ಕೊಪ್ಪಳ: ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಯೋಜನೆ ಸಿದ್ಧ, ಅಕ್ಕ ಪಕ್ಕದ ರಾಜ್ಯಗಳ ಒಪ್ಪಿಗೆ ಯಾವಾಗ?
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿ
ಕೊಪ್ಪಳ: ಅಧಿಕ ಪ್ರಮಾಣದಲ್ಲಿ ಹೂಳು ತುಂಬಿರುವ ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಿಸಿ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ನೀರು ತಲುಪಿಸುವ ಯೋಜನೆಗೆ ಆಂಧ್ರ ಪ್ರದೇಶ ಸರಕಾರ ಒಪ್ಪಿಗೆ ನೀಡಿಲ್ಲ. ಈ ಹಿಂದೆ ಅವರಿಗೆ ಕಾಲುವೆ ಅಗಲೀಕರಣಕ್ಕೆ ರಾಜ್ಯ ಸರಕಾರ ಒಪ್ಪಿಗೆ ನೀಡದೆ ಇರುವುದಕ್ಕೆ ಈಗ ಅವರು ಬ್ಯಾಲೆನ್ಸಿಂಗ್ ರಿಸರ್ವಾಯರ್ಗೆ ಒಪ್ಪಿಗೆ ನೀಡುತ್ತಿಲ್ಲ. ಈ ಕುರಿತು ಆಡಳಿತ ಹಾಗೂ ಪ್ರತಿಪಕ್ಷಗಳ ಮಧ್ಯೆ ವಾಗ್ಸಮರ ನಡೆಯುತ್ತಿದೆ.
ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಈಗ 34 ಟಿಎಂಸಿ ಹೂಳು ತುಂಬಿದೆ. ಈಗ 100.897 ಟಿಎಂಸಿ ಮಾತ್ರ ನೀರು ನಿಲ್ಲುತ್ತದೆ. ಈ ಮಧ್ಯೆ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ಪೋತ್ನಾಳ ನಂತರ ಮುಂದಿನ ಭಾಗಕ್ಕೆ ನೀರು ಅಲಭ್ಯವಾಗುತ್ತಿದೆ. ಸಿರವಾರ, ಮಾನವಿ ಹಾಗು ರಾಯಚೂರು ತಾಲೂಕುಗಳಲ್ಲಿ ಎಡದಂಡೆ ನಾಲೆಯ ಪ್ರದೇಶದ ಅಚ್ಚುಕಟ್ಟು ಪ್ರದೇಶ ಹೆಸರಿಗೆ ಮಾತ್ರ ನೀರಾವರಿ ಎಂಬಂತೆ ಇದೆ. ಜಲಾಶಯದಲ್ಲಿ ಹೂಳು ತೆಗೆಯುವುದು ಅಸಾಧ್ಯವಾಗಿರುವುದರಿಂದ ನವಲಿ ಬಳಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಯೋಜನೆ ಸಿದ್ದವಾಗಿದೆ.
ಯಡಿಯೂರಪ್ಪ ಸರಕಾರದಲ್ಲಿ ನವಲಿ ಜಲಾಶಯದ ಯೋಜನೆ ತಯಾರಿಕೆಗಾಗಿ 13 ಕೋಟಿ ರೂಪಾಯಿ ನೀಡಿದ್ದರು. ಬೊಮ್ಮಾಯಿ ಸರಕಾರದಲ್ಲಿ ಯೋಜನೆಯ ಆರಂಭಕ್ಕೆ 1000 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ ಇಲ್ಲಿ ಯೋಜನೆ ಆರಂಭಕ್ಕೆ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳು ಒಪ್ಪಿಗೆ ಸಿಗದೆ ಯೋಜನೆ ನೆನೆಗುದಿಗೆ ಬಿದ್ದಿವೆ.
ಮೂರು ರಾಜ್ಯಗಳ ಮಧ್ಯೆ ನೀರು ಹಂಚಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಯೋಜನೆ ಆರಂಭಿಸಿದರೂ ಮೂರು ರಾಜ್ಯಗಳು ಒಪ್ಪಿಗೆ ನೀಡಬೇಕು. ಈ ಕುರಿತು ರಾಜ್ಯ ಸರಕಾರ ಆಂಧ್ರ ಸರಕಾರಕ್ಕೆ ಪತ್ರ ಬರೆದರೂ ಆ ಸರಕಾರಕ್ಕೆ ಜಲಾಶಯ ನಿರ್ಮಾಣಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಇದಕ್ಕೆ ಕಾರಣ ಈ ಹಿಂದೆ ಆಂಧ್ರಕ್ಕೆ ಹೋಗುವ ತುಂಗಭದ್ರಾ ಮೇಲ್ಮಟ್ಟ ಕಾಲುವೆಯನ್ನು 10 ಸಾವಿರ ಕ್ಯೂಸೆಕ್ ಹರಿಯುವಂತೆ ಅಗಲೀಕರಣ ಮಾಡಲು ಮುಂದಾಗಿತ್ತು. ಆದರೆ ಆಗ ರಾಜ್ಯ ಸರಕಾರ ಈ ಯೋಜನೆಗೆ ಒಪ್ಪಿಗೆ ನೀಡದೆ ಇರುವುದು ಈಗ ಆಂಧ್ರ ಸರಕಾರವು ಪ್ರತೀಕಾರವಾಗಿ ನವಲಿ ಜಲಾಶಯಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎನ್ನಲಾಗುತ್ತಿದೆ.
