ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ತನಿಖೆ ಯಾಕೆ? ಒದ್ದು ಒಳಗೆ ಹಾಕಬೇಕು- ಮಹೇಶ ಟೆಂಗಿನಕಾಯಿ
1107 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಹಾಕುತ್ತಾರೆ ಎಂದರೆ, ಸರಕಾರ ನಿದ್ದೆ ಮಾಡುತ್ತಿದೆ ಎಂದರ್ಥ ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ನಗರದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗ ಇಂತಹ ದೇಶದ್ರೋಹ ವಿಘಟನೆ ಶಕ್ತಿಗಳು ಹೊರಬರುತ್ತವೆ. ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ತನಿಖೆ ಯಾಕೆ ಮಾಡಬೇಕು ? ಒದ್ದು ಒಳಗೆ ಹಾಕಬೇಕಿತ್ತು. ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಕಾಂಗ್ರೆಸ್ ಸರಕಾರ ಚಹಾ ಕುಡಿಸುವ ಕೆಲಸ ಮಾಡುತ್ತಿದೆ ಎಂದರು.
ಘೋಷಣೆ ಕೂಗಿದವರನ್ನು ಬಂಧನ ಮಾಡುವ ಪ್ರಯತ್ನ ಮಾಡುತ್ತಾರೆ. ಎಫ್ಎಸ್ಎಲ್ ವರದಿ ಬರುವ ಮುನ್ನವೇ ಬಿ- ರಿಪೋರ್ಟ್ ಹಾಕುವುದು, ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಕೆಲಸ ಸರಕಾರ ಮಾಡುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದಕ್ಕೆ, ನಾಸಿರ್ ಹುಸೇನ್ ಮೇಲೆಯೇ ದೇಶದ್ರೋಹ ಕೇಸ್ ಹಾಕಬೇಕು ಎಂದು ಒತ್ತಾಯಿಸಿದರು.
ಒಂದು ಸುಳ್ಳನ್ನು ನೂರು ಸಲ ಹೇಳಿ ಅದನ್ನು ಸತ್ಯ ಮಾಡುವಲ್ಲಿ ಸಿದ್ದರಾಮಯ್ಯ ಎಕ್ಸಪರ್ಟ್ ಇದ್ದಾರೆ. ನಾಸಿರ್ ಹುಸೇನ್ ಬಳಿ ಇದ್ದವರು ಮಾತ್ರ ಘೋಷಣೆ ಹಾಕಿದ್ದಾರೆ. ಪ್ರಕರಣವನ್ನು ತಿರುಚುವಂತ ಕೆಲಸವನ್ನು ಸರಕಾರ ಮಾಡಬಾರದು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 9 ತಿಂಗಳಲ್ಲಿ ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುವ ಕೆಲಸ ಮಾಡುತ್ತಿದೆ. ಹಿಂದೂಗಳ ದೇವಸ್ಥಾನದಲ್ಲಿನ ಶೇ.10ರಷ್ಟನ್ನು ಅಲ್ಪಸಂಖ್ಯಾತರಿಗೆ ಕೊಡಲು ಸರಕಾರ ಹೊರಟಿದೆ. ಹಾಗಾದರೆ ಮಸೀದಿಯಲ್ಲಿನ ಹಣವನ್ನು ಎತ್ತಿ ನೋಡೋಣ, ಹಿಂದೂಗಳ ದೇವಾಲಯಗಳು ಬಿಟ್ಟಿ ಬಿದ್ದಿವೆಯಾ ಅಲ್ಲಿನ ಹಣ ತೆಗೆದುಕೊಂಡು ಹೋಗಲು ? ಎಂದು ಸವಾಲೆಸೆದರು.
ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಾಗ ಇಂತಹ ದೇಶದ್ರೋಹ ವಿಘಟನೆ ಶಕ್ತಿಗಳು ಹೊರಬರುತ್ತವೆ. ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ತನಿಖೆ ಯಾಕೆ ಮಾಡಬೇಕು ? ಒದ್ದು ಒಳಗೆ ಹಾಕಬೇಕಿತ್ತು. ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಕಾಂಗ್ರೆಸ್ ಸರಕಾರ ಚಹಾ ಕುಡಿಸುವ ಕೆಲಸ ಮಾಡುತ್ತಿದೆ ಎಂದರು.
ಘೋಷಣೆ ಕೂಗಿದವರನ್ನು ಬಂಧನ ಮಾಡುವ ಪ್ರಯತ್ನ ಮಾಡುತ್ತಾರೆ. ಎಫ್ಎಸ್ಎಲ್ ವರದಿ ಬರುವ ಮುನ್ನವೇ ಬಿ- ರಿಪೋರ್ಟ್ ಹಾಕುವುದು, ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಕೆಲಸ ಸರಕಾರ ಮಾಡುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದಕ್ಕೆ, ನಾಸಿರ್ ಹುಸೇನ್ ಮೇಲೆಯೇ ದೇಶದ್ರೋಹ ಕೇಸ್ ಹಾಕಬೇಕು ಎಂದು ಒತ್ತಾಯಿಸಿದರು.
ಒಂದು ಸುಳ್ಳನ್ನು ನೂರು ಸಲ ಹೇಳಿ ಅದನ್ನು ಸತ್ಯ ಮಾಡುವಲ್ಲಿ ಸಿದ್ದರಾಮಯ್ಯ ಎಕ್ಸಪರ್ಟ್ ಇದ್ದಾರೆ. ನಾಸಿರ್ ಹುಸೇನ್ ಬಳಿ ಇದ್ದವರು ಮಾತ್ರ ಘೋಷಣೆ ಹಾಕಿದ್ದಾರೆ. ಪ್ರಕರಣವನ್ನು ತಿರುಚುವಂತ ಕೆಲಸವನ್ನು ಸರಕಾರ ಮಾಡಬಾರದು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 9 ತಿಂಗಳಲ್ಲಿ ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುವ ಕೆಲಸ ಮಾಡುತ್ತಿದೆ. ಹಿಂದೂಗಳ ದೇವಸ್ಥಾನದಲ್ಲಿನ ಶೇ.10ರಷ್ಟನ್ನು ಅಲ್ಪಸಂಖ್ಯಾತರಿಗೆ ಕೊಡಲು ಸರಕಾರ ಹೊರಟಿದೆ. ಹಾಗಾದರೆ ಮಸೀದಿಯಲ್ಲಿನ ಹಣವನ್ನು ಎತ್ತಿ ನೋಡೋಣ, ಹಿಂದೂಗಳ ದೇವಾಲಯಗಳು ಬಿಟ್ಟಿ ಬಿದ್ದಿವೆಯಾ ಅಲ್ಲಿನ ಹಣ ತೆಗೆದುಕೊಂಡು ಹೋಗಲು ? ಎಂದು ಸವಾಲೆಸೆದರು.