ರೈತರಿಗೆ ಸರ್ಕಾರ ಪಂಪ್ ಸೆಟ್ ಸಲಕರಣೆ ಉಚಿತ ಕೊಡಬೇಕು ; ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಸಂಗಣ್ಣ ಕರಡಿ..!
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿ
ಕೊಪ್ಪಳ: ತೀವ್ರ ಬರದಿಂದ ರೈತರು ಬದುಕೋದೆ ಕಷ್ಟವಾಗಿದೆ, ಅಂತಹದ್ದರಲ್ಲಿ ಸೆಪ್ಟಂಬರ್ 22 ರಿಂದ ಬಂದ ರೈತರ ಅರ್ಜಿಗಳಿಗೆ ಪಂಪ್ ಸೆಟ್ ಸಲಕರಣೆ ಉಚಿತ ಕೊಡೋದಿಲ್ಲ ಎಂದು ರಾಜ್ಯ ಸರಕಾರ ಆದೇಶ ಮಾಡಿದೆ. ಇದು ರೈತರಿಗೆ ಬರೆ ಎಳೆದಿದೆ. ಸರಕಾರ ರೈತ ವಿರೋಧಿಯಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಕಿಡಿಕಾರಿದರು.
ರೈತರ ಕೃಷಿ ಪಂಪುಸೆಟ್ಗಳಿಗೆ ಪರಿವರ್ತಕ ಉಚಿತ ನೀಡುವ ಯೋಜನೆ ರದ್ದು ಮಾಡಿರುವ ಕ್ರಮ, ರೈತರಿಗೆ 10 ತಾಸು ವಿದ್ಯುತ್ ನೀಡಲು ಆಗ್ರಹಿಸಿದರು, ದುರಸ್ತಿ ಪರಿವರ್ತಕಗಳ ಕೂಡಲೇ ಬದಲಾಯಿಸಿಕೊಡಬೇಕು ಎಂಬ ಬೇಡಿಕೆಯೊಂದಿಗೆ ಜಿಲ್ಲಾಡಳಿತ ಭವನದ ಮುಂದೆ ಬಿಜೆಪಿ ಜಿಲ್ಲೆ ಘಟಕದ ಸಹಯೋಗದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಮಾತನಾಡಿ ಈ ಕುರಿತು ಸಿಎಂರವರ ತಂದರೂ ಅವರು ಬೇಜವಬ್ದಾರಿಯಿಂದ ಹೇಳಿಕೆ ನೀಡಿದ್ದಾರೆ. ಈ ಆದೇಶವನ್ನು ಸರಕಾರ ರದ್ದುಪಡಿಸಿ ಹಿಂದಿನ ವ್ಯವಸ್ಥೆಯನ್ನು ಮುಂದುವರೆಸಬೇಕು. ಅಲ್ಲಿಯವರೆಗೂ ನನ್ನ ಉಪವಾಸ ಸತ್ಯಾಗ್ರಹ ಮುಂದುವರೆಯುತ್ತದೆ. ಹಗಲು ರಾತ್ರಿ ಉಪವಾಸ ಸತ್ಯಾಗ್ರಹ ಮುಂದುವರೆಸುತ್ತೇನೆ. ರದ್ದುಪಡಿಸಿ ಆದೇಶ ಮಾಡಿದರೆ ಮಾತ್ರ ಉಪವಾಸ ಸತ್ಯಾಗ್ರಹ ಕೈಬಿಡುತ್ತೇನೆ. ರೈತರ ಬೆಂಬಲಕ್ಕೆ ನಿಲ್ಲಬೇಕು ಎಂಬ ಉದ್ದೇಶದಿಂದ ನಾನು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದರು.