ಈ ಕುರಿತು ಮಾತನಾಡಿದ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನವಲಿ ಜಲಾಶಯಕ್ಕೆ ಒಪ್ಪಿಗೆ ನೀಡಿಲ್ಲ. ಮತ್ತೊಮ್ಮೆ ಪತ್ರ ಬರೆಯುತ್ತೇವೆ ಎಂದಿದ್ದಾರೆ.
ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಈಗ 34 ಟಿಎಂಸಿ ಹೂಳು ತುಂಬಿದೆ. ಈಗ 100.897 ಟಿಎಂಸಿ ಮಾತ್ರ ನೀರು ನಿಲ್ಲುತ್ತದೆ. ಈ ಮಧ್ಯೆ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ಪೋತ್ನಾಳ ನಂತರ ಮುಂದಿನ ಭಾಗಕ್ಕೆ ನೀರು ಅಲಭ್ಯವಾಗುತ್ತಿದೆ. ಸಿರವಾರ, ಮಾನವಿ ಹಾಗು ರಾಯಚೂರು ತಾಲೂಕುಗಳಲ್ಲಿ ಎಡದಂಡೆ ನಾಲೆಯ ಪ್ರದೇಶದ ಅಚ್ಚುಕಟ್ಟು ಪ್ರದೇಶ ಹೆಸರಿಗೆ ಮಾತ್ರ ನೀರಾವರಿ ಎಂಬಂತೆ ಇದೆ. ಜಲಾಶಯದಲ್ಲಿ ಹೂಳು ತೆಗೆಯುವುದು ಅಸಾಧ್ಯವಾಗಿರುವುದರಿಂದ ನವಲಿ ಬಳಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಯೋಜನೆ ಸಿದ್ದವಾಗಿದೆ.
ಯಡಿಯೂರಪ್ಪ ಸರಕಾರದಲ್ಲಿ ನವಲಿ ಜಲಾಶಯದ ಯೋಜನೆ ತಯಾರಿಕೆಗಾಗಿ 13 ಕೋಟಿ ರೂಪಾಯಿ ನೀಡಿದ್ದರು. ಬೊಮ್ಮಾಯಿ ಸರಕಾರದಲ್ಲಿ ಯೋಜನೆಯ ಆರಂಭಕ್ಕೆ 1000 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ ಇಲ್ಲಿ ಯೋಜನೆ ಆರಂಭಕ್ಕೆ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳು ಒಪ್ಪಿಗೆ ಸಿಗದೆ ಯೋಜನೆ ನೆನೆಗುದಿಗೆ ಬಿದ್ದಿವೆ.
ಮೂರು ರಾಜ್ಯಗಳ ಮಧ್ಯೆ ನೀರು ಹಂಚಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಯೋಜನೆ ಆರಂಭಿಸಿದರೂ ಮೂರು ರಾಜ್ಯಗಳು ಒಪ್ಪಿಗೆ ನೀಡಬೇಕು. ಈ ಕುರಿತು ರಾಜ್ಯ ಸರಕಾರ ಆಂಧ್ರ ಸರಕಾರಕ್ಕೆ ಪತ್ರ ಬರೆದರೂ ಆ ಸರಕಾರಕ್ಕೆ ಜಲಾಶಯ ನಿರ್ಮಾಣಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಇದಕ್ಕೆ ಕಾರಣ ಈ ಹಿಂದೆ ಆಂಧ್ರಕ್ಕೆ ಹೋಗುವ ತುಂಗಭದ್ರಾ ಮೇಲ್ಮಟ್ಟ ಕಾಲುವೆಯನ್ನು 10 ಸಾವಿರ ಕ್ಯೂಸೆಕ್ ಹರಿಯುವಂತೆ ಅಗಲೀಕರಣ ಮಾಡಲು ಮುಂದಾಗಿತ್ತು. ಆದರೆ ಆಗ ರಾಜ್ಯ ಸರಕಾರ ಈ ಯೋಜನೆಗೆ ಒಪ್ಪಿಗೆ ನೀಡದೆ ಇರುವುದು ಈಗ ಆಂಧ್ರ ಸರಕಾರವು ಪ್ರತೀಕಾರವಾಗಿ ನವಲಿ ಜಲಾಶಯಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎನ್ನಲಾಗುತ್ತಿದೆ.
ಈ ಕುರಿತು ಮಾತನಾಡಿದ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನವಲಿ ಜಲಾಶಯಕ್ಕೆ ಒಪ್ಪಿಗೆ ನೀಡಿಲ್ಲ. ಮತ್ತೊಮ್ಮೆ ಪತ್ರ ಬರೆಯುತ್ತೇವೆ ಎಂದಿದ್ದಾರೆ.