 ಸಾವಿರ ರೂ ನೀಡುವ ಮೂಲಕ 1 ಸಾವಿರ ರೂ ಸಿದ್ದರಾಮಯ್ಯ ಜೇಬಿಗೆ ಇಳಿಸಿ ಅದನ್ನು ಸೋನಿಯ ಗಾಂಧಿಗೆ ರವಾನಿಸಲಾಗುತ್ತಿದೆ ಎಂದು ವ್ಯಂಗವಾಡಿದರು. ಬೊಮ್ಮಾಯಿ ಆಡಳಿತದಲ್ಲಿ ಸಾಲ ಮಾಡಿಲ್ಲ, ಆದರೆ ಸಿದ್ದು ಸರ್ಕಾರ ಪಾಪರ್ ಆಗಿದೆ. ಸಾಲದಲ್ಲಿ ಬಜೆಟ್ ಮಂಡಿಸಿ ಜನರ ಮೇಲೆ ಸಾಲದ ಹೊರೆ ಹಾಕುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ಸಿದ್ದರಾಮಯ್ಯ ಅಧಿಕಾರವನ್ನು ಬಿಡಬೇಕು. ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಲೋಟಿ ಮಾಡುತ್ತಿದೆ ಎಂದು ದೂರಿದರು.
ಅಲ್ಪಸಂಖ್ಯಾತರ ಅಭಿವೃದ್ಧಿಗೆ 1000 ಕೋಟಿ ಹಣ ಬಿಡುಗಡೆ ಮಾಡಿದೆ. ಆದರೆ ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕಿಸಿದರು. ಬಿಜೆಪಿ ಸರ್ಕಾರದಲ್ಲಿ ಕೋಲಾರ ಜಿಲ್ಲೆಗೆ 54 ಕೋಟಿ ರೂ. ಬಿಡುಗಡೆ ಮಾಡಿತ್ತು. 2022ರ ಡಿಸೆಂಬರ್ನಲ್ಲಿ ಬರ ಘೋಷಣೆಯಾದಾಗ ಬಿಜೆಪಿ ಸರ್ಕಾರವು 3 ಸಾವಿರ ಕೋಟಿ ರೂ ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬ ರೈತರಿಗೆ 20 ರಿಂದ 30 ಸಾವಿರ ರೂ ಸೇರಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಕೋಲಾರ ಜಿಲ್ಲೆಗೆ ಕೇವಲ 3 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಲು ನಾಚಿಕೆಯಾಗಬೇಕು ಎಂದರು.
ರಾಜ್ಯದಲ್ಲಿನ 39 ನಿಗಮ ಮಂಡಳಿ ರಚನೆಗೆ 150 ಕೋಟಿ ರೂ ವೆಚ್ಚ ಮಾಡಲು ಹಣವಿದೆ. ಆದರೆ ರೈತರ ಪರಿಹಾರಕ್ಕೆ, ಅಭಿವೃದ್ದಿಗಳಿಗೆ ಹಣ ಇರುವುದಿಲ್ಲವೇ? ಕಾಂಗ್ರೆಸ್ ಆಡಳಿತದಲ್ಲಿ ದಿವಾಳಿ ಆಗಿದೆಯೇ? ಸರ್ಕಾರವು ಸೋಮಾರಿತನದ ಪರಮಾವಧಿಯಾಗಿದೆ. ಕಳೆದ 7 ತಿಂಗಳಿಂದ ಗ್ಯಾರಂಟಿ ಜಪದಲ್ಲಿ ಸಾರ್ವಜನಿಕರ ಮೂಲಭೂತ ಸಮಸ್ಯೆಗಳ ಅಭಿವೃದ್ದಿ ಕಡೆಗಣಿಸಿದೆ, ಒಂದು ರಸ್ತೆಯಿಲ್ಲ, ಒಂದು ಡ್ಯಾಮ್ ಇಲ್ಲ ಎಂದು ದೂರಿದರು.
ಮದ್ಯದ ಬಾಟಲ್ ಕ್ವಾಟರ್ಗೆ 40 ರೂ ಬಿಯರ್ ಒಂದು ಬಾಟಲ್ಗೆ 30 ರೂ ಏರಿಕೆ ಮಾಡಿದೆ. ತಿಂಗಳಿಗೆ ಗಂಡನಿಗೆ 3 ಸಾವಿರ ರೂ ಹೊರೆ ಹಾಕಿ ಪತ್ನಿಗೆ 2 ಸಾವಿರ ರೂ ನೀಡುವ ಮೂಲಕ 1 ಸಾವಿರ ರೂ ಸಿದ್ದರಾಮಯ್ಯ ಜೇಬಿಗೆ ಇಳಿಸಿ ಅದನ್ನು ಸೋನಿಯ ಗಾಂಧಿಗೆ ರವಾನಿಸಲಾಗುತ್ತಿದೆ ಎಂದು ವ್ಯಂಗವಾಡಿದರು. ಬೊಮ್ಮಾಯಿ ಆಡಳಿತದಲ್ಲಿ ಸಾಲ ಮಾಡಿಲ್ಲ, ಆದರೆ ಸಿದ್ದು ಸರ್ಕಾರ ಪಾಪರ್ ಆಗಿದೆ. ಸಾಲದಲ್ಲಿ ಬಜೆಟ್ ಮಂಡಿಸಿ ಜನರ ಮೇಲೆ ಸಾಲದ ಹೊರೆ ಹಾಕುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ಸಿದ್ದರಾಮಯ್ಯ ಅಧಿಕಾರವನ್ನು ಬಿಡಬೇಕು. ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಲೋಟಿ ಮಾಡುತ್ತಿದೆ ಎಂದು ದೂರಿದರು.