ಈ ಹೋರಾಟದಲ್ಲಿ ಪಕ್ಷದ ಮುಖಂಡರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ರೈತರಿಗೆ ಗುಣಮಟ್ಟದ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ತೀವ್ರ ಬರವಿದೆ. ರಾಜ್ಯ ಸರಕಾರ ಕೇವಲ ಮೋದಿ ಟೀಕೆ ಮಾಡೋದರಲ್ಲಿ ಕಾಲಕಳೆಯುತ್ತಿದೆ. ಎಸ್ ಡಿಆರ್ಎಫ್ನಿಂದ ರೈತರಿಗೆ ಪರಿಹಾರ ನೀಡಬೇಕು. ಈಗ ಕೇವಲ 11 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಮಾನ ಮಾರ್ಯಾದೆ ಇದ್ದರೆ ಸರಕಾರ ತಕ್ಷಣ ರೈತ ನೆರವಿಗೆ ಬರಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿ ತೀವ್ರ ಬರವಿದ್ದರೂ ಜಿಲ್ಲಾ ಮಂತ್ರಿಗಳು ಸಭೆ ನಡೆಸುತ್ತಿಲ್ಲ. ಬರಪೀಡಿತ ಪ್ರದೇಶಕ್ಕೆ ಹೋಗುತ್ತಿಲ್ಲ. ವಿದ್ಯುತ್ ಸಮಸ್ಯೆ. ಮಳೆ ಕೊರತೆಯಿಂದ ರೈತ ಸಂಕಷ್ಟದಲ್ಲಿದ್ದಾನೆ. ಇಂಥ ಸಂದರ್ಭದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ರೈತರ ಕೃಷಿ ಪಂಪುಸೆಟ್ಗಳಿಗೆ ಪರಿವರ್ತಕ ಉಚಿತ ನೀಡುವ ಯೋಜನೆ ರದ್ದು ಮಾಡಿರುವ ಕ್ರಮ, ರೈತರಿಗೆ 10 ತಾಸು ವಿದ್ಯುತ್ ನೀಡಲು ಆಗ್ರಹಿಸಿದರು, ದುರಸ್ತಿ ಪರಿವರ್ತಕಗಳ ಕೂಡಲೇ ಬದಲಾಯಿಸಿಕೊಡಬೇಕು ಎಂಬ ಬೇಡಿಕೆಯೊಂದಿಗೆ ಜಿಲ್ಲಾಡಳಿತ ಭವನದ ಮುಂದೆ ಬಿಜೆಪಿ ಜಿಲ್ಲೆ ಘಟಕದ ಸಹಯೋಗದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಮಾತನಾಡಿ ಈ ಕುರಿತು ಸಿಎಂರವರ ತಂದರೂ ಅವರು ಬೇಜವಬ್ದಾರಿಯಿಂದ ಹೇಳಿಕೆ ನೀಡಿದ್ದಾರೆ. ಈ ಆದೇಶವನ್ನು ಸರಕಾರ ರದ್ದುಪಡಿಸಿ ಹಿಂದಿನ ವ್ಯವಸ್ಥೆಯನ್ನು ಮುಂದುವರೆಸಬೇಕು. ಅಲ್ಲಿಯವರೆಗೂ ನನ್ನ ಉಪವಾಸ ಸತ್ಯಾಗ್ರಹ ಮುಂದುವರೆಯುತ್ತದೆ. ಹಗಲು ರಾತ್ರಿ ಉಪವಾಸ ಸತ್ಯಾಗ್ರಹ ಮುಂದುವರೆಸುತ್ತೇನೆ. ರದ್ದುಪಡಿಸಿ ಆದೇಶ ಮಾಡಿದರೆ ಮಾತ್ರ ಉಪವಾಸ ಸತ್ಯಾಗ್ರಹ ಕೈಬಿಡುತ್ತೇನೆ. ರೈತರ ಬೆಂಬಲಕ್ಕೆ ನಿಲ್ಲಬೇಕು ಎಂಬ ಉದ್ದೇಶದಿಂದ ನಾನು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದರು.
ಈ ಹೋರಾಟದಲ್ಲಿ ಪಕ್ಷದ ಮುಖಂಡರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ರೈತರಿಗೆ ಗುಣಮಟ್ಟದ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ತೀವ್ರ ಬರವಿದೆ. ರಾಜ್ಯ ಸರಕಾರ ಕೇವಲ ಮೋದಿ ಟೀಕೆ ಮಾಡೋದರಲ್ಲಿ ಕಾಲಕಳೆಯುತ್ತಿದೆ. ಎಸ್ ಡಿಆರ್ಎಫ್ನಿಂದ ರೈತರಿಗೆ ಪರಿಹಾರ ನೀಡಬೇಕು. ಈಗ ಕೇವಲ 11 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಮಾನ ಮಾರ್ಯಾದೆ ಇದ್ದರೆ ಸರಕಾರ ತಕ್ಷಣ ರೈತ ನೆರವಿಗೆ ಬರಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿ ತೀವ್ರ ಬರವಿದ್ದರೂ ಜಿಲ್ಲಾ ಮಂತ್ರಿಗಳು ಸಭೆ ನಡೆಸುತ್ತಿಲ್ಲ. ಬರಪೀಡಿತ ಪ್ರದೇಶಕ್ಕೆ ಹೋಗುತ್ತಿಲ್ಲ. ವಿದ್ಯುತ್ ಸಮಸ್ಯೆ. ಮಳೆ ಕೊರತೆಯಿಂದ ರೈತ ಸಂಕಷ್ಟದಲ್ಲಿದ್ದಾನೆ. ಇಂಥ ಸಂದರ್ಭದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.