ಶಾಸಕರು ಬರೆದ ಪತ್ರದಲ್ಲಿ ಸಚಿವರ ಬಗ್ಗೆ ಪ್ರಸ್ತಾಪಿಸಿಲ್ಲ, ಸಭೆಗೆ ಕೇಳಿದ್ದೇವೆ: ಬಸವರಾಜ ರಾಯರಡ್ಡಿ
1046 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ನಾನು ಸೇರಿದಂತೆ ನಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಈಗ ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯಲು ಕುಮಾರಸ್ವಾಮಿ, ಬಿಜೆಪಿ ಯತ್ನಿಸುತ್ತಿದೆ ಎಂಬ ಡಿ ಕೆ ಶಿವಕುಮಾರ್ ಹೇಳಿಕೆ ನನಗೆ ಮಾಹಿತಿ ಇಲ್ಲ. ಈ ಕಾರ್ಯಾಚರಣೆಯಲ್ಲಿ ನಾನಿಲ್ಲ ಎಂದು ಯಲಬುರ್ಗಾ ಶಾಸಕರೂ ಆಗಿರುವ ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಅವರು ಭಾನಾಪುರದಲ್ಲಿ ಮಾತನಾಡಿ ಐದು ವರ್ಷಕ್ಕೆ ನಾವೆಲ್ಲ ಆಯ್ಕೆಯಾಗಿದ್ದೇವೆ. ಕಾಂಗ್ರೆಸ್ ಸದಸ್ಯ ಬೇರೆ ಪಕ್ಷಕ್ಕೆ ಹೋಗುವಂಥ ಸ್ಥಿತಿಯಲ್ಲಿಲ್ಲ. ನನಗೆ ಕುಮಾರಸ್ವಾಮಿ ಅವರ ಬಗ್ಗೆ ಗೊತ್ತಿಲ್ಲ. ಕುಮಾರಸ್ವಾಮಿ ಅವರು ಸಿಂಗಾಪುರದಿಂದ ಕಾರ್ಯಾಚರಣೆ ಮಾಡುತ್ತಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ನಾನು ಆ ಕಾರ್ಯಾಚರಣೆಯಲ್ಲಿ ಇನ್ವಾಲ್ ಆಗಿಲ್ಲ. ಆಗುವುದಿಲ್ಲ. ಅಂತಹ ಆಲೋಚನೆಯೂ ನನ್ನಲ್ಲಿಲ್ಲ ಎಂದರು.
ಡಿಕೆಶಿ ಅವರು ಉಪಮುಖ್ಯಮಂತ್ರಿಗಳು. ಇಂಟೆಲಿಜೆನ್ಸಿ ಮಾಹಿತಿ ಅವರಿಗೆ ಇರಬಹುದು. ಆ ವಿಷಯದ ಬಗ್ಗೆ ನನಗೆ ಏನು ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಕೆಳಮಟ್ಟಕ್ಕೆ ಇಳಿಯೋದಿಲ್ಲ ಎಂದರು. ಆಳಂದ ಶಾಸಕರು ಹಿರಿಯ ಸದಸ್ಯರು. ಅವರು ಸೇರಿದಂತೆ ಕೆಲ ಹಿರಿಯ ಶಾಸಕರು ತಮ್ಮ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದರು.ಯಾರು ಅವರು ಸಚಿವರ ಬಗ್ಗೆ, ಶಾಸಕರ ಬಗ್ಗೆ ಬರೆದಿಲ್ಲ. ನಮ್ಮ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಬರೆದಿದ್ದಾರೆ. ನನಗೆ ಯಾರೊಂದಿಗೂ, ಯಾವ ಸಮಸ್ಯೆಯೂ ಇಲ್ಲ. ಶಾಸಕಾಂಗದ ಪಕ್ಷದ ಸಭೆ ಕರೆದು ಚರ್ಚೆ ಮಾಡಿ ಎಂದು ಹೇಳಿದ್ದರಲ್ಲಿ ಏನು ತಪ್ಪಿಲ್ಲ. ನಮ್ಮ ಪಕ್ಷದಲ್ಲಿ ಅದು ಚರ್ಚೆಯಾಗುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಅವರೊಂದಿಗೆ ಚರ್ಚೆ ಮಾಡಿದರೆ ತಪ್ಪೇನಿಲ್ಲ ಎಂದರು.
ಅವರು ಭಾನಾಪುರದಲ್ಲಿ ಮಾತನಾಡಿ ಐದು ವರ್ಷಕ್ಕೆ ನಾವೆಲ್ಲ ಆಯ್ಕೆಯಾಗಿದ್ದೇವೆ. ಕಾಂಗ್ರೆಸ್ ಸದಸ್ಯ ಬೇರೆ ಪಕ್ಷಕ್ಕೆ ಹೋಗುವಂಥ ಸ್ಥಿತಿಯಲ್ಲಿಲ್ಲ. ನನಗೆ ಕುಮಾರಸ್ವಾಮಿ ಅವರ ಬಗ್ಗೆ ಗೊತ್ತಿಲ್ಲ. ಕುಮಾರಸ್ವಾಮಿ ಅವರು ಸಿಂಗಾಪುರದಿಂದ ಕಾರ್ಯಾಚರಣೆ ಮಾಡುತ್ತಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ನಾನು ಆ ಕಾರ್ಯಾಚರಣೆಯಲ್ಲಿ ಇನ್ವಾಲ್ ಆಗಿಲ್ಲ. ಆಗುವುದಿಲ್ಲ. ಅಂತಹ ಆಲೋಚನೆಯೂ ನನ್ನಲ್ಲಿಲ್ಲ ಎಂದರು.
ಡಿಕೆಶಿ ಅವರು ಉಪಮುಖ್ಯಮಂತ್ರಿಗಳು. ಇಂಟೆಲಿಜೆನ್ಸಿ ಮಾಹಿತಿ ಅವರಿಗೆ ಇರಬಹುದು. ಆ ವಿಷಯದ ಬಗ್ಗೆ ನನಗೆ ಏನು ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಕೆಳಮಟ್ಟಕ್ಕೆ ಇಳಿಯೋದಿಲ್ಲ ಎಂದರು. ಆಳಂದ ಶಾಸಕರು ಹಿರಿಯ ಸದಸ್ಯರು. ಅವರು ಸೇರಿದಂತೆ ಕೆಲ ಹಿರಿಯ ಶಾಸಕರು ತಮ್ಮ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದರು.ಯಾರು ಅವರು ಸಚಿವರ ಬಗ್ಗೆ, ಶಾಸಕರ ಬಗ್ಗೆ ಬರೆದಿಲ್ಲ. ನಮ್ಮ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಬರೆದಿದ್ದಾರೆ. ನನಗೆ ಯಾರೊಂದಿಗೂ, ಯಾವ ಸಮಸ್ಯೆಯೂ ಇಲ್ಲ. ಶಾಸಕಾಂಗದ ಪಕ್ಷದ ಸಭೆ ಕರೆದು ಚರ್ಚೆ ಮಾಡಿ ಎಂದು ಹೇಳಿದ್ದರಲ್ಲಿ ಏನು ತಪ್ಪಿಲ್ಲ. ನಮ್ಮ ಪಕ್ಷದಲ್ಲಿ ಅದು ಚರ್ಚೆಯಾಗುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಅವರೊಂದಿಗೆ ಚರ್ಚೆ ಮಾಡಿದರೆ ತಪ್ಪೇನಿಲ್ಲ ಎಂದರು